ಮಂಗಳೂರು: ಇದ್ದಕ್ಕಿದ್ದಂತೆ ಎಲ್ಲರ ವಾಟ್ಸಾಪ್ ಸ್ಟೇಟಸ್ಗಳು ತ್ರಿವರ್ಣ ಪತಾಕೆಯಿಂದ ರಂಗೊಳಿಸುತ್ತಿದೆ. ಇಂದು ಆಗಸ್ಟ್ 15 ಅಲ್ಲವಲ್ಲಾ? ಗಣರಾಜ್ಯೋತ್ಸವವೂ ಅಲ್ಲ ಮತ್ತೇನಿರಬಹುದು? ಎಂದು ಆಲೋಚಿಸುತ್ತಿದ್ದಂತೆ ಕೆಲವು ಆರೆಸ್ಸೆಸ್ ನವರ ಸ್ಟೇಟಸ್ ನಲ್ಲಿ ಕೇಸರಿ ಧ್ವಜ ಕಾಣಲು ಸಾಧ್ಯವಾಯಿತು.
ಒಟ್ಟಿನಲ್ಲಿ ನಡೆದಿದ್ದೇನು? ದೇಶ ಪ್ರೇಮಿ ಮತ್ತು ದೇಶ ದ್ರೋಹಿ ಆಂದೋಲನವೇ? ಅದಲ್ಲ ಹಿಂದೂ ಮುಸ್ಲಿಂ ವಾಟ್ಸಪ್ ಸಮರವೇ? ಅಲ್ಲ ಜಾತ್ಯಾತೀತರು ಮತ್ತು ಹಿಂದುತ್ವವಾದಿಗಳ ಪೈಪೋಟಿಯೇ?
ಒಂದಂತೂ ನಿಜ, ದೇಶಾದ್ಯಂತ ಲಾಕ್ಡೌನ್ ಆದ ಕಾರಣ ಮನೆಯಲ್ಲೇ ಉಳಿದು ಉಸಿರುಗಟ್ಟಿದಂತಾಗಿರುವ ಯುವ ಪೀಳಿಗೆಯು, ತಿಳುವಳಿಕೆ ಇಲ್ಲದೆಯೋ, ಟೈಂಪಾಸ್ ಗಾಗಿಯೋ ಇತರರ ಮನಸ್ಸನ್ನು ನೋಯಿಸಿ ವಿಕೃತ ಆನಂದ ಪಡುವುದು ನಿತ್ಯ ರೂಢಿಯಾಗಿ ಬಿಟ್ಟಿದೆ.
ಇತರ ಧರ್ಮೀಯರನ್ನು ಅವರ ಧರ್ಮದ ಹೆಸರಿನಲ್ಲಿ ಹೀಯಾಳಿಸುವುದು,ಅವರ ವಿರುದ್ಧ ಮನಬಂದಂತೆ ಗೀಚುವುದು, ಸರಿಯೋ ತಪ್ಪೋ ಎಂದರಿಯದೆ ಇಲ್ಲ ಸಲ್ಲದ ಆರೋಪಗಳನ್ನು ಸಾಮಾಜಿಕ ತಾಣದಲ್ಲಿ ಹರಿಯಬಿಡುವುದು ಕೆಲಸವಿಲ್ಲದೆ ಕಾಲ ಕಳೆಯುತ್ತಿದ್ದವರ ಚಾಳಿಯಾಗಿತ್ತು, ಆದರೆ ಇಂದು ಎಲ್ಲರೂ ಕೆಲಸವಿಲ್ಲದೆ ಮನೆಯಲ್ಲಿದ್ದಾರೆ ಮತ್ತೆ ಈ ರೀತಿಯ ಸಮಾಜ ದ್ರೋಹಿ ಕೆಲಸಗಳು ಜಾಸ್ತಿಯಾಗಿರುವುದು ಅತಿಷಯೋಕ್ತಿಯಲ್ಲ.
ಜನರು ಮನೆಯಲ್ಲಿದ್ದರೂ, ಸರಕಾರ, ಆಡಳಿತ ವರ್ಗ, ಅಧಿಕಾರಿಗಳು, ಕಾನೂನು ಪಾಲಕರು ಸಕ್ರಿಯವಿದ್ದಾರೆ ಎಂಬುದನ್ನು ಮರೆತಂತೆ ವರ್ತಿಸುತ್ತಿದ್ದಾರೆ ಕೆಲವು ಕಿಡಿಗೇಡಿಗಳು. ಅವರ ವಿರುದ್ಧ ಪ್ರಕರಣ ದಾಖಲಾದಾಗಲೇ ತಮ್ಮ ತಪ್ಪಿನ ಅರಿವಾಗುವುದು.ಆದರೆ ಪ್ರಕರಣ ದಾಖಲಿಸದಂತೆ ಕೆಲವು ಮುಖಂಡರು ಕಾನೂನು ಪಾಲಕರಾದ ಪೋಲೀಸರಿಗೆ ಧಮಕಿ ಹಾಕಿದ ಪ್ರಸಂಗ ನಡೆದದ್ದು ವಿಪರ್ಯಾಸ.
ಇಳಿ ವಯಸ್ಸಿನ, ಬಿಸಿ ರಕ್ತದ ಹುಂಗಿನಲ್ಲಿ ಅನಿಯಂತ್ರಿತವಾಗಿ ಧುಮುಕಿದರೆ ಒಂದಲ್ಲೊಂದು ದಿನ ಅದರ ದುಷ್ಪರಿಣಾಮ ತಮ್ಮ ಜೀವನದಲ್ಲಿ ಬಂದೆರಗಲಿದೆ ಎಂಬುದನ್ನು ಮನೆಯಲ್ಲಿರುವ ಹಿರಿಯರು, ಪೋಷಕರು ಬುದ್ದಿವಾದ ಹೇಳಿ ಮನುಷ್ಯರೆಡೆಯಲ್ಲಿ ಮಾನವೀಯತೆಯಿಂದ ವರ್ತಿಸುವ ಪಾಠ ಕಲಿಸಬೇಕಾಗಿದೆ.
ಈ ಕೊರೋನಾ ವೈರಸ್ ಮಹಾಮಾರಿಯನ್ನು ಎದುರಿಸಲು ಭಾರತೀಯರಾದ ನಾವೆಲ್ಲರೂ ಒಗ್ಗಟ್ಟಿನಲ್ಲೇ ಹೋರಾಡೋಣ, ಜೈ ಹಿಂದ್
#stay home
#stay safe















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್