ಅಬುಧಾಬಿ : “ರಕ್ತದಾನ ಜೀವದಾನ” ಎಂಬ ಘೋಷ್ಯ ವಾಕ್ಯದೊಂದಿಗೆ ಯುಎಇ ಕೆ.ಸಿ.ಎಫ್ ಅಬುಧಾಬಿ ಝೋನ್ ವತಿಯಿಂದ ಬರುವ ಜುಲೈ 24, ಶುಕ್ರವಾದಂದು ಅಬುಧಾಬಿ ಖಾಲಿದಿಯಾ ಮಾಲ್ ಸಮೀಪದ ಬ್ಲಡ್ ಬ್ಯಾಂಕ್ ಇದರಲ್ಲಿ ಬೆಳಿಗ್ಗೆ 9 ರಿಂದ 3ರ ವರೆಗೆ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.
ಕೆ.ಸಿ.ಎಫ್ ಬ್ಲಡ್ ಸೈಬೋ ಇದರ ಅಧೀನದಲ್ಲಿ ನಡೆಯುವ ಈ ಶಿಬಿರವು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ದೇಶದ ಕಾನೂನನ್ನು ಗೌರವಿಸಿ ತನ್ನ ಶಿಬಿರವನ್ನು ನಡೆಸಲಿದೆ.
ಕೆ.ಸಿ.ಎಫ್ ಯು.ಎ.ಇ ಘಟಕವು ಕಳೆದ ನಾಲ್ಕು ತಿಂಗಳ ಕೋವಿಡ್ ಸಮಯದಲ್ಲಿ, ಉದ್ಯೋಗ ಕಳೆದುಕೊಂಡ ಅನಿವಾಸಿಗಳಿಗೆ, ಕೋವಿಡ್ ವೈರಸಿಗೆ ತುತ್ತಾದ ನೂರಾರು ರೋಗಿಗಳಿಗೆ ಹಾಗು ರಂಜಾನ್ ತಿಂಗಳ ಸಮಯದಲ್ಲಿ ಲಾಕ್ಡೌನ್ ತುರ್ತುಪರಿಸ್ಥಿತಿ ಸಮಯದಲ್ಲಿ ಸಾವಿರಾರು ಅನಿವಾಸಿಗಳಿಗೆ ಜಾತಿ ಮತ ಭೇದವಿಲ್ಲದೆ ತನ್ನ ಸಾಂತ್ವನ ಘಟಕದ ಮೂಲಕ ನೆರವಿನ ಹಸ್ತವನ್ನು ಚಾಚಿದೆ.
ಹಲವು ವಿಧದ ಸಂಕಷ್ಟಕ್ಕೊಳಗಾಗಿ ತಾಯಿನಾಡಿಗೆ ಮರಳಲಾಗದ ಅನಿವಾಸಿ ಕನ್ನಡಿಗರಿಗೆ ತನ್ನ ದೇಶಕ್ಕೆ ಮರಳಲು ಚಾರ್ಟಡ್ ವಿಮಾನವನ್ನು ಒದಗಿಸುವ ಮೂಲಕ ಕೆ.ಸಿ.ಎಫ್ ಅನಿವಾಸಿ ಕನ್ನಡಿಗರ ಏಕೈಕ ನೆಚ್ಚಿನ ಸಂಘಟನೆ ಎಂಬ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.
ಶುಕ್ರವಾರ ನಡೆಯುವ ಬೃಹತ್ ರಕ್ತದಾನ ಶಿಬಿರದಲ್ಲಿ ಸರ್ವ ಅನಿವಾಸಿಗಳು ಭಾಗವಯಿಸಿ ಯಶಸ್ವಿಗೊಳಿಸುವಂತೆ ಕೆ.ಸಿ.ಎಫ್ ಅಬುಧಾಬಿ ಝೋನ್ ಘಟಕವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ವರದಿ:-ಇರ್ಫಾಝ್ ತುಂಬೆ















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ