ಮಂಗಳೂರಿನ ಕೆಲವು ಆಸ್ಪತೆಗಳು ಮತ್ತು ವೈದ್ಯರು ಮೆಡಿಕಲ್ ಮಾಫಿಯಾ ಸ್ರಷ್ಟಿ ಮಾಡಿರುವುದು ದ.ಕ. ಜಿಲ್ಲೆಗೆ ಅವಮಾನ.
ವೈದ್ಯಕೀಯ ನಗರ ಎಂದೇ ಕರೆಯಲ್ಪಡುವ ಮಂಗಳೂರು
ಮುಂದಿನ ದಿನಗಳಲ್ಲಿ ವೈದ್ಯೋ – ಡಕಾಯಿತಿ ನಗರ ಆಗದಿರಲಿ. ಕೆಲವು ಕುಖ್ಯಾತಿ ವೈದ್ಯರ ನಿರ್ಲಕ್ಷ್ಯ ದಿಂದಾಗಿ ಹಲವು ನಿಷ್ಟ್ಟಾವಂತ ವೈದ್ಯರ ಸೇವೆಗಳಿಗೆ ಕೂಡ ಕೆಟ್ಟ ಹೆಸರು ಬರುವುವಂತಾಗಿರುವುದೂ ಖೇದಕರ.
ಖತೀಜ ಜಾಸ್ಮಿನ್ ಎಂಬ ತುಂಬು ಗರ್ಭಿಣಿಯನ್ನು ಅವಳು ಕೋರೋಣ ಪಾಸಿಟಿವ್ ಎಂಬ ಕಾರಣವೊಡ್ಡಿ ಡಾಕ್ಟರ್ ಪ್ರಿಯ ಬಲ್ಲಾಳ್ ರಿಂದ ಹಿಡಿದು ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರು ನಿರ್ಲಕ್ಷಿಸಿರುವುದು ಖಂಡನೀಯ, ಮುಂದುವರಿದು ಡಾ.ಪ್ರಿಯ ಬಲ್ಲಾಳ್ ರ ಸಹ ವೈದ್ಯರುಗಳು ಕೂಡ ರೋಗಿಯಲ್ಲಿ ಮರಣ ಭಯ ಹುಟ್ಟಿಸಿ, ರೋಗಿ ಮತ್ತು ಅವಳ ಕುಟುಂಬದವರಿಗೆ ಪ್ರಾಣ ಭಯ ಹುಟ್ಟಿಸಿ, ಬೆದರಿಸಿರುತ್ತಾರೆ, ರೋಗಿ ಸಂಪರ್ಕಿಸಿದ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ನಿರಾಕರಿಸಿ ಅಲ್ಲಿ ಇಲ್ಲಿ ಅಲೆದಾಡಿಸಿದ್ದಾರೆ.
ಸಂತ್ರಸ್ತೆಯ ಕುಟುಂಬ ವೈದ್ಯರಾದ ಡಾ. ಪ್ರಿಯಾ ಬಲ್ಲಾಳ್ ಈ ಸಂತ್ರಸ್ತೆ ಯನ್ನು ಆ ಪರಿ ನಿರ್ಲಕ್ಷಿಸಲು ಪ್ರಯತ್ನಿಸಿದ ಕಾರಣವೇನು?, ಈ ಬಗ್ಗೆ ಜಿಲ್ಲಾಡಳಿತ ಮತ್ತು ಸರಕಾರ ತನಿಖೆ ನಡೆಸಬೇಕು. ವೈದ್ಯರು ನಡೆಸಿದ ಈ ಗಂಭೀರ ಅಪರಾಧ ಕೃತ್ಯದ ವಿರುದ್ಧ ಮುಸ್ಲಿಮ್ ಒಕ್ಕೂಟ ಸಂತ್ರಸ್ತರ ಪರವಾಗಿ ಹೋರಾಟ ಮುಂದುವರಿಸಲಿದೆ.
ಈಗಾಗಲೇ ಸಂತ್ರಸ್ತೆ ಮತ್ತು ಸಂಘಟನೆಗಳು ಆರಂಭಿಸಿದ ಕಾನೂನಾತ್ಮಕ ಹೋರಾಟಕ್ಕೆ ಬೆಂಬಲ ನೀಡಲಿದೆ. ಸರಕಾರ, ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸು ಇಲಾಖೆ ಈ ಅನ್ಯಾಯದ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲಿ ಆಸ್ಪತ್ರೆ ಮತ್ತು ವೈದ್ಯರ ಮನೆ, ಕ್ಲಿನಿಕ್ ಗಳ ಮುಂದೆ ಉಗ್ರ ಪ್ರತಿಭಟನೆ ನಡೆಸಲಿದ್ದೇವೆ.
ಕೆ.ಅಶ್ರಫ್(ಮಾಜಿ ಮೇಯರ್). .ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ