janadhvani

Kannada Online News Paper

ದುಲ್ ಫುಖಾರ್ ಸೇವಾ ಟ್ರಸ್ಟ್ ಅಧ್ಯಕ್ಷರಾಗಿ ಆಸಿಫ್ ಬನಾರಿ ಪುನರಾಯ್ಕೆ

ಬಡ ಹಾಗೂ ಅನಾಥರ ಸೇವೆಯಲ್ಲಿ ಕಳೆದೆರಡು ದಶಕಗಳಿಂದಲೂ ಅಧಿಕ ಕನ್ಯಾನದ ಹೃದಯ ಭಾಗದಲ್ಲಿ ಕಾರ್ಯಚರಿಸುತ್ತಿರುವ ದುಲ್ ಪುಖಾರ್ ಸೇವಾ ಟ್ರಸ್ಟ್ ಚೆಡವು ಕನ್ಯಾನ ಇದರ 2021 ನೇ ಸಾಲಿನ ವಾರ್ಷಿಕ ಮಹಾಸಭೆ 11-08-2021 ಬುಧವಾರ ರಾತ್ರಿ 7 ಗಂಟೆಗೆ ಸರಿಯಾಗಿ ಅಧ್ಯಕ್ಷರಾದ ಆಸಿಫ್ ಬನಾರಿ ಅಧ್ಯಕ್ಷತೆಯಲ್ಲಿ ಕೋವಿಡ್ ಮಾರ್ಗ ಸೂಚಿಗಳನ್ನನುಸರಿಸಿ ನಡೆಯಿತು

ಗೌರವಧ್ಯಕ್ಷರಾದ ಖಾದರ್ ಸಅದಿ ಉಸ್ತಾದರ ದುವಾದೊಂದಿಗೆ ಪ್ರಾರಂಭಗೊಂಡ ಸಭೆಯನ್ನು ಅಶ್ರಫ್ ಸಖಾಫಿ ಉದ್ಘಾಟಿಸಿದರು ಕಾರ್ಯದರ್ಶಿ ಬಾತಿಷ್ ಕಣಿಯೂರು ಸ್ವಾಗತಿಸಿ ವಾಚಿಸಿದ ವಾರ್ಷಿಕ ವರದಿಯನ್ನು ಸಬೆಯು ಒಕ್ಕೊರಲಿನಿಂದ ಅಂಗೀಕರಿಸಿತು

ಅಧ್ಯಕ್ಷರ ವಿದಾಯ ಬಾಷಣದೊಂದಿಗೆ ಪ್ರಸಕ್ತ ಕಮಿಟಿಯನ್ನು ಬರ್ಕಾಸು ಮಾಡಿ ಮುಂದಿನ 3 ವರ್ಷಕ್ಕೆ ಹೊಸ ಕಮಿಟಿಯನ್ನು ರಚಿಸಲಾಯಿತು
ದುಲ್ಫುಖಾರ್ ಸೇವಾ ಟ್ರಸ್ಟ್ 2021-24 ರ ನೂತನ ಸಮಿತಿ

ಗೌರವಧ್ಯಕ್ಷರು:- ಅಬ್ದುಲ್ ಖಾದರ್ ಸಅದಿ

ಅಧ್ಯಕ್ಷರು:- ಆಸಿಫ್ ಬನಾರಿ

ಉಪಾಧ್ಯಕ್ಷರು :- 1. ಮಹಮ್ಮದ್ ಕುಂಞ ಕೋರಿತೋಟ
2.ರಹೀಂ ಚೆಡವು

ಪ್ರ.ಕಾರ್ಯದರ್ಶಿ :- ಬಾತಿಷ್ ಕಣಿಯೂರು

ಕಾರ್ಯದರ್ಶಿಗಳು: 1. ಶಬೀರ್ ಅಂಗ್ರಿ
2. ರಹೀಂ ನೆಕ್ಲಾಜೆ
3. ಸಫಲ್ ಪಂಜಾಜೆ

ಕೋಶಾದಿಕಾರಿ :- ಇಸ್ಮಾಯಿಲ್ ಪರಿಂಕಿಲ್

ಲೆಕ್ಕ ಪರಿಶೋಧಕ : ಸಿದ್ದೀಕ್ ಚೆಡವು

ಹಾಗೂ 17 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ನೇಮಿಸಲಾಯಿತು

ದುಲ್ ಫುಖಾರ್ ಗಲ್ಫ್ ಕಮಿಟಿ ಪದಾದಿಕಾರಿಗಳ ಸಹಿತ ಎಲ್ಲಾ ಸದಸ್ಯರು ಪಾಲ್ಗೊಂಡು ಯಶಸ್ವಿಗೊಳಿಸಿದರು

ವರದಿ:- ಮೀಡಿಯಾ ವಿಂಗ್ ದುಲ್ಪುಖಾರ್

error: Content is protected !! Not allowed copy content from janadhvani.com