ಮಾಣಿ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ಇದರ ವತಿಯಿಂದ ಬಕ್ರೀದ್ ಹಬ್ಬದ ಪ್ರಯುಕ್ತ ಅರ್ಹ ಬಡ ಕುಟುಂಬಗಳಿಗೆ ಈದ್ ಕಿಟ್ ವಿತರಣೆ ನಡೆಯಿತು.ಮುಬಶ್ಶಿರ್ ಸೂರಿಕುಮೇರು ಅಧ್ಯಕ್ಷತೆಯಲ್ಲಿ ಇಸಾಕ್ ಮುಸ್ಲಿಯಾರ್ ಮಾಣಿ ದುಆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು.
ನೌಶಾದ್ ಸೂರಿಕುಮೇರು ಸ್ವಾಗತಿಸಿದರು, ಪ್ರಾಸ್ತಾವಿಕ ಭಾಷಣ ಮಾಡಿದ ಮುಈನ್ ಮುಸ್ಲಿಯಾರ್ ಮಾಣಿ “ಬಡವರನ್ನು ಸಂತೋಷ ಪಡಿಸಿ ಆಚರಿಸುವ ಹಬ್ಬಗಳು ಬಹಳ ಅರ್ಥಪೂರ್ಣವಾಗುತ್ತದೆ ಮತ್ತು ಸಂಘಟನೆಗಳ ಕಾರ್ಯ ಚಟುವಟಿಕೆಗಳನ್ನು ಸಾರ್ಥಕಗೊಳಿಸುತ್ತದೆ ಎಂದರು”,ಕಾರ್ಯಕ್ರಮದಲ್ಲಿ ಎಸ್ವೈಎಸ್ ಮಾಣಿ ಸೆಂಟರ್ ನಾಯಕರಾದ ಹಾಜಿ ಯೂಸುಫ್ ಸೂರಿಕುಮೇರು, ಅಬ್ದುಲ್ ಫತ್ತಾಹ್ ಮಾಣಿ, ಎಸ್ವೈಎಸ್ ಸೂರಿಕುಮೇರು ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಸಲೀಂ ಮಾಣಿ,ಅಬ್ದುಲ್ ಖಾದರ್ ಕೊಡಿಪ್ಪಾಡಿ,ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಕ್ಯಾಂಪಸ್ ಸೆಕ್ರೆಟರಿ ಜಾಬಿರ್ ಸೂರಿಕುಮೇರು,ಜಮಾಲ್ ಮಾಣಿ,ಮುಂತಾದ ಗಣ್ಯರು ಉಪಸ್ಥಿತರಿದ್ದರು,ಇಮ್ರಾನ್ ಸೂರಿಕುಮೇರು ಧನ್ಯವಾದಗೈದರು.