ಚೆನ್ನಾವರ ಎಸ್ ವೈಎಸ್ ಬ್ರಾಂಚ್ ಹಾಗೂ ಎಸ್ಸೆಸ್ಸೆಫ್ ಶಾಖೆ ಯ ವತಿಯಿಂದ ಕೊರೋನ ಲಾಕ್ ಡೌನ್ ವೇಳೆಯಲ್ಲಿ ಮೂರು ಹಂತದ ಕಿಟ್ ವಿತರಿಸಲಾಯ್ತು. ರಮ್ಝಾನ್ ಪ್ರಾರಂಭದಲ್ಲಿ ಅಕ್ಕಿ ಸಕ್ಕರೆ, ಮೆಣಸು, ಎಣ್ಣೆ,ಬೇಳೆ ಕಾಳುಗಳನ್ನೊಳಗೊಂಡ ಆಯ್ದ 30 ರಷ್ಟು ಕುಟುಂಬಗಳಿಗೆ ಮೊದಲನೇ ಹಂತದ ಕಿಟ್ ವಿತರಿಸಲಾಯ್ತು.
ಬದ್ರ್ ಅನುಸ್ಮರಣೆಯ ಪ್ರಯುಕ್ತ 80ರಷ್ಟು ಮನೆಗಳಿಗೆ ಹಣ್ಣು ಹಂಪಲುಗಳಿರುವ ಎರಡನೇಯ ಹಂತದ ಕಿಟ್ ವಿತರಿಸಲಾಯ್ತು. ಹಾಗೂ ಈದ್ ಆಚರಿಸಲು ಬೇಕಾದ ಮಾಂಸ, ತುಪ್ಪಕ್ಕಿ,ತುಪ್ಪ , ಪಾನೀಯಪದಾರ್ಥ, ಮಸಾಲ ಪದಾರ್ಥಗಳನ್ನೊಳಗೊಂಡ ಮೂರನೇ ಹಂತದ ಕಿಟ್ ವಿತರಿಸಲಾಯ್ತು.
ಪ್ರಸ್ತುತ ಕಿಟ್ ಗಳಿಗಾಗಿ ಸಂಘಟನೆಯ ಹೆಚ್ಚಿನ ಕಾರ್ಯಕರ್ತರು ವಿದೇಶದಿಂದಲೂ ಊರಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಸಹಾಯ ಸಹಕಾರವನ್ನು ನೀಡಿರುತ್ತಾರೆ, ಅಂದಾಜು ಎಪ್ಪತ್ತೈದು ಸಾವಿರ ರೂಪಾಯಿಯಷ್ಟು ಮೊತ್ತದ ಕಿಟ್ ಈ ವರ್ಷ ಕೊಡಲು ಸಾಧ್ಯವಾಯ್ತು. ಅಲ್ಲದೇ ಪ್ರತೀ ವರ್ಷವು ಒಂದು ಹಂತದ ಕಿಟ್ ಕೊಡುತ್ತಿದ್ದು ಈ ವರ್ಷ ವ್ಯತ್ಯಸ್ಥ ರೀತಿಯಲ್ಲಿ ಕೊಡಲಾಯ್ತು.
ಈ ಕಾರ್ಯ ಪ್ರವೃತ್ತಿಗೆ ಸಹಕರಿಸಿದ ಎಲ್ಲರಿಗೂ ಪ್ರತ್ಯೇಕ ದುಆ ಸಂಗಮ ನಡೆಸಲು ಸರಕಾರದ ಆದೇಶದ ಪಾಲನೆಯಿಂದ ಸಾಧ್ಯವಾಗಿಲ್ಲ. ಓನ್ ಲೈನ್ ಸಂಗಮಗಳಿಂದ ಪ್ರತ್ಯೇಕ ದುಆ ನಡೆಸಲಾಯ್ತು.
ಈ ಕಿಟ್ ವಿತರಣೆಯಲ್ಲಿ ಜಮಾಅತ್ ಅಧ್ಯಕ್ಷ ಕರೀಮ್ ಹಾಜಿ , ಯೂಸುಫ್ ಹಾಜಿ, ಎಸ್ ವೈಎಸ್ ಅಧ್ಯಕ್ಷ ಇಸ್ಮಾಈಲ್ ಸಅದಿ, ಎಸ್ಸೆಸ್ಸೆಫ್ ಅಧ್ಯಕ್ಷ ಇಸ್ಮಾಈಲ್ ಹನೀಫಿ, ಸಿಪಿ ಅಬೂಬಕರ್ ಮದನಿ, ಅಲ್ ಹಾಫಿಳ್ ಅಬ್ದುಸ್ಸಲಾಮ್ ನಿಝಾಮಿ, ಅಬ್ದುಲ್ ರಹ್ಮಾನ್ ಬಿ, ಸಿಪಿ ಮುಹಮ್ಮದ್ ಹಾಜಿ, ಅಬ್ದುಲ್ ರಝಾಕ್ ಹಾಜಿ, ಪುತ್ತುಞಿ ಹಾಜಿ ಬಾಯಂಬಾಡಿ, ಅಬ್ದುಲ್ ಅಝೀಝ್ , ಅಮೀನ್ ಝುಹ್ರಿ , ಇಕ್ಬಾಲ್ ಮದನಿ, ಹನೀಫ್ ಇಂದ್ರಾಜೆ , ಮುತ್ತಲಿಬ್ ಹಾಜಿ, ನಸೀರ್ ನಿಝಾಮಿ, ನಿಝಾರ್ ಮುಸ್ಲಿಯಾರ್ , ಇಕ್ಬಾಲ್ ಸಿ, ಆಸಿಫ್ ಪಿಎಮ್, ಜಬ್ಬಾರ್ ಮುಕ್ಕೂರ್, ಉಮರ್ ಕೆ, ಮುನಾಝ್, ಅಬ್ದುಲ್ ಬಾಸಿತ್ ಮೊದಲಾದವರು ಉಪಸ್ಥಿರಿದ್ದರು.