janadhvani

Kannada Online News Paper

ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ವತಿಯಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಸುರತ್ಕಲ್ : ಡಿಸೆಂಬರ್ 27, ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಸಮಿತಿ ಮತ್ತು ಶ್ರೀನಿವಾಸ ಆಸ್ಪತ್ರೆ ಮುಕ್ಕ ಜಂಟಿಯಾಗಿ ಆಯೋಜಿಸಿದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಆದಿತ್ಯವಾರದಂದು ಕೃಷ್ಣಾಪುರ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಶಸ್ವಿಯಾಗಿ ನಡೆಯಿತು.

ನೂರಾರು ಮಂದಿಗಳು ಭಾಗವಹಿಸಿ ಸಲಹೆ,ಚಿಕಿತ್ಸೆ ಪಡೆದರು.ಡಿವಿಷನ್ ಅಧ್ಯಕ್ಷರಾದ ಫಾರೂಖ್ ಸಖಾಫಿ ಕಾಟಿಪಳ್ಳ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಕೃಷ್ಣಾಪುರ ಬದ್ರಿಯ ಜುಮಾ ಮಸ್ಜಿದ್ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಅಬ್ದುಲ್ ಜಲೀಲ್ ಬದ್ರಿಯಾ ರವರು ಉದ್ಘಾಟಿಸಿದರು.

ಮಾಜಿ ಶಾಸಕ ಡಾ. ಬಿಎ ಮೊಯ್ದಿನ್ ಬಾವಾ ರವರನ್ನು ಡಾಕ್ಟರೇಟ್ ಪದವಿಗಾಗಿ ಸನ್ಮಾನಿಸಲಾಯಿತು.ಮಿಸ್ಬಾಹ್ ನಾಲೇಜ್ ಫೌಂಡೇಶನ್ ಚೇರ್ಮನ್ ಅಲ್ ಹಾಜ್ ಬಿ ಎಂ ಮುಮ್ತಾಝ್ ಅಲಿ,ರಾಜ್ಯ ಎಸ್ಸೆಸ್ಸೆಫ್ ಕಾರ್ಯದರ್ಶಿ ಅಶ್ರಫ್ ರಝಾ ಅಮ್ಜದಿ, ಕರ್ನಾಟಕ ಮುಸ್ಲಿಂ ಜಮಾಅತ್ ಮಂಗಳೂರು ತಾಲೂಕು ಪ್ರ.ಕಾರ್ಯದರ್ಶಿ ಬಿಎ ಇಕ್ಬಾಲ್, ಮಾಜಿ ಕಾರ್ಪೊರೇಟರ್ ಅಯಾಝ್ ಕೃಷ್ಣಾಪುರ ಮಾತನಾಡಿದರು.

ಎಸ್ಸೆಸ್ಸೆಫ್ ದ.ಕ ಜಿಲ್ಲಾ‌ ಸದಸ್ಯರಾದ ಆರೀಫ್ ಝುಹುರಿ ಮುಕ್ಕ, ಎಸ್.ವೈ.ಎಸ್ ಕೃಷ್ಣಾಪುರ ಸೆಂಟರ್ ಅಧ್ಯಕ್ಷರಾದ ಹಬೀಬುರ್ರಹ್ಮಾನ್ ಸಖಾಫಿ,ಬದ್ರಿಯ ಜುಮಾ ಮಸ್ಜಿದ್ ಮುಸ್ಲಿಂ ಜಮಾಅತ್ ಪ್ರ.ಕಾರ್ಯದರ್ಶಿ ಎಸ್ ಎಂ ಅಬ್ದುಲ್ ಹಮೀದ್, ಶೀನಿವಾಸ್ ಆಸ್ಪತ್ರೆ ಯ ವೈದ್ಯಾಧಿಕಾರಿ ಡಾ.ಸುನಿಲ್ ಫೈ ಮುಂತಾದ ಗಣ್ಯರು ಉಪಸ್ಥಿತರಿದ್ದರು.ಡಿವಿಷನ್ ಪ್ರ.ಕಾರ್ಯದರ್ಶಿ ತಂಸೀರ್ ರವರು ಸ್ವಾಗತಿಸಿ, ಬದ್ರುಲ್ ಹುದಾ ಖತೀಬರಾದ ಆಶ್ರಫ್ ಸಖಾಫಿ ಕಕ್ಕಿಂಜೆ ಯವರು ವಂದಿಸಿದರು.

error: Content is protected !! Not allowed copy content from janadhvani.com