janadhvani

Kannada Online News Paper

ಪಿಎಫ್ಐ ಬಗ್ಗೆ ಸುಳ್ಳಾರೋಪ: ಮಹೇಶ್ ವಿರುದ್ಧ ದೂರು ದಾಖಲು

ಪುತ್ತೂರು: ಸಂಘಟನೆ ಬಗ್ಗೆ ಸುಳ್ಳು ಪ್ರಚಾರ ನಡೆಸಿದ ಕಾವೂರಿನ ಮಹೇಶ್ ಎಂಬಾತನ ವಿರುದ್ಧ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತ ಬಾತಿಶ್ ಬಡಕ್ಕೋಡಿ ಎಂಬವರು ಪುತ್ತೂರು ಠಾಣೆಗೆ ದೂರು ನೀಡಿದ್ದಾರೆ.

ಪುತ್ತೂರು ಬೀರಮಲೆ ಗುಡ್ಡದಲ್ಲಿ ಇತ್ತೀಚೆಗೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಪ್ರಕರಣದಲ್ಲಿ ಯುವಕರ ಬಂಧನಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದವರು ಪಿಎಫ್ಐ ಕಾರ್ಯಕರ್ತರೆಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಪ್ರಚಾರ ನಡೆಸಿ ಸಂಘಟನೆಯ ವರ್ಚಸ್ಸಿಗೆ ಧಕ್ಕೆ ತಂದು ಪ್ರಕರಣವನ್ನು ಹಿಂದು-ಮುಸ್ಲಿಂ ಎಂದು ವಿಭಾಗಿಸಿ ಕೋಮು ಧ್ವೇಷವನ್ನು ಹರಡಿಸಿದ ಮಂಗಳೂರು ಸಮೀಪದ ಕಾವೂರಿನ ಮಹೇಶ್ ಎಂಬಾತನ ವಿರುದ್ಧ ದೂರು ನೀಡಲಾಗಿದೆ.

ಪೊಲೀಸರು ಕೂಡಲೇ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಠಾಣಾಧಿಕಾರಿಗಳಲ್ಲಿ ಆಗ್ರಹಿಸಿದ್ದಾರೆ.

error: Content is protected !! Not allowed copy content from janadhvani.com