janadhvani

Kannada Online News Paper

ಯಾತ್ರಾರ್ಥಿಗಳಿಗೆ ಅತ್ಯುತ್ತಮ ಸೇವೆ: ಮದೀನಾ ಹರಮ್ ಶರೀಫ್ ನಿಂದ ಹೊಸ ಪುಸ್ತಕ ಬಿಡುಗಡೆ

ಮದೀನಾ|ಪ್ರವಾದಿ ನಗರವಾದ ಮದೀನಾದ ಮಸ್ಜಿದುನ್ನಬವಿಗೆ ಆಗಮಿಸುವ ಯಾತ್ರಾರ್ಥಿಗಳಿಗೆ ಅತ್ಯುತ್ತಮ ಸೇವೆಯನ್ನು ಒದಗಿಸಲು ಹರಮ್ ವ್ಯವಹಾರಗಳ ಸಚಿವಾಲಯ ಮುಂದಾಗಿದೆ.

ವಿವಿಧ ಭಾಷೆಗಳಲ್ಲಿ ಪ್ರಕಟಿಸಿದ ವಿವಿಧ ಪುಸ್ತಕಗಳ ಉದ್ಘಾಟನೆಯನ್ನು ಎರಡೂ ಹರಂ ಕಾರ್ಯಾಲಯಗಳ ಮುಖ್ಯಸ್ಥ ಮತ್ತು ಮಸ್ಜಿದುಲ್ ಹರಾಮ್ ಇಮಾಮ್ ಅಬ್ದುಲ್ ರಹ್ಮಾನ್ ಬಿನ್ ಅಬ್ದುಲ್ ಅಝೀಝ್ ಅಲ್-ಸುದೈಸ್ ಅವರು ನಿರ್ವಹಿಸಿದರು.

ಉತ್ಕೃಷ್ಟತೆ ಮತ್ತು ಸೃಜನಶೀಲತೆಯ ಅವಶ್ಯಕತೆಗಳನ್ನು ಪರಿಚಯಿಸುವಲ್ಲಿ ಪುಸ್ತಕಗಳ ಮಹತ್ವವನ್ನು ಅವರು ವಿಶೇಷವಾಗಿ ಶ್ಲಾಘಿಸಿದರು.ಸಮಾರಂಭದಲ್ಲಿ ಮಸ್ಜಿದ್ ನಬವಿಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

error: Content is protected !! Not allowed copy content from janadhvani.com