janadhvani

Kannada Online News Paper

SჄS ಪಾಳ್ಯತ್ತಡ್ಕ ಬ್ರಾಂಚ್ ಗೆ ನೂತನ ಸಾರಥಿಗಳು

ಪುತ್ತೂರು: SჄS ಈಶ್ವರಮಂಗಲ ಸೆಂಟರ್ ಪಾಳ್ಯತ್ತಡ್ಕ ಬ್ರಾಂಚ್ ವಾರ್ಷಿಕ ಮಹಾ ಸಭೆಯು 2021 ಸೆಪ್ಟೆಂಬರ್ 19 ಆದಿತ್ಯವಾರ ಸಂಜೆ ಬ್ರಾಂಚ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಮುಸ್ಲಿಯಾರ್ ರವರ ಅಧ್ಯಕ್ಷತೆ ಯಲ್ಲಿ ತ್ವೈಬ ಸೆಂಟರ್ ನಲ್ಲಿ ನಡೆಯಿತು.

SჄS ಜಿಲ್ಲಾ ಕಾರ್ಯಕಾರಿ ಸದಸ್ಯರಾದ ಹಮೀದ್ ಕೊಯಿಲ ಕಾರ್ಯಕ್ರಮ ವನ್ನು ಉದ್ಘಾಟಿಸಿದರು.
ತ್ವೈಬ ಎಜುಕೇಶನಲ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಿಸ್ಬಾಹಿ ಆಶಂಶ ಭಾಷಣ ಮಾಡಿದರು.
ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಖ್ ಖಾಸಿಮಿ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು.ವೀಕ್ಷಕರಾಗಿ ಆಗಮಿಸಿದ ಅಬ್ದುಲ್ ಜಲೀಲ್ ಸಖಾಫಿ ಕರ್ನೂರು ಕಾರ್ಯಕ್ರಮ ನಿಯಂತ್ರಿಸಿದರು. ಕೆಸಿಎಫ್ ನಾಯಕರಾದ ಆದಂ.ಕೆ.ಪಿ, ಲತೀಫ್ ಕನ್ನಡ್ಕ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ನೂತನ ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಮುಸ್ಲಿಯಾರ್,ಉಪಾಧ್ಯಕ್ಷರಾಗಿ ಅಬ್ದುಲ್ಲ ಹಾಜಿ.ಕೆ.ಎಚ್ , ಪ್ರಧಾನ ಕಾರ್ಯದರ್ಶಿ ಯಾಗಿ ಅಬ್ದುಲ್ ರಝಾಖ್ ಖಾಸಿಮಿ,ಕೋಶಾದಿಕಾರಿ ಯಾಗಿ ಟಿ.ಪಿ.ಇಬ್ರಾಹಿಂ ಮುಸ್ಲಿಯಾರ್ ,ದಅ್ ವಾ ಕಾರ್ಯದರ್ಶಿ ಯಾಗಿ ಹುಸೈನ್ ಜೌಹರಿ, ಇಸಾಬ ಕಾರ್ಯದರ್ಶಿ ಯಾಗಿ ಬಶೀರ್.ಕೆ.ಪಿ ರವರನ್ನು ಆಯ್ಕೆ ಮಾಡಲಾಯಿತು.ಬ್ರಾಂಚ್ ವ್ಯಾಪ್ತಿಯ ಹಲವಾರು ಸದಸ್ಯರು ಭಾಗವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಖ್ ಖಾಸಿಮಿ ಸ್ವಾಗತಿಸಿ,ನೂತನ ಕೋಶಾಧಿಕಾರಿ ಟಿ.ಪಿ.ಇಬ್ರಾಹಿಂ ಮುಸ್ಲಿಯಾರ್ ವಂದಿಸಿದರು.

error: Content is protected !! Not allowed copy content from janadhvani.com