ಕುವೈತ್ ಸಿಟಿ: ವಿಮಾನ ಸೇವೆಗಳನ್ನು ರದ್ದುಗೊಳಿಸಿದ ಕಾರಣಕ್ಕಾಗಿ ಊರಲ್ಲೇ ಉಳಿದುಕೊಂಡ ವಿದೇಶಿ ಪ್ರಜೆಗಳಿಗೆ ಇಖಾಮಾ, ವರ್ಕ್ ಪರ್ಮಿಟ್ ನವೀಕರಣಕ್ಕಾಗಿ ಸೌಕರ್ಯವನ್ನು ಕುವೈತ್ ಆಂತರಿಕ ಸಚಿವಾಲಯ ಏರ್ಪಡಿಸಿದೆ.
ವಸತಿ ಇಲಾಖೆಯ ಉಪಕಾರ್ಯದರ್ಶಿ ತಲಾಲ್ ಅಲ್ ಮಅ್ರಫಿ ಈ ಬಗ್ಗೆ ಮಾತನಾಡಿ, ಖಾಸಗಿ ವಲಯದ ಕಾರ್ಮಿಕರು ಮತ್ತು ಗೃಹ ಕಾರ್ಮಿಕರ ಇಖಾಮಾವನ್ನು ಅವರು ದೇಶದಲ್ಲಿಲ್ಲದ ಹೊರತಾಗಿಯೂ ನವೀಕರಿಸಲು ಅವಕಾಶ ನೀಡಲಾಗುವುದು ಎಂದು ಹೇಳಿದರು.
ಭಾರತ ಸೇರಿದಂತೆ ವೈಮಾನಿಕ ಯಾತ್ರಾ ನಿರ್ಬಂಧ ಹೇರಲಾದ ದೇಶಗಳ ನಾಗರಿಕರಿಗೆ ಗೃಹ ಇಲಾಖೆ ವಿನಾಯಿತಿ ನೀಡಿದೆ. ಪ್ರಯಾಣದ ತೊಂದರೆಯಿಂದಾಗಿ ಕುವೈತ್ ತಲುಪಲು ಸಾಧ್ಯವಾಗದ ಕಾರ್ಮಿಕರ ಅನುಪಸ್ಥಿತಿಯಲ್ಲಿ ಸಂಸ್ಥೆಯ ಪ್ರಾಯೋಜಕರು ಅಥವಾ ಪ್ರತಿನಿಧಿ ನಿವಾಸ ಇಲಾಖೆಗೆ ತೆರಳಿ ಅವರ ಇಖಾಮಾ ನವೀಕರಿಬಹುದಾಗಿದೆ. ಮಾನವಶಕ್ತಿ ಪ್ರಾಧಿಕಾರದಿಂದ ಕೆಲಸದ ಪರವಾನಗಿಯನ್ನು ನವೀಕರಿಸಿದ ನಂತರ ಇಖಾಮಾ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು.
ಪ್ರಾಯೋಜಕರು ಗೃಹ ಕಾರ್ಮಿಕರ ಇಖಾಮಾ ಮತ್ತು ಅವಲಂಬಿತ ವೀಸಾಗಳಲ್ಲಿರುವವರ ಇಖಾಮಾವನ್ನು ನವೀಕರಿಸಬಹುದು. ಅವಲಂಬಿತ ವೀಸಾದ ಪ್ರಾಯೋಜಕರು ವಿದೇಶದಲ್ಲಿದ್ದರೆ ಕುಟುಂಬ ಸದಸ್ಯರಿಗೆ ತಾತ್ಕಾಲಿಕ ವೀಸಾ ನೀಡಲಾಗುವುದು. ಇದಲ್ಲದೆ, ವೀಸಾ ಅವಧಿ ಮುಗಿದ ನಂತರ ದೇಶಕ್ಕೆ ಬಂದವರಿಗೆ ವೀಸಾವನ್ನು 2 ತಿಂಗಳವರೆಗೆ ವಿಸ್ತರಿಸಲಾಗುವುದು.
ಆರು ತಿಂಗಳಿಗಿಂತ ಹೆಚ್ಚು ಕಾಲ ಊರಲ್ಲಿ ಉಳಿದುಕೊಂಡ ಕಾರಣಕ್ಕಾಗಿ ಇಖಾಮಾ ಅಮಾನ್ಯವಾಗುವ ಪರಿಸ್ಥಿತಿಯನ್ನು ತಪ್ಪಿಸಲು ಕಂಪನಿಯ ಪ್ರತಿನಿಧಿಯ ಮೂಲಕ ಮೂರು ತಿಂಗಳ ವಿನಾಯಿತಿಗಾಗಿ ಅರ್ಜಿ ಸಲ್ಲಿಸುವ ಆಯ್ಕೆಯನ್ನು ಗೃಹ ವ್ಯವಹಾರ ಇಲಾಖೆ ಕಾರ್ಮಿಕರಿಗೆ ಒದಗಿಸಿದೆ.















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ