janadhvani

Kannada Online News Paper

ರಿಯಾಜ್ ಮೌಲವಿ ಹತ್ಯೆ ಪ್ರಕರಣದ ನ್ಯಾಯಾಧೀಶರ ವರ್ಗಾವಣೆಗೆ ಕೆಟಿ ಜಲೀಲ್ ಟೀಕೆ

ರಿಯಾಜ್ ಮೌಲ್ವಿ ಹತ್ಯೆ ಪ್ರಕರಣದ ನ್ಯಾಯಾಧೀಶರ ವರ್ಗಾವಣೆಯನ್ನು ತೀವ್ರವಾಗಿ ಟೀಕಿಸಿರುವ ಶಾಸಕ ಡಾ. ಕೆ.ಟಿ.ಜಲೀಲ್, ಪಲಾಯನ ಮಾಡುವವರು ಹೇಡಿಗಳು, ಅಪರಾಧ ಭಾವ ಕಾಡಲಾರಂಭಿಸಿದರೆ ಅದು ನಿಲ್ಲುವುದಿಲ್ಲ ಎಂದು ಕೆ.ಟಿ.ಜಲೀಲ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಮಾಡಿದ ಕೆಲಸ ಸರಿಯೆಂದಾದರೆ ಭಯವೇಕೆ?. ಒಮ್ಮೆ ಆತ್ಮಸಾಕ್ಷಿಯು ಚುಚ್ಚಲು ಪ್ರಾರಂಭಿಸಿದರೆ, ಅದು ನಿಲ್ಲಲು ಸಾಧ್ಯವಿಲ್ಲ. ಕೊಚ್ಚಿಯಲ್ಲಾದರೂ ಕೊಯಿಲಾಂಡಿಯಲ್ಲಾದರೂ
ಎಂದು ಜಲೀಲ್ ಫೇಸ್ ಬುಕ್ ಮೂಲಕ ಪ್ರತಿಕ್ರಿಯಿಸಿದ್ದಾರೆ