janadhvani

Kannada Online News Paper

ಮುಹಿಮ್ಮಾತ್: ತ್ವಾಹಿರುಲ್ ಅಹ್ದಲ್ ತಂಙಳ್ ಉರೂಸಿಗೆ ಇಂದು ಚಾಲನೆ- ಮಾ.13ಕ್ಕೆ ಸನದುದಾನ

ಕಾಸರಗೋಡು; ಪ್ರಮುಖ ಆಧ್ಯಾತ್ಮಿಕ ವಿದ್ವಾಂಸರೂ, ಮುಹಿಮ್ಮಾತ್ ಶಿಲ್ಪಿಯೂ ಆದ ತ್ವಾಹಿರುಲ್ ಅಹ್ದಲ್ ತಂಙಳ್ರವರ 16ನೇ ಉರೂಸ್ ಮುಬಾರಕ್ ಕಾರ್ಯಕ್ರಮವು ಮಾರ್ಚ್ 8 ಮಂಗಳವಾರ ಮಖಾಂ ಝಿಯಾರತಿನೊಂದಿಗೆ ಆರಂಭವಾಗಲಿದೆ.ಮಾರ್ಚ್ 13 ರವಿವಾರ ಸಂಜೆ ಸನದುದಾನ ಮತ್ತು ಆಧ್ಯಾತ್ಮಿಕ ಸಮ್ಮೇಳನದೊಂದಿಗೆ ಸಮಾಪ್ತಿಗೊಳ್ಳಲಿದೆ.

6 ದಿನಗಳಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಪ್ರಮುಖ ವಿದ್ವಾಂಸರೂ ನೇತಾರರೂ ಭಾಗವಹಿಸುವರು. ಮಂಗಳವಾರ ಬೆಳಿಗ್ಗೆ ನೂರುಲ್ ಉಲಮಾ ಮಖಾಂ, ಎಟ್ಟಿಕ್ಕುಳಂ ತಾಜುಲ್ ಉಲಮಾ ಮಖಾಂ, ಮಾಟ್ಟೂಲ್ ಳಿಯಾಉಲ್ ಮುಸ್ತಫಾ ಮಖಾಂಗಳ ಝಿಯಾರತ್ಗಳಿಗೆ ಸಯ್ಯಿದ್ ಇಬ್ರಾಹೀಂ ಹಾದಿ ಸಯ್ಯಿದ್ ಮುಹಮ್ಮದ್ ಜುನೈದ್ ಬುಖಾರಿ, ಸಯ್ಯಿದ್ ಹಾಮಿದ್ ಅನ್ವರ್ ನೇತೃತ್ವ ನೀಡಲಿದ್ದಾರೆ.ಸಾಯಂಕಾಲ 3 ಗಂಟೆಗೆ ಅಹ್ದಲ್ ಮಖಾಂ ಝಿಯಾರತಿಗೆ ಸಯ್ಯಿದ್ ಪಿ ಎಸ್ ಆಟ್ಟಕ್ಕೋಯ ತಂಙಳ್ ಪಂಜಿಕ್ಕಲ್ ನೇತೃತ್ವ ನೀಡಲಿದ್ದಾರೆ.

ಖತ್ಮುಲ್ ಖುರ್ಆನ್ ಆರಂಭಿಸುವ ಕಾರ್ಯಕ್ರಮಕ್ಕೆ ಸಯ್ಯಿದ್ ಕುಂಞಿಕ್ಕೋಯ ತಂಙಳ್ ಮುಟ್ಟಂ ನೇತೃತ್ವ ನೀಡಲಿದ್ದಾರೆ. ಸಯ್ಯಿದ್ ಕೆ ಎಸ್ ಆಟ್ಟಕ್ಕೋಯ ತಂಙಳ್ ಕುಂಬೋಳ್ ಉರೂಸ್ ಉದ್ಘಾಟಿಸಲಿದ್ದಾರೆ. ಸಯ್ಯಿದ್ ಜಲಾಲುದ್ದೀನ್ ಬುಖಾರಿ ಉದ್ಬೋದನೆ ನಡೆಸುವರು. ರಾತ್ರಿ 8ಕ್ಕೆ ಧಾರ್ಮಿಕ ಪ್ರವಚನ ಉದ್ಘಾಟನೆಯನ್ನು ಅತಾಉಲ್ಲಾ ತಂಙಳ್ ಉದ್ಯಾವರ ನಿರ್ವಹಿಸಲಿದ್ದಾರೆ.ಡಾ. ಮುಹಮ್ಮದ್ ಫಾರೂಖ್ ನಈಮಿ ಕೊಲ್ಲಂ ಪ್ರಬಾಷಣ ನಡೆಸಲಿದ್ದಾರೆ.

ಮಾರ್ಚ್ 12ರ ತನಕ ರಾತ್ರಿ 8ಕ್ಕೆ ನಡೆಯುವ ಧಾರ್ಮಿಕ ಪ್ರವಚನದಲ್ಲಿ ಕೂಟಂಬಾರ ಅಬ್ದುಲ್ ರಹ್ಮಾನ್ ದಾರಿಮಿ, ನೌಫಲ್ ಸಖಾಫಿ ಕಳಸ, ಅನಸ್ ಅಮಾನಿ ಕಾಮಿಲ್ ಸಖಾಫಿ ಪುಷ್ಪಗಿರಿ, ಡಾ |ಅಬ್ದುಲ್ ಸಲಾಂ ಮುಸ್ಲಿಯಾರ್ ದೇವರ್ಶೋಲ ಪ್ರಭಾಷಣ ನಡೆಸಲಿದ್ದಾರೆ.

ಮಾರ್ಚ್ 9 ರಂದು ಸಾಯಂಕಾಲ 4 ಗಂಟೆಗೆ ಬುರ್ದಾ ಮಜ್ಲಿಸ್, 10 ರಂದು ಸಾಯಂಕಾಲ 4 ಗಂಟೆಗೆ ಸ್ಮೃತಿ ಸಂಗಮ ಹಾಗೂ ರಾತ್ರಿ 7 ಗಂಟೆಗೆ ಸ್ವಲಾತ್ ಮಜ್ಲಿಸ್ ನಡೆಯಲಿದೆ. ಸಯ್ಯಿದ್ ಮುನೀರುಲ್ ಅಹ್ದಲ್ ಹಾಗೂ ಸಯ್ಯಿದ್ ಹುಸೈನುಲ್ ಅಮೀನುಲ್ ಅಹ್ದಲ್ ನೇತೃತ್ವ ನೀಡಲಿದ್ದಾರೆ. ಶುಕ್ರವಾರ ಸಂಜೆ 4 ಕ್ಕೆ ರಿಫಾಯೀ ರಾತೀಬಿಗೆ ಸಯ್ಯಿದ್ ಫಖ್ರುದ್ದೀನ್ ಹದ್ದಾದ್ ತಂಙಳ್ ನೇತೃತ್ವ ನೀಡಲಿದ್ದಾರೆ.

ಶನಿವಾರ ಪೂರ್ವಾಹ್ನ 11 ಗಂಟೆಗೆ ಸ್ನೇಹ ಸಂಗಮವು ಬಿ ಎಸ್ ಅಬ್ದುಲ್ಲಾ ಕುಂಞಿ ಫೈಝಿಯವರ ಅಧ್ಯಕ್ಷತೆಯಲ್ಲಿ ಸಂಸದ ರಾಜ್ ಮೋಹನ್ ಉದ್ಘಾಟಿಸಲಿದ್ದಾರೆ. ಶಾಸಕರಾದ ಯು.ಟಿ ಖಾದರ್, ಎ.ಕೆ.ಎಂ ಅಶ್ರಫ್, ಎನ್.ಎ ನೆಲ್ಲಿಕ್ಕುನ್ನು, ಸಿ.ಎಚ್ ಕುಂಞಂಬು, ಹಾಗೂ ಸುಲೈಮಾನ್ ಕರಿವೆಲ್ಲೂರು ಮುಂತಾದವರು ಭಾಗವಹಿಸಲಿದ್ದಾರೆ. ಆ ದಿನ 4 ಗಂಟೆಗೆ ಮುಹ್ಯದ್ದೀನ್ ರಾತೀಬ್ಗೆ ಸಯ್ಯಿದ್ ಮುತ್ತುಕೋಯ ತಂಙಳ್ ಕಣ್ಣವಂ, ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ನೆತೃತ್ವ ನೀಡಲಿದ್ದಾರೆ.

ಆದಿತ್ಯವಾರ ಬೆಳಿಗ್ಗೆ ಸ್ಥಾನ ವಸ್ತ್ರ ವಿತರಣೆಗೆ ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ನೇತೃತ್ವ ನೀಡಲಿದ್ದಾರೆ. ಮುಹಮ್ಮದಲಿ ಸಖಾಫಿ ತೃಕರಿಪ್ಪೂರ್ ವಿಷಯ ಮಂಡನೆ ನಡೆಸಲಿದ್ದಾರೆ. ಬೆಳಿಗ್ಗೆ 11 ಕ್ಕೆ ಮೌಲಿದ್ ಮಜ್ಲಿಸ್ಗೆ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರ ನೆತೃತ್ವ ನೀಡಲಿದ್ದಾರೆ. ಮುಹಮ್ಮದ್ ರಫೀಖ್ ಸಅದಿ ದೇಲಂಪಾಡಿ ಭಾಷಣಗೆಯ್ಯುವರು. ಮಧ್ಯಾಹ್ನ 1.30 ಕ್ಕೆ ಖತಂ ದುಆ ಮಜ್ಲಿಸಿಗೆ ಸಯ್ಯದ್ ಶಹೀರ್ ತಂಙಳ್ ಬಾಖಾರಿ, ಸ್ವಾಲಿಹ್ ಸಅದಿ ತಳಿಪರಂಬ್ ನೇತೃತ್ವ ನೀಡುವರು.

ಭಾನುವಾರ ಸಂಜೆ 4:30 ಕ್ಕೆ ಮಹ್ಳರತುಲ್ ಬದ್ರಿಯ್ಯಾದೊಂದಿಗೆ ಸನದುದಾನ ಆಧ್ಯಾತ್ಮಿಕ ಸಮ್ಮೇಳನ ಆರಂಭವಾಗಲಿದೆ. ಸಯ್ಯದ್ ಅಲಿ ಬಾಫಖಿ ತಂಙಳ್ ಪ್ರಾರ್ಥನೆ ನಡೆಸಲಿದ್ದಾರೆ. ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ರವರ ಅಧ್ಯಕ್ಷತೆಯಲ್ಲಿ ಸಮಸ್ತ ಅಧ್ಯಕ್ಷರಾದ ರಈಸುಲ್ ಉಲಮಾ ಇ ಸುಲೈಮಾನ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಸನದುದಾನ ನಿರ್ವಹಿಸಿ ಇಂಡಿಯನ್ ಗ್ಯಾಂಡ್ ಮುಫ್ತಿ ಕಾಂತಪುರಂ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ಪ್ರಭಾಷಣ ನಡೆಸಲಿದ್ದಾರೆ. ಸಯ್ಯಿದ್ ಇಬ್ರಾಹಿಂ ಖಲೀಲ್ ಬುಖಾರಿ ತಂಙಳ್ ಹಾಗು ಪೆರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಸಯ್ಯಿದ್ ಮೊಹಮ್ಮದ್ ಇಬ್ರಾಹಿಂ ಪೂಕುಂಜಿ ತಂಙಳ್ ಸೈಯದ್ ತ್ವಾಹ ತಂಗಳ್, ಸೈಯದ್ ಶಿಹಾಬುದ್ದೀನ್ ತಂಙಳ್ ಮುತ್ತನ್ನೂರ್, ಸೈಯದ್ ಮುನೀರುಲ್ ಅಹ್ದಲ್ ತಂಙಳ್ ಎಪಿ ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕೋತ್, ಪಿ ಹೈದ್ರೋಸ್ ಮುಸ್ಲಿಯಾರ್ ಕೊಲ್ಲಂ, ವಿಪಿಎಂ ಫೈಝಿ ವಿಲ್ಲಾಪಲ್ಲಿ, ಹುಸೈನ್ ಸಅದಿ ಕೆ.ಸಿ.ರೋಡ್, ಅಬ್ದುಲ್ ರಶೀದ್ ಝೈನಿ ಕಕ್ಕಿಂಜೆ, ಲತ್ವೀಫ್ ಸಅದಿ ಶಿವಮೊಗ್ಗ, ನಿಝಾಮುದ್ದೀನ್ ಫಾಳಿಲಿ ಕೊಲ್ಲಂ ಹಾಗೂ ಸಿ.ಎನ್.ಜಾಫರ್ ಭಾಷಣ ಮಾಡಲಿದ್ದಾರೆ. ಏನೇಪೋಯ ಅಬ್ದುಲ್ಲಾ ಕುಂಞಿ ಹಾಜಿ ಅವರು ಉಡುಗೊರೆ ನೀಡಲಿದ್ದಾರೆ. ಈ ವರ್ಷ 116 ಹಿಮಮಿ ವಿದ್ವಾಂಸರು ಹಾಗು 27 ಹಾಫಿಳ್ಗಳು ಸನದ್ ಸ್ವೀಕರಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದವರು
ಸೈಯದ್ ಹಸನುಲ್ ಅಹ್ದಲ್ ತಂಙಳ್ (ಉಪಾಧ್ಯಕ್ಷರು, ಮುಹಿಮ್ಮ್ಮಾತ್)
ಬಿ ಎಸ್ ಅಬ್ದುಲ್ಲಾ ಕುಂಞಿ ಫೈಝಿ (ಪ್ರಧಾನ ಕಾರ್ಯದರ್ಶಿ ಮುಹಿಮ್ಮ್ಮಾತ್)
ಸಿ.ಐ ಅಮೀರಲಿ ಚೂರಿ (ಕೋಶಾಧಿಕಾರಿ, ಮುಹಿಮ್ಮ್ಮಾತ್)
ಅಬೂಬಕ್ಕರ್ ಕಾಮಿಲ್ ಸಖಾಫಿ (ಪ್ರಧಾನ ಸಂಚಾಲಕರು, ಸ್ವಾಗತ ಸಮಿತಿ)
ಸುಲೈಮಾನ್ ಕರಿವೆಲ್ಲೂರು (ಎಸ್.ಎಂ.ಎ ರಾಜ್ಯ ಕಾರ್ಯದರ್ಶಿ )
ಅಬ್ದುಲ್ ಖಾದಿರ್ ಸಖಾಫಿ (ಎಸ್ ವೈ ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ )
ವೈ.ಎಂ.ಅಬ್ದುಲ್ ರಹ್ಮಾನ್ ಅಹ್ಸನಿ (ಎಸ್.ಎಂ.ಎ ಜಿಲ್ಲಾ ಕಾರ್ಯದರ್ಶಿ )
ಅಬ್ದುಲ್ ಖಾದಿರ್ ಸಖಾಫಿ ಮೊಗ್ರಾಲ್ (ಪಿ.ಆರ್ ಕಾರ್ಯದರ್ಶಿ ಮುಹಿಮ್ಮಾತ್)
ಮೂಸಾ ಸಖಾಫಿ ಕಳತ್ತೂರು (ಸಂಚಾಲಕರು, ಪ್ರಚಾರ ಸಮಿತಿ)

error: Content is protected !! Not allowed copy content from janadhvani.com