ಬೆಂಗಳೂರು, ಡಿಸೆಂಬರ್ 6: ಪಾನ್ ಕಾರ್ಡ್, ಆಧಾರ್ ಕಾರ್ಡ್ ಪಡೆದು ಸಾರ್ವಜನಿಕರ ಹೆಸರಿನಲ್ಲಿ ವಾಹನಗಳನ್ನು ಖರೀದಿ ಮಾಡಿ ವಂಚಿಸುವ ಜಾಲ ಪತ್ತೆಯಾಗಿದ್ದು, ನಗರದಲ್ಲಿ ಶುರುವಾಗಿರುವ ವಿಚಿತ್ರ ರೀತಿಯ ದೋಖಾಕ್ಕೆ ಸಾರ್ವಜನಿಕರು ಕಂಗಲಾಗಿದ್ದಾರೆ. ನಯೀಮ್ ತಾಜ್ ಈ ದೋಖಾಕ್ಕೆ ಒಳಗಾದ ವ್ಯಕ್ತಿ.
ಏನಿದು ಘಟನೆ?
ಖದೀಮರು ಚೈನ್ ಲಿಂಕ್ ಸ್ಕೀಮ್ ಇದೆ ಎಂದು ನಂಬಿಸಿ ನಯೀಮ್ ತಾಜ್ ಅವರಿಂದ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಪಡೆದು ಪುಲಕೇಶಿನಗರದ ಸಂಗೀತಾ ಶೋ ರೂಂ ನಲ್ಲಿ ಸದಸ್ಯರಾಗಿದ್ದೀರಿ ಎಂದು ಹೇಳಿ ಸಾವಿರ ರೂಪಾಯಿ ನೀಡಿದ್ದರು. ನಂತರ ಖದೀಮರು ಇನ್ನಷ್ಟು ಜನರನ್ನ ಸೇರಿಸಿದ್ರೆ ನಿಮಗೆ ಇದೆ ರೀತಿ ಹಣ ಬರುತ್ತೆ ಎಂದಿದ್ದರು. ಹಣದ ಆಸೆಗೆ ಒಳಗಾದ ನಜೀಮ್ ಇಪ್ಪತ್ತೈದು ಜನರನ್ನು ಈ ಹೊಸ ಸ್ಕಿಮ್ಗೆ ಸೇರಿಸಿದ್ದರು. ಇವರೆಲ್ಲರೂ ತಮ್ಮ ಅಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ಗಳನ್ನ ನಜೀಮ್ ಅವರಿಗೆ ನೀಡಿದ್ದರು.
ಇವೆಲ್ಲಾ ಆದ ಮೇಲೆ ಬ್ಯಾಂಕಿನವರು ನೀವು ವಾಹನ ಖರೀದಿ ಮಾಡಿದ್ದಿರಿ, ತಿಂಗಳ ಇಎಂಐ ಪಾವತಿಸಬೇಕು ಎಂದು ಕರೆ ಮಾಡಿದ್ದರು. ಯಾವುದೇ ವಾಹನ ಖರೀದಿ ಮಾಡದವರಿಗೆ ಇದೆಂತಹ ಇಎಂಐ ಎಂದು ವಿಚಾರಿಸಿದಾಗ ಈ ಖದೀಮರು ಸಾರ್ವಜನಿಕರಿಂದ ಪಡೆದ ದಾಖಲೆಗಳನ್ನು ಉಪಯೋಗಿಸಿ ಇಎಂಐನಲ್ಲಿ ವಾಹನಗಳ ಖರೀದಿ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ತಕ್ಷಣವೇ ಸಾರ್ವಜನಿಕರು ಪುಲಿಕೇಶಿನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.
ಇದೀಗ ಪೊಲೀಸರು ಸಾರ್ವಜನಿಕರ ದೂರಿನನ್ವಯ ಮಹಮ್ಮದ್ ಜೈನ್, ಲೋಕೇಶ್, ಕಾರ್ತಿಕ್ , ಮುಜಾಹಿದ್ ಹಫೀಜ್ , ಮನ್ಸೂರ್, ಎಂಬುವರ ಮೇಲೆ ಎಫ್ ಐ ಆರ್ ದಾಖಲು ಮಾಡಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
















ಇನ್ನಷ್ಟು ಸುದ್ದಿಗಳು
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ