janadhvani

Kannada Online News Paper

ಬಲ್ಲಂಗುಡೇಲ್ ನಲ್ಲಿ ಸ್ವಾತಂತ್ರ್ಯೋತ್ಸವ ಹಾಗೂ ಉಚಿತ ಆರೋಗ್ಯ ಕಾರ್ಡ್ ವಿತರಣೆ

ಗೆಳೆಯರ ಬಳಗ (ರಿ) ಬಲ್ಲಂಗುಡೇಲ್ ಪಟ್ಟತ್ತಮೊಗರು ಮಜಿಬೈಲ್ ಇದರ ಸಂಘದ ಕಟ್ಟಡದಲ್ಲಿ 74ನೇ ವರ್ಷದ ಸ್ವಾತಂತ್ರೋತ್ಸವನ್ನು ಆಚರಿಸಲಾಯಿತು.

ಸಂಘದ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ ಕರಿಬೈಲ್ ರವರು ದ್ವಜರೋಹಣಗೈದರು.ಪದಾಧಿಕಾರಿಗಳಾದ ಜಯರಾಮ ಬಲ್ಲಂಗುಡೇಲ್,ಆನಂದ ಹೊಸಗದ್ದೆ,ಬಶೀರ್ ಮುಡಂಬೈಲ್,ಕಾರ್ತಿಕ್ ಶೆಟ್ಟಿ ಮಜಿಬೈಲ್,ಮಾದವ ಉಳಿಯ,ಪ್ರದಿಪ್ ಶೆಟ್ಟಿ ಬಲ್ಲಂಗುಡೇಲ್ ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಕರೋನ ಎಂಬ ಮಾಹಮಾರಿ ವೈರಸ್ ಆದಷ್ಟೂ ಬೇಗನೆ ಭಾರತ ಬಿಟ್ಟು ತೊಲಗಲಿ ಎಂದು ಜಾತಿ,ಪಕ್ಷ ಮರೆತು ಭಾರತಮಾತೆಯಲ್ಲಿ ಪ್ರಾರ್ಥಿಸಲಾಯಿತು. ಸರಳ ರೀತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ಕಾರ್ಡ್ ಗಳನ್ನು ವಿತರಿಸಲಾಯಿತು.

error: Content is protected !! Not allowed copy content from janadhvani.com