ಬೆಳಂದೂರು ನೂರುಲ್ ಹುದಾ ಮದರಸ ವಿದ್ಯಾರ್ಥಿಗಳಿಗೆ ATC ಅಬ್ದುಲ್ ಕರೀಂ ಹಾಜಿ ಕಾಣಿಯೂರು ಹಾಗೂ ಮಾಮು ಬೆಳಂದೂರು ರವರು ಸೇರಿ ಮದರಸ ವಿದ್ಯಾರ್ಥಿಗಳಿಗೆ 9000 ಸಾವಿರ ರೂಪಾಯಿ ಖರ್ಚಿನಿಂದ ಉಚಿತ ಪಾಠ ಪುಸ್ತಕ ವಿತರಣೆ ಕಾರ್ಯಕ್ರಮ ದಿನಾಂಕ 23/06/2021 ಬುಧವಾರ ನೂರುಲ್ ಹುದಾ ಮದರಸ ಹಾಳಿನಲ್ಲಿ ನಡೆಯಿತು.
ತಖ್ವಾ ಮಸೀದಿ ಇಮಾಮ್ ಅಬ್ದುಲ್ ಹಮೀದ್ ಸಖಾಫಿಯವರು ಸ್ವಾಗತ ಮಾಡಿದ ಕಾರ್ಯಕ್ರಮದ ಉದ್ಘಾಟನೆಯನ್ನು ಯುಸುಫ್ ಸಖಾಫಿ ಬೆಳಂದೂರು ನೆರವೆರಿಸದರು.
ಅಬ್ದುಲ್ ಕರೀಂ ಹಾಜಿಯವರು ಉಚಿತ ಪಾಠ ಪುಸ್ತಕ ವಿತರಣೆಗೆ ಚಾಲನೆ ನೀಡಿದರು. ತಖ್ವಾ ಮಸೀದಿ ಆಡಳಿತ ಮಂಡಳಿ ನೇತಾರರಾದ ಮಾಮು ಬೆಳಂದೂರು,ಯುವ ಉದ್ಯಮಿ. ಹಾಗೂ ತಖ್ವಾ ಮಸೀದಿ ಅಧ್ಯಕ್ಷರಾದ ಅಬ್ಬಾಸ್ ಬೆಳಂದೂರು,ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ನಡುಗುಡ್ಡೆ,ಉಸ್ಮಾನ್ ಸುರುಳಿ ಮಜಲು,ಮುಹಮ್ಮದ್ ಇಟ್ಟಿಯಡ್ಕ,ಅಬ್ಬಾಸ್ ಕಲ್ಪಡ,ಮುಂತಾದ ಹಲವು ನಾಯಕರು ವಿದ್ಯಾರ್ಥಿಗಳಿಗೆ ಪಾಠ ಪುಸ್ತಕ ವಿತರಣೆ ಮಾಡಿದರು.
ಅಬ್ದುಲ್ ಕರೀಂ ಹಾಜಿ ಹಾಗೂ ಮಾಮು ಬೆಳಂದೂರು ರವರ ಮರಣ ಹೊಂದಿದ ತಾಯಿಯ ಹೆಸರಿನಲ್ಲಿ ದಾನವಾಗಿ ನೀಡಿದ ಮದರಸ ವಿದ್ಯಾರ್ಥಿಗಳ ಉಚಿತ ಪಾಠ ಪುಸ್ತಕ ವಿತರಣೆಯ ನಂತರ ಅವರ ಹೆಸರಿನಲ್ಲಿ ತಹ್ಲೀಲ್ ಹಾಗೂ ದುಆ ಮಜ್ಲಿಸಿಗೆ ಯುಸುಫ್ ಸಖಾಫಿ ನೇತೃತ್ವ ನೀಡಿದರು.
ಕಳೆದ ನಾಲ್ಕು ವರ್ಷಗಳ ಹಿಂದೆ ಊರಿನವರ ಸಹಾಯ ಸಹಕಾರದಿಂದ ನಿರ್ಮಾಣವಾದ ನೂರುಲ್ ಹುದಾ ಮದರಸ 7 ವಿದ್ಯಾರ್ಥಿಗಳಿಂದ ಆರಂಭಗೊಂಡ ಮದರಸ ಇದೀಗ ಸುಮಾರು 36 ವಿದ್ಯಾರ್ಥಿಗಳನ್ನು ಒಳಗೊಂಡು ಉತ್ತಮವಾದ ರೀತಿಯಲ್ಲಿ ಕಾರ್ಯಾಚರಿಸುತ್ತಿದೆ.
ವರದಿ:
ಅಬ್ದುಲ್ ಲತೀಫ್ ಮಿಸ್ಬಾಹಿ
ಬೆಳಂದೂರು
















ಇನ್ನಷ್ಟು ಸುದ್ದಿಗಳು
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ
ಮದ್ರಸ ಮುಅಲ್ಲಿಮರ ಮೇಲೆ ಹಲ್ಲೆ ಪ್ರಕರಣ: ಎಸ್ಜೆಎಂ ದ.ಕ. ಸೌತ್ ಜಿಲ್ಲಾ ಸಮಿತಿ ತೀವ್ರ ಖಂಡನೆ
ಮದ್ರಸಾ ಅಧ್ಯಾಪಕರ ಮೇಲೆ ಹಲ್ಲೆ- ಎಸ್.ವೈ.ಎಸ್ ದ.ಕ ಜಿಲ್ಲೆ ವೆಸ್ಟ್ ಖಂಡನೆ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ