ಮಂಗಳೂರು : ಮಹತ್ವ ಪೂರ್ಣ ಜನವರಿ 26 ನೇ ದಿನದ ರಾಷ್ಟ್ರೀಯ ಹಬ್ಬವಾದ ಗಣ ರಾಜ್ಯೋತ್ಸವ ಸಮಾರಂಭ ದಲ್ಲಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರದ ಟ್ಯಾ ಬ್ಲೋ ವಾಹನ ಸಂಚಲನ ಪ್ರದರ್ಶನವನ್ನು,ಪೆರೇಡ್ ನಿಂದ ಅನರ್ಹ ಗೊಳಿಸಿದ ಕೇಂದ್ರ ಸರಕಾರದ ನಡೆ ತೀವ್ರ ವಿಷಾದನೀಯ.
ನಾರಾಯಣ ಗುರುಗಳು ದಕ್ಷಿಣ ಭಾರತದಲ್ಲಿ ಹಿಂದುಳಿದ ಜನತೆಗೆ ಧಾರ್ಮಿಕ,ಆದ್ಯಾತ್ಮಿಕ ಮತ್ತು ಆರಾಧನಾ ಕೇಂದ್ರಗಳ ಪ್ರವೇಶ ಹಕ್ಕುಗಳನ್ನು ಸ್ಥಾಪಿಸಿದ ಓರ್ವ ಸಮುದಾಯ ಮಹಾತ್ಮ ಮೇರು ವ್ಯಕ್ತಿ ಯಾಗಿದ್ದಾರೆ. ಅವರ ಒಂದೇ ಮತ,ಕುಲ, ದೇವ ಪ್ರತಿಪಾದನೆ ಜಾಗತಿಕ ಮನ್ನಣೆ ಹೊಂದಿದ ಒಂದು ಪ್ರಭಲ ಸಿದ್ಧಾಂತವಾಗಿದೆ. ಆದುದರಿಂದ ನಾರಾಯಣ ಗುರುಗಳ ಸ್ತಬ್ಧ ಚಿತ್ರ ಗಣ ರಾಜ್ಯೋತ್ಸವ ಸಮಾರಂಭ ದಲ್ಲಿ ಸರ್ವ ರೀತಿಯಲ್ಲೂ ಕೂಡಾ ಅರ್ಹತೆ ಪಡೆಯಬೇಕಿತ್ತು.
ಅವರು ಭಾರತದ ಆದ್ಯಾತ್ಮಿ ಕ ಚರಿತ್ರೆಯ ಆಸ್ತಿ ಆಗಿದ್ದಾರೆ. ಅವರ ಪ್ರತಿಪಾದನೆಯ ಮೌಲ್ಯಗಳು ಎಂದೆಂದಿಗೂ ಶಾಶ್ವತ. ಅವರ ಸ್ತಬ್ಧ ಚಿತ್ರ ಪ್ರದರ್ಶನ ಅರ್ಹತೆ ಪಡೆಯಲೇ ಬೇಕಾಗಿದೆ. ಈ ಹಿಂದೆ ಚಾರಿತ್ರಿಕ ಸ್ವಾತಂತ್ರ ಹೋರಾಟಗಾರ ಹಜ್ರತ್ ಟಿಪ್ಪು ಸುಲ್ತಾನರ ಸ್ತಬ್ಧ ಚಿತ್ರ ಪ್ರದರ್ಶನ ಚಾಲನೆಯಲ್ಲಿ ಇತ್ತು, ಕ್ರಮೇಣ ಅಂತಹ ಪ್ರದರ್ಶನಗಳನ್ನೂ ಕೇಂದ್ರ ಸರಕಾರ ಇದೇ ರೀತಿ ಕೈಬಿಟ್ಟಿತ್ತು. ಭಾರತದ ಮಹತ್ವ ಪೂರ್ಣ ಚಾರಿತ್ರಿಕ ಮತ್ತು ಆದ್ಯಾತ್ಮೀಕ ವ್ಯಕ್ತಿಗಳ ಕಡೆಗಣನೆ ಈ ದೇಶದ ಜಾತ್ಯಾತೀತ ವೈಭವ ತೆ ಯನ್ನು ನಾಶ ಪಡಿಸುವ ಒಂದು ಷಡ್ಯಂತ್ರ ವಾಗಿದೆ. ಅದರ ಭಾಗವೇ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರ ಪ್ರದರ್ಶನ ವನ್ನು ಪೆರೇಡ್ ನಿಂದ ಅನರ್ಹತೆ ಗೊಳಿಸಿ ಹೊರ ಹಾಕಲಾಗಿದೆ . ಕೇಂದ್ರ ಸರಕಾರದ ಈ ನಡೆ ಜಾತ್ಯಾತೀತ ಮೌಲ್ಯಗಳ ಅವಹೇಳನ ವಾಗಿದೆ, ಮತ್ತು ಈ ವರ್ತನೆ ಖಂಡನೀಯ.
ಕೆ.ಅಶ್ರಫ್
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್