janadhvani

Kannada Online News Paper

ನಾಳೆ ಕಿನ್ಯದಲ್ಲಿ ಮರ್ಕಝ್ ಸಮ್ಮೇಳನ ಪ್ರಚಾರ ಸಮಾವೇಶ

ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಶೈಖುನಾ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಸಾರಥ್ಯದ ಕೇರಳ ರಾಜ್ಯ ಕಲ್ಲಿಕೋಟೆ ಕಾರಂದೂರು ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ವಿಶ್ವ ಖ್ಯಾತಿ ಪಡೆದ ಧಾರ್ಮಿಕ-ಲೌಖಿಕ ಮತ್ತು ವೈದಕೀಯ,ಕಾನೂನು ಶಿಕ್ಷಣ ಸಮುಚ್ಚಯ ಮರ್ಕಝ್ ಸಂಸ್ಥೆಯ 43 ನೇ ವಾರ್ಷಿಕ ಹಾಗೂ ಪದವಿ ಪ್ರಧಾನ ಸಮ್ಮೇಳನವು ಎಪ್ರಿಲ್ ತಿಂಗಳಲ್ಲಿ ನಡೆಯಲಿದ್ದು,ಅದರ ಪ್ರಚಾರಾರ್ಥ ಕಿನ್ಯ ಬುಖಾರಿ ಜುಮುಅ ಮಸ್ಜಿದ್ ನಲ್ಲಿ ದ.ಕ ಸಖಾಫಿ ಕೌನ್ಸಿಲ್ ವತಿಯಿಂದ ಪ್ರಚಾರ ಸಮಾವೇಶವು ನಾಳೆ (08/03/2020) ಆದಿತ್ಯವಾರ ಇಶಾ ನಮಾಝ್ ನಂತರ ಮಸ್ಜಿದ್ ಅಧ್ಯಕ್ಷ ಅಶ್ಅರಿಯ್ಯಾ ಮುಹಮ್ಮದ್ ಅಲೀ ಸಖಾಫಿ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ದ.ಕ ಜಿಲ್ಲಾ ಸಖಾಫಿ ಕೌನ್ಸಿಲ್ ಕಾರ್ಯದರ್ಶಿ ಮಹ್ಬೂಬುರ್ರಹ್ಮಾನ್ ಸಖಾಫಿ ಕಿನ್ಯ ಕಾರ್ಯಕ್ರಮವನ್ನು ಉದ್ಘಾಟಿಸುವರು.
ಮರ್ಕಝ್ ಸಂದೇಶ ಭಾಷಣವನ್ನು ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು ನಿರ್ವಹಿಸಲಿದ್ದಾರೆ
ಸಮಾವೇಶದಲ್ಲಿ ನಡೆಯುವ ಝಿಕ್ರ್ ಮಜ್ಲಿಸ್,ಅಜ್ಮೀರ್ ಮೌಲಿದ್ ಗಳಿಗೆ ಸಯ್ಯಿದ್ ಅಲವಿ ಅಲ್ ಹೈದ್ರೂಸಿ ತಂಙಳ್ ಹಾಗೂ ಸ್ಥಳೀಯ ಖತೀಬ್ ಉಸ್ಮಾನ್ ಸಖಾಫಿ ನೇತೃತ್ವ ನೀಡಲಿದ್ದಾರೆ.
ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಝೈನುಲ್ ಆಬಿದ್ ಸಅದಿ ತಂಙಳ್,ಎಸ್.ವೈ.ಎಸ್ ರಾಜ್ಯ ನಾಯಕ ಇಸ್ಮಾಯಿಲ್ ಸಅದಿ ಕಿನ್ಯ ಸಹಿತ ಅನೇಕ ನಾಯಕರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

error: Content is protected !! Not allowed copy content from janadhvani.com