janadhvani

Kannada Online News Paper

ಜಿ.ಸಿ.ಸಿ. ಗಲ್ಫ್ ಗೈಸ್ ಬೇಂಗಿಲ:20-21 ನೇ ಸಾಲಿನ ನವ ಸಾರಥಿಗಳು

ರಿಯಾದ್: ಜಿ.ಸಿ.ಸಿ. ಗಲ್ಫ್ ಗೈಸ್ ಬೇಂಗಿಲ-ಗಲ್ಫ್ ಸಮಿತಿ ಇದರ ವಾರ್ಷಿಕ ಮಹಾಸಭೆಯು ಫೆ, 01-2020 ರಂದು ನಡೆಯಿತು.
ಸಮಿತಿಯ ಗೌರವ ಅದ್ಯಕ್ಷರಾದ ಇಬ್ರಾಹಿಂ ಬೇಂಗಿಲ ಇವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರಸ್ತುತ ಕಾರ್ಯಕ್ರಮದಲ್ಲಿ ಸಮಿತಿಯ ಮಾಜಿ ಅಧ್ಯಕ್ಷರಾದ ಬಹು ಇಸ್ಮಾಯಿಲ್ ಸಅದಿಯವರು ದುವಾ ನೆರವೇರಿಸಿಕೊಟ್ಟರು.ಅಬ್ಬಾಸ್ ಮುಸ್ಲಿಯಾರ್ ಕಿರಾಅತ್ ಪಠಿಸಿ, ಸಿದ್ದೀಕ್ ಸೊಕಿಲ ಉದ್ಘಾಟಿಸಿದರು. ರಿಯಾಝ್ ಬೊಲ್ಲಗುಲಿ ಗತವರ್ಷದ ವರದಿ ಮತ್ತು ಆಯವ್ಯಯ ಮಂಡಿಸಿದರು.

ಸಮಿತಿಯ ಅಧ್ಯಕ್ಷರಾದ ಬಹು ಅಬ್ದುಲ್ ಕರೀಂ ಲತೀಫಿಯವರು ಗತವರ್ಷದ ಆಗು ಹೋಗುಗಳ ಬಗ್ಗೆ ಪ್ರಮುಖ ವಿಷಯ ಮಂಡಿಸಿದರು.ಸಭೆಯ ಅಧ್ಯಕ್ಷರ ಅನುಮತಿಯಿಂದ ಎಲ್ಲರ ಅಭಿಪ್ರಾಯ ಇಚ್ಚೆಗಳಂತೆ ಈ ಕೆಲಗಿನ ನೂತನ ಸಾಲಿನ ಸಾರಥಿಗಳನ್ನು ಆಯ್ಕೆ ಮಾಡಲಾಯಿತು.

ಗೌರವ ಅಧ್ಯಕ್ಷರಾಗಿ‌ ಬಹು ರಫೀಕ್ ಮದನಿ, ಅಧ್ಯಕ್ಷರಾಗಿ ಇಬ್ರಾಹಿಮ್ ದರ್ಖಾಸ್, ಉಪಾಧ್ಯಕ್ಷರಾಗಿ ಆದಂ ಬೊಳ್ಳಗುಳಿ, ಅಬ್ದುರ್ರಹ್ಮಾನ್ ನಿರ್ಕಜೆ, ಕಾರ್ಯದರ್ಶಿಯಾಗಿ ಹೈದರ್ ಹೊಸೊಕ್ಲು, ಜೊತೆ ಕಾರ್ಯದರ್ಶಿಯಾಗಿ ಅಶ್ರಫ್ ಬಹ್ರೈನ್ ಹಾಗೂ ರಶೀದ್ ಬೇಂಗಿಲ, ಕೋಶಾಧಿಕಾರಿಯಾಗಿ ರಿಯಾಝ್ ಬೊಳ್ಳಗುಳಿ, ಸಂಘಟನಾ ಕಾರ್ಯದರ್ಶಿ ಆಗಿ ಸಿದ್ದೀಕ್ ಸೋಕಿಲ, ಸ್ವಲಾತ್ ಕೋಡಿನೇಟರ್ ಆಗಿ-ಕೆರೀಂ ಲೆತ್ವೀಫಿ, ಪ್ರ.ಸಲಹೆಗಾರರಾಗಿ ಅಬ್ಬಾಸ್ ಮುಸ್ಲಿಯಾರ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಬೀಬ್ ಬೇಂಗಿಲ, ಇಬ್ರಾಹಿಂ ನಿರ್ಕಜೆ, ಶರೀಫ್ ಮಿತ್ತೆರಿಪಾದೆ, ಸಮದ್ ಬೊಳ್ಳಗುಳಿ, ರವೂಫ್ ಸೋಕಿಲ, ನಾಸಿರ್ ಹೊಸೊಕ್ಲು, ಇರ್ಪಾನ್ ಕೆದಿಲ, ಸ್ವಾದಿಕ್ ಸೋಕಿಲ, ಕಾಸಿಂ ಬೇಂಗಿಲ, ಇರ್ಪಾನ್ ಪೊರ್ಕಳ, ಲತೀಪ್ ಕೊಳ್ಯ ಮುಂತಾದವರನ್ನು ಆಯ್ಕೆ ಮಾಡಲಾಯಿತು.

ಹೈದರ್ ಸ್ವಾಗತಿಸಿ ಧನ್ಯವಾದಗೈದರು.

error: Content is protected !! Not allowed copy content from janadhvani.com