janadhvani

Kannada Online News Paper

ಕುಲಾಲು ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆ

ಬಂಟ್ವಾಳ : ಕುಲಾಲು ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಜಮಾಅತ್ ಅಧ್ಯಕ್ಷರಾದ ಬಹು:ಅಹ್ಮದ್ ರವರು ಧ್ವಜಾರೋಹಣ ನೆರವೇರಿಸಿದರು. ಜಮಾಅತ್ ಖತೀಬರಾದ ಮಸ್ಊದ್ ಸಅದಿ ಪ್ರಾರ್ಥನೆ ನಿರ್ವಹಿಸಿ ಬಳಿಕ ಸಂದೇಶ ಭಾಷಣ ಮಾಡಿ 74 ನೇ ಸ್ವಾತಂತ್ರ್ಯ ದಿನಾಚರಣೆ ಇದು ಪೂರ್ವಜರ ತ್ಯಾಗ ದ ಫಲ ಎಂದರು .

ಜುನೈದ್ ರಝಾ ಅಝ್ಹರಿ ಶುಭಕೋರಿ ಮಾತನಾಡಿದರು . ಜಮಾಅತ್ ಪ್ರ. ಕಾರ್ಯದರ್ಶಿ ಕರೀಂ ಕುಲಾಲು, ಮಾಜಿ ಅಧ್ಯಕ್ಷರಾದ ಇಬ್ರಾಹಿಂ ಕುಲಾಲು, SSF ಕುಲಾಲು ಯುನಿಟ್ ಅಧ್ಯಕ್ಷ ರಶೀದ್ ಮುಸ್ಲಿಯಾರ್, ಕಾರ್ಯದರ್ಶಿ ಹುಸೈನ್, ರಝಾಕ್ ಹನೀಫಿ ಅಹ್ಮದ್, ಅಬ್ದುಲ್ಲಾ ಕುಲಾಲು ಉಪಸ್ಥಿತರಿದ್ದರು. ರಶೀದ್ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ತಿಳಿಸಿದರು.

ಇದನ್ನೂ ಓದಿರಿ...