ನವದೆಹಲಿ: ವಾಯುಯಾನದ ವೇಳೆ ಉಚಿತ ವೈಫೈ ನೀಡುವ ಮೊದಲ ವಿಮಾನಯಾನ ಕಂಪನಿ ಎಂಬ ಹೆಗ್ಗಳಿಕೆಗೆ ವಿಸ್ತಾರಾ ಏರ್ಲೈನ್ಸ್ ಪಾತ್ರವಾಗಲಿದೆ. ಈ ಕಂಪನಿ ತನ್ನ ನೂತನ ಬೋಯಿಂಗ್ 787 ಡ್ರೀಮ್ ಲೈನರ್ ವಿಮಾನಗಳಲ್ಲಿ ವಾಯುಯಾನದ ವೇಳೆ ವೈಫೈ ಜೊತೆಗೆ ಉಚಿತ ಸ್ಟ್ರೀಮಿಂಗ್ ವಿಡಿಯೋ ಸೇವೆಯನ್ನು ಶೀಘ್ರದಲ್ಲಿಯೇ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಈ ಸೇವೆಯ ಆರಂಭದಿಂದ ವಿಶ್ವದ ಬಿಡುವಿಲ್ಲದ ಮಾರುಕಟ್ಟೆಯಲ್ಲಿ ಪ್ರಿಮಿಯಂ ಏರ್ಲೈನ್ಸ್ ಆಗುವ ಮಹತ್ವಾಕಾಂಕ್ಷೆಯ ಬಲ ಸಿಗಲಿದೆ. ವಿಸ್ತಾರ ವಿಮಾನಯಾನ ಸಂಸ್ಥೆಗೆ ಈ ತಿಂಗಳ ಅಂತ್ಯದವರೆಗೆ ಮೊಟ್ಟಮೊದಲ ಡ್ರೀಮ್ ಲೈನರ್ ವಿಮಾನ ಸಿಗುವ ನಿರೀಕ್ಷೆ ಇದೆ.
ಬುಧವಾರ ನವದೆಹಲಿಯಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ವಿಸ್ತಾರಾ ಸಂಸ್ಥೆಯ ಚೀಫ್ ಸ್ಟ್ರಾಟಜಿ ಆಫೀಸರ್ ವಿನೋದ್ ಕಾನನ್, ಈ ಸೇವೆಯನ್ನು ಆರಂಭಗೊಳ್ಳುವುದರಿಂದ ಯಾತ್ರಿಗಳು ಫೇಸ್ ಬುಕ್, ವಾಟ್ಸ್ ಆಪ್ ಗಳಂತಹ ಮೆಸೇಜಿಂಗ್ ಸೇವೆಗಳನ್ನು ಸೇರಿದಂತೆ ಲೈವ್ ಸ್ಟ್ರೀಮ್ ಕ್ರಿಕೆಟ್ ಪಂದ್ಯಗಳನ್ನು ಆನಂದಿಸಬಹುದು. ಅಷ್ಟೇ ಅಲ್ಲ ಲೈವ್ ವಿಡಿಯೋ ಗೇಮ್ ಗಳನ್ನೂ ಸಹ ಆಡಬಹುದು. ಆದರೆ, ಇದಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಡೇಟಾ ಖರ್ಚಾಗಲಿದೆ. ಈ ಯಾತ್ರೆಗಾಗಿ ಪ್ರವಾಸಿಗರಿಗೆ ಎಷ್ಟು ಚಾರ್ಜ್ ಮಾಡಬೇಕು ಎಂಬುದರ ನಿರ್ಣಯ ಮುಂಬರುವ ಕೆಲ ವಾರಗಳಲ್ಲಿ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ವಿಸ್ತಾರಾ ಏರ್ಲೈನ್ಸ್ ಸಿಂಗಾಪುರ್ ಏರ್ಲೈನ್ಸ್ ಹಾಗೂ ಟಾಟಾ ಗ್ರೂಪ್ ಸಂಸ್ಥೆಯ ಜಾಯಿಂಟ್ ವೆಂಚರ್ ಆಗಿದ್ದು, 2015ರಲ್ಲಿ ತನ್ನ ವಿಮಾನಯಾನ ಸೇವೆ ಆರಂಭಿಸಿದೆ. ಸದ್ಯ ಇದು 32 ಏರ್ ಬಸ್ ಹಾಗೂ ಬೋಯೀಂಗ್ 737 ಎಸ್ ವಿಮಾನಗಳನ್ನು ಹೊಂದಿದೆ.
ಈ ಕುರಿತು ಮಾತನಾಡಿರುವ ಕಾನನ್, ಪ್ಯಾನಾಸೋನಿಕ್ ಏವಿಯೇಶನ್ ಕಾರ್ಪ್ ಹಾಗೂ ನೆಲ್ಕೋ ಲಿಮಿಟೆಡ್ ಸಂಸ್ಥೆಗಳು ಜಂಟಿಯಾಗಿ ಭಾರತ ಹಾಗೂ ಭಾರತೀಯ ಏರ್ಸ್ಪೇಸ್ ನಲ್ಲಿ ಈ ಸೆಟಲೈಟ್ ಸೇವೆಯನ್ನು ಒದಗಿಸಲಿದ್ದು, ವಿಸ್ತಾರಾ ಏರ್ಲೈನ್ಸ್ ಅದರ ಮೊದಲ ಗ್ರಾಹಕವಾಗಲಿದೆ.
ಭಾರತದಲ್ಲಿ ಹಾರಾಟದ ವೇಳೆ ವೈಫೈ ಸೇವೆ ಆರಂಭಿಸುವ ಯೋಜನೆ 2016ರಿಂದ ನೆನೆಗುದಿಗೆ ಬಿದ್ದಿತ್ತು.















ಇನ್ನಷ್ಟು ಸುದ್ದಿಗಳು
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಹಾರಾಟ ರದ್ದು
ಚೀನಾದಲ್ಲಿ HMPV ವೈರಸ್ ವ್ಯಾಪಕ,ಆಸ್ಪತ್ರೆಗಳು ಫುಲ್: ಆತಂಕ ಬೇಡ- ಕೇಂದ್ರ ಸರ್ಕಾರ
ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಖಂಡನೀಯ: ತೆಲಂಗಾಣ ಸಿಎಂಗೆ ಎ ಪಿ ಉಸ್ತಾದ್ ಪತ್ರ
ಲಂಚ: ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ ಪ್ರಕರಣ – 966 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳನ್ನು ಖರೀದಿಸಿದ್ದ ಕಂಪನಿ ಮೇಘಾ
ಸಮಗ್ರ ಅಭಿವೃದ್ಧಿ ಗೆ ಅಂಬೇಡ್ಕರ್ ತತ್ವ ಪಾಲನೆ ಅಗತ್ಯ : ದ್ರೌಪದಿ ಮುರ್ಮು
ಹರಿಯಾಣ : ಶಾಲಾ ಬಸ್ ಪಲ್ಟಿ; ಆರು ಮಕ್ಕಳು ಸಾವು ಈದ್ ರಜೆಯಲ್ಲೂ ತೆರೆದಿದ್ದ ಶಾಲೆ!
ಮುಸ್ಲಿಂ 2ಬಿ ಮೀಸಲು ರದ್ಧತಿ ಮತಬ್ಯಾಂಕ್ ಭದ್ರಪಡಿಸುವ ಸರಕಾರದ ನಡೆ ಖಂಡನೀಯ- ಎಸ್ ವೈ ಎಸ್
ದೇವಸ್ಥಾನಕ್ಕೆ ಮಾಂಸ ಎಸೆದು, ಕೋಮುಗಲಭೆ- ಪ್ರಮುಖ ಆರೋಪಿ ಚಂಚಲ್ ತ್ರಿಪಾಠಿ ಬಂಧನ
ಪರೀಕ್ಷೆಗೂ ಹಿಜಾಬ್ ಗೂ ಸಂಬಂಧವಿಲ್ಲ- ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಣೆ
ಜನಾದೇಶವಿಲ್ಲದೆ ಬಿಜೆಪಿಗೆ ಗೆಲುವು: ಇದು ಇವಿಎಂ ದುರ್ಬಳಕೆ- ಸಂಘಟಿತ ಹೋರಾಟಕ್ಕೆ ಕಾಂಗ್ರೆಸ್ಗೆ ದೀದಿ ಆಹ್ವಾನ