ಉಳ್ಳಾಲ: ಸಾತ್ವಿಕ ಪರಂಪರೆ, ವಿದ್ವಾಂಸರ ಸಾರಥ್ಯ, ನಿಷ್ಕಳಂಕ ಸೇವೆ, ನವಕ್ರಾಂತಿಗೆ ಮುನ್ನುಡಿ ಬರೆದ ಎಸ್ಸೆಸ್ಸೆಫ್ , ಕನ್ನಡ ಮಣ್ಣಿನಲ್ಲಿ ಜನ್ಮತಾಳಿದ ‘ಎಸ್ಸೆಸ್ಸೆಫ್ ಧ್ವಜ ದಿನ’ದ ಅಂಗವಾಗಿ ಕಿನ್ಯಾ ಸೆಕ್ಟರ್ ವ್ಯಾಪ್ತಿಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.
SSF ಕಿನ್ಯಾ ಸೆಕ್ಟರ್ ವ್ಯಾಪ್ತಿಯ ಐದು
ಶಾಖೆಗಳಲ್ಲಿ ಬೆಳಿಗ್ಗೆ 6.30ಕ್ಕೆ ಉಕ್ಕುಡ, ಬೆಳಿಗ್ಗೆ 7ಕ್ಕೆ ಮೀಂಪ್ರಿ ಹಾಗೂ ಬೆಳರಿಂಗೆ, 7.30ಕ್ಕೆ ಕುರಿಯ ಹಾಗೂ ಬೆಳಿಗ್ಗೆ 8 ಕ್ಕೆ ಕುತುಬಿ ನಗರ ಮೀನಾದಿಯಲ್ಲಿ ಧ್ವಜಾರೋಹಣ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಸೆಕ್ಟರ್ ನಾಯಕರು, ಶಾಖಾ ಕಾರ್ಯಕರ್ತರು ಹಾಗೂ ಸ್ಥಳೀಯ ಮುಂದಾಳುಗಳು ಭಾಗವಹಿಸಿದರು.