janadhvani

Kannada Online News Paper

SSF ಡಿ.ಜಿ ಕಟ್ಟೆ ಕೈರಂಗಳ ಯುನಿಟ್ ‘ಶಾಖಾ ಸಂಚಾರ್’ ಜಿಲ್ಲಾ ನಾಯಕರಿಂದ ಶಾಖೆಗಳಿಗೆ ಭೇಟಿ

ಕೈರಂಗಳ: SSF ಮುಡಿಪು ಡಿವಿಶನ್ ವ್ಯಾಪ್ತಿಯ ಮೋಂಟುಗೋಳಿ ಸೆಕ್ಟರ್ ಅಧಿನದಲ್ಲಿರುವ ಎಸ್ಸೆಸ್ಸೆಫ್ ಡಿ.ಜಿ ಕಟ್ಟೆ ಕೈರಂಗಳ ಯುನಿಟ್ ವತಿಯಿಂದ ಮೇಲ್ಘಟಕದ ಆದೇಶದಂತೆ ಶಾಖಾ ಸಂಚಾರ್ ಕಾಯ೯ಕ್ರಮವು ಯುನಿಟ್ ಅಧ್ಯಕ್ಷರಾದ ಅಸೀರ್ ರವರ ಅಧ್ಯಕ್ಷತೆಯಲ್ಲಿ ದಿನಾಂಕ 13/8/2021 ರಂದು ಮಗರಿಬ್ ನಮಾಝಿನ ಬಳಿಕ ತಾಜುಲ್ ಪುಖಾಹಾಹ್ ಮೆಮೋರಿಯಲ್ ಕಛೇರಿ ಡಿ.ಜಿ ಕಟ್ಟೆ ಯಲ್ಲಿ ನಡೆಯಿತು.

ದ.ಕ ಜಿಲ್ಲಾ ವೆಸ್ಟ್ ಇದರ ರೀಡ್ ಪ್ಲಸ್ ಕಾಯ೯ದಶಿ೯ ಹಮೀದ್ ತಲಪಾಡಿ ಯವರು ತರಗತಿ ಮಂಡಿಸಿದರು. ಜಿಲ್ಲಾ ನಾಯಕರುರಾದ ಇರ್ಫಾನ್ ಮುಸ್ಲಿಯಾರ್ ಕಿನ್ಯ, ಡಿವಿಶನ್ ನಾಯಕರಾದ ಇಲ್ಯಾಸ್ ಪೊಟ್ಟೋಳಿಕೆ, ನಾಸೀರ್ ಮೋಂಟುಗೋಳಿ , ನಿಯಾಜ್ ಪಡಿಕ್ಕಲ್ ಹಾಗೂ ಸೆಕ್ಟರ್ ಅಧ್ಯಕ್ಷರಾದ ಅಝರುದ್ದೀನ್ ಮರಿಕ್ಕಳ, ಸೆಕ್ಟರ್ ಕಾಯ೯ದಶಿ೯ಗಳಾದ ಹಾರೀಸ್ ಸಖಾಫಿ ಮೋಂಟುಗೋಳಿ ಹಾಗೂ ರಾಫಿ ತೋಟಾಲ್, ಸೆಕ್ಟರ್ ನಾಯಕರುರಾದ ಅಮೀರ್ ಶಾಹೀಲ್ ಭಾಗವಹಿಸಿದರು. ಹಾಗೂ ಯುನಿಟ್ ನಾಯಕರು, ಕಾಯ೯ಕತ೯ರು ಹಾಜರಿದ್ದರು. ಯುನಿಟ್ ಪ್ರ. ಕಾಯ೯ದಶಿ೯ ಇಕ್ಬಾಲ್ ಸುಟ್ಟ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

error: Content is protected !! Not allowed copy content from janadhvani.com