janadhvani

Kannada Online News Paper

ಗಾಂಧಿನಗರ ಮಸೀದಿ ಅಧ್ಯಕ್ಷ ಕೆ.ಎಂ ಅಬ್ದುಲ್ಲಾ ಹಾಜಿ ನಿಧನ- ಪಾಪ್ಯುಲರ್ ಫ್ರಂಟ್ ಸಂತಾಪ

ಸುಳ್ಯ :ಗಾಂಧಿನಗರ ಮಸೀದಿ ಅಧ್ಯಕ್ಷರು ಅನ್ಸಾರಿಯಾ ಎಜುಕೇಷನ್ ಸೆಂಟರ್ ನ ಸಲಹೆಗಾರರು ಉಮರಾ ನಾಯಕರು ಆಗಿದ್ದ ಕೆ.ಎಂ ಅಬ್ದುಲ್ಲಾ ಹಾಜಿ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಸುಳ್ಯ ಡಿವಿಷನ್ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತದೆ.

ಉಮರಾ ನೇತರಾರು, ಉದ್ಯಮಿಯು, ಕೊಡುಗೈದಾನಿಯು ಆಗಿದ್ದ ಇವರ ನಿಧನವು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.
ಅಲ್ಲಾಹನು ಇವರು ಜೀವಿತಾವಧಿಯಲ್ಲಿ ಮಾಡಿದ ಎಲ್ಲಾ ಸತ್ಕರ್ಮಗಳನ್ನು ಸ್ವೀಕರಿಸಲಿ ಹಾಗೂ ಎಲ್ಲಾ ತಪ್ಪುಗಳನ್ನು ಕ್ಷಮಿಸಲಿ ಮತ್ತು ಕುಟುಂಬಸ್ಥರಿಗೆ, ಬಂದು ಬಳಗಕ್ಕೆ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ.

ಫೈಝಲ್ ಟಿ.ಎ ಬೆಳ್ಳಾರೆ
(ಅದ್ಯಕ್ಷರು ಪಿಎಫ್ಐ ಸುಳ್ಯ ಡಿವಿಷನ್)

error: Content is protected !! Not allowed copy content from janadhvani.com