ಉಪ್ಪಿನಂಗಡಿ ಜು 25: ಎಸ್ಸೆಸ್ಸೆಫ್ಫ್ ಉಪ್ಪಿನಂಗಡಿ ಡಿವಿಶನ್ ವತಿಯಿಂದ ಇಲ್ಲಿನ ತಾಜುಲ್ ಉಲಮಾ ಎಜುಕೇಶನಲ್ ಗಾರ್ಡನ್ ಕರುವೇಲಿನಲ್ಲಿ ಉಪ್ಪಿನಂಗಡಿ ವ್ಯಾಪ್ತಿಯ ಅನಿವಾಸಿ ಕೆ.ಸಿ.ಎಫ್ ನಾಯಕರ ಸ್ನೇಹಸಮ್ಮಿಳನ ಕಾರ್ಯಕ್ರಮ ನಡೆಯಿತು.
ಎಸ್ಸೆಸ್ಸೆಫ್ಫ್ ಉಪ್ಪಿನಂಗಡಿ ಡಿವಿಷನ್ ಅಧ್ಯಕ್ಷ ಎಫ್. ಎಚ್ ಮಿಸ್ಬಾಹಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್ ಸಾದಾತ್ ತಂಙಳ್ ದುಆಶಿರ್ವಚನ ನಡೆಸಿದರು.ಕಲಂದರ್ ಉಸ್ತಾದ್ ಬಹ್ರೈನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು
ಎಸ್ಸೆಸ್ಸೆಫ್ಫ್ ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಲೀ ತುರ್ಕಳಿಕ್ಕೆ, ಉಪ್ಪಿನಂಗಡಿ ಆಂಬುಲೆನ್ಸ್ ಸಮಿತಿ ಚೇರ್ ಮ್ಯಾನ್ ಎನ್. ಎಂ ಶರೀಫ್ ಸಖಾಫಿ, ಕೋಶಾಧಿಕಾರಿ ಸತ್ತಾರ್ ಅಶ್ರಫಿ ಕತ್ತಾರ್, ಕಾಸಿಂ ಮದನಿ ಕನರಾಜೆ ದುಬೈ,ಯೂಸುಫ್ ಹಾಜಿ ವಳಚ್ಚಿಲ್, ರಝಾಕ್ ಮಸ್ಲಿಯಾರ್ ತೆಕ್ಕಾರು ಮುಂತಾದವರು ಆಶಂಷ ಭಾಷಣ ಮಾಡಿದರು.
ಇದೇ ಸಂದರ್ಭ ಆಂಬ್ಯುಲೆನ್ಸ್ ಚಾಲಕರಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ದಾವೂದ್ ಅವರನ್ನು ಸನ್ಮಾನಿಸಲಾಯಿತು. ಕೆ. ಸಿ. ಎಫ್ ನಾಯಕರಾದ ಅಶ್ರಫ್ ಲತೀಫಿ ತೆಕ್ಕಾರ್, ರಿಯಾ ನೆಲ್ಯಾಡಿ, ರಝಾಕ್ ಕರ್ಪಾಡಿ, ಆಸಿಫ್ ಕರ್ಪಾಡಿ, ಸಿರಾಜುದ್ದೀನ್ ವಳಾಲು, ಬದ್ರುದ್ದೀನ್ ನೆಲ್ಯಾಡಿ, ಶೆರೀಫ್ ಜೋಗಿಬೆಟ್ಟು, ಹಮೀದ್ ಬಾರತ್ ಮಠ, ಇರ್ಫಾನ್ ನೆಲ್ಯಾಡಿ, ಅಯ್ಯೂಬ್ ತುರ್ಕಳಿಕೆ, ಸೀರಾಜ್ ತೆಕ್ಕಾರ್, ಮುಂತಾದವರು ಉಪಸ್ಥಿತಿಯಿದ್ದರು. ಡಿವಿಶನ್ ಕಾರ್ಯದರ್ಶಿ ಶರೀಫ್ ಕಲ್ಲಾಜೆ ಕಾರ್ಯಕ್ರಮವನ್ನು ಸ್ವಾಗತಿಸಿ ಮಹ್ ರೂಫ್ ಸುಲ್ತಾನಿ ವಂದಿಸಿದರು.