janadhvani

Kannada Online News Paper

ಉತ್ತರ ಕರ್ನಾಟಕ ‘DEAN’ ಕಾರ್ಯಾಗಾರಕ್ಕೆ ನಾಳೆ ಸಮಾಪ್ತಿ

ಎಸ್ಸೆಸ್ಸೆಫ್ ರಾಜ್ಯ ಸಮಿತಿಯಿಂದ ಉತ್ತರ ಕರ್ನಾಟಕದ ಜಿಲ್ಲಾ ನಾಯಕರುಗಳಿಗೆ ನಡೆಯುತ್ತಿರುವ ಕಾರ್ಯಾಗಾರ ಅಗಸ್ಟ್ 8 ಶನಿವಾರ ಸಮಾಪ್ತಿಯಾಗಲಿದೆ.

ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯಿದ್ ಉಮ್ಮರ್ ಅಸ್ಸಖಾಫ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ಐದು ದಿನದಿಂದ ನಡೆಯುತ್ತಿರುವ ಕಾರ್ಯಾಗಾರದಲ್ಲಿ ಅಂತಾರಾಷ್ಟ್ರೀಯ ವಾಗ್ಮಿ ಇಹ್ಸಾನ್ ಖಾದ್ರಿ ,SSFರಾಷ್ರಿಯ ಅಧ್ಯಕ್ಷ ಶೌಕತ್ ನ‌ಈಮಿ,ಕೆ.ಎಂ ಸಿದ್ದೀಕ್,ಹಮೀದ್ ಬಜ್ಪೆ, ಹಝ್ರತ್ ‌ಫಾಝಿಲ್ ರಝ್ವಿ ಕಾವೆಲ್ಕಟ್ಟೆ, ಹಾಫಿಝ್ ಸುಫಿಯಾನ್ ಸಖಾಫಿ,ಕೆ.ಎಂ ಮುಸ್ತಫಾ. ನ‌ಈಮಿ ತರಬೇತಿ ನೀಡಿದರು.

ನಾಳೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಎಸ್ಸೆಸ್ಸೆಫ್ ಸುಪ್ರಿಲ್ ಕೌನ್ಸಿಲ್ ನಾಯಕ ಹಮೀದ್ ಬಜ್ಪೆ,ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ,ಕೋಶಾಧಿಕಾರಿ ರವೂಫ್ ಖಾನ್ ಕುಂದಾಪುರ ಹಾಗೂ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ.

error: Content is protected !! Not allowed copy content from janadhvani.com