janadhvani

Kannada Online News Paper

ಮಲಾರ್ ಹೆಲ್ಪ್ ಲೈನ್ ಮಹಾಸಭೆ- ಅಧ್ಯಕ್ಷರಾಗಿ ಕಬೀರ್ ಆಯ್ಕೆ

ಮಲಾರ್ ಹೆಲ್ಪ್ ಲೈನ್ ಸಂಸ್ಥೆಯ ಮಹಾಸಭೆ ದಿನಾಂಕ 25/10/21 ರ ಸೋಮವಾರದಂದು G ಸಮದ್ ರವರ ಮುಂದಾಳತ್ವದಲ್ಲಿ ಕಬೀರ್ ಮಲಾರ್ ರವರ ನಿವಾಸದಲ್ಲಿ ಜರುಗಿತು.ಮೂರನೇ ವರ್ಷದ ಸಂಪೂರ್ಣ ಲೆಕ್ಕಾಚಾರ ಹಾಗೂ ಸಂಸ್ಥೆಯ ಸಮಾಜಸೇವೆಗಳನ್ನು ಕಾರ್ಯದರ್ಶಿ MK ಫಾರೂಕ್ ರವರು ಮಂಡಿಸಿದರು.ಶಮೀರ್ ಟಿಪ್ಪುನಗರ ರವರು ಅಧ್ಯಕ್ಷೀಯ ನಿರ್ಗಮಣ ಭಾಷಣ ಮಾಡಿದರು.

ಮಹಾಸಭೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಸಂಘಟನಾ ಚತುರಾ,ಸಂಸ್ಥೆಗಳಲ್ಲಿ ಧುರೀಣ,ಸಮಾಜಸೇವಕ,ಪಾವೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅನ್ಸಾರ್ ಇನೋಳಿಯವರು ಸಂಘಟನೆ,ನಾಯಕತ್ವ ಹಾಗೂ ಪರಿಪಾಲನೆ, ಜವಾಬ್ದಾರಿಗಳು ಎಂಬ ವಿಷಯದಲ್ಲಿ ಮಾರ್ಗದರ್ಶನ ನೀಡಿದರು.ಸಂಸ್ಥೆಯ ಕರೆಗೆ ಓಗಟ್ಟು ಚುಣಾವನಾ ಉಸ್ತುವಾರಿಯಾಗಿ ಆಗಮಿಸಿದ ಪಾವೂರು ಗ್ರಾಮ ಪಂಚಾಯತ್ ಮಾಜೀ‌ ಸದಸ್ಯರಾದ ಸಂಸ್ಥೆಯ ಮಾರ್ಗದರ್ಶಕರಾದ MP ಹಸನ್ ರವರು ಚುಣಾವನಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ಅಧ್ಯಕ್ಷರಾಗಿ ಕಬೀರ್ ಮಲಾರ್, ಸಂಚಾಲಕರು ಶಮೀರ್ ಟಿಪ್ಪುನಗರ, ಉಪಾಧ್ಯಕ್ಷರಾಗಿ ಯಹಿಯಾ, ಪ್ರಧಾನ ಕಾರ್ಯದರ್ಶಿಯಾಗಿ G ಸಮದ್, ಕಾರ್ಯದರ್ಶಿಯಾಗಿ ರಿಝ್ವಾನ್, ಕೋಶಾಧಿಕಾರಿಯಾಗಿ MP ಫಾರೂಕ್, ಕಾರ್ಯಕಾರಿಣಿ ಸದಸ್ಯರಾಗಿ MP ಆಸಿಫ್, ಹನೀಫ್, MKಸಮದ್, ಮಿಸ್ಬಾಹ್‌ ಮುನ್ನ ಆಯ್ಕೆಯಾದರು.

ಮಲಾರ್ ಹೆಲ್ಪ್ ಲೈನ್ ಮಹಾಸಭೆಯಲ್ಲಿ ಫಾರೂಕ್ MK ಸ್ವಾಗತಿಸಿದರು,ಸಮದ್G ವಂದಿಸಿದರು.

error: Content is protected !! Not allowed copy content from janadhvani.com