janadhvani

Kannada Online News Paper

ಅತ್ತಾಜೆ : ಅಸ್ಸಯ್ಯಿದ್ ತಾಜುಲ್ ಉಲಮಾ ಅನುಸ್ಮರಣಾ ಸಂಗಮ.

ಉಜಿರೆ: ಮುಹಿಯುದ್ದೀನ್ ಜುಮಾ ಮಸ್ಜಿದ್ ಹಳೆಪೇಟೆ ಉಜಿರೆ ಇದರ ಅಂಗಸಂಸ್ಥೆಯಾದ ಅರಫಾ ಜಾಮೀಯ ಮಸ್ಜಿದ್ ಅತ್ತಾಜೆ ಹಾಗೂ SYS & SSF ಅತ್ತಾಜೆ ಇದರ ಜಂಟಿ ಆಶ್ರಯದಲ್ಲಿ ಶೈಖುನಾ ತಾಜುಲ್ ಉಲಮಾ ಅನುಸ್ಮರಣಾ ಸಂಗಮವು ದಿನಾಂಕ 25.01.2020 ನೇ ಶನಿವಾರ ಮಗ್ರಿಬ್ ನಮಾಝಿನ ಬಳಿಕ ಅರಫಾ ಜಾಮಿಯ ಮಸ್ಜಿದ್ ವಠಾರದಲ್ಲಿ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಫಾ ಜಾಮಿಯ ಮಸ್ಜಿದ್, ಅತ್ತಾಜೆ ಹಾಗೂ SYS ಅತ್ತಾಜೆ ಬ್ರಾಂಚ್‌ನ ಅಧ್ಯಕ್ಷರಾದ ಆಸಿಫ್ ರವರು ವಹಿಸಿದ್ದರು.
ಈ ಕಾರ್ಯಕ್ರಮವನ್ನು ಸುನ್ನಿ ಸಂಯುಕ್ತ ಜಮಾಅತ್ ಬೆಳ್ತಂಗಡಿ ತಾಲೂಕಿನ ಅಧ್ಯಕ್ಷರಾದ ಅಸ್ಸಯ್ಯಿದ್ ಇಸ್ಮಾಯಿಲ್ ಅಲ್‌ಹಾದಿ ಮದನಿ ತಂಙಳ್ ಉದ್ಘಾಟಿಸಿದರು.
ಅಸ್ಸಯ್ಯಿದ್ ಹಬೀಬುಲ್ಲಾಹಿ ಮದನಿ ತಂಙಳ್,ಕುಪ್ಪೆಟ್ಟಿ ದುಃಅ ನೇತೃತ್ವ ನೀಡಿದರು. ಮುಹಿಯುದ್ದೀನ್ ಜುಮಾ ಮಸ್ಜಿದ್ ಹಳೆಪೇಟೆ ಉಜಿರೆ ಖತೀಬರಾದ ಅಲ್‌ಹಾಜ್ B.A ಅಬ್ಬಾಸ್ ಮದನಿ ಪ್ರಾಸ್ತಾವಿಕ ಭಾಷಣ ಮಾಡಿದರು.SSF ಕರ್ನಾಟಕ ರಾಜ್ಯ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ,ಕನ್ಯಾನ ಮುಖ್ಯ ಪ್ರಭಾಷಣ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಜಿರೆ ಸದಸ್ಯರಾದ ಅಶ್ರಫ್ ರವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ MJM ಹಳೆಪೇಟೆ ಉಜಿರೆ ಅಧ್ಯಕ್ಷರಾದ B.M ಹಮೀದ್ ಹಾಜಿ,ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ S.M ಕೋಯ ತಂಙಳ್,ಅರಫಾ ಜಾಮಿಯ ಮಸ್ಜಿದ್ ಅತ್ತಾಜೆ ಹಾಗೂ SYS ಅತ್ತಾಜೆ ಬ್ರಾಂಚ್ ಪ್ರ.ಕಾರ್ಯದರ್ಶಿ ಅಶ್ರಫ್ ಮೆಡಿಕಲ್, ಕೋಶಾಧಿಕಾರಿ ಯೂಸುಫ್,MJM ಹಳೆಪೇಟೆ ಉಜಿರೆ ಪ್ರ.ಕಾರ್ಯದರ್ಶಿ A.M ಶರೀಫ್,AJM ಸ್ವಲಾತ್ ಕಮಿಟಿ ಅಧ್ಯಕ್ಷರಾದ ಯೂಸುಫ್,SYS ಉಜಿರೆ ಸೆಂಟರ್ ಅಧ್ಯಕ್ಷರಾದ ಅಬ್ದುರ್ರಶೀದ್ ಬಲಿಪಾಯ ನೆರಿಯ, ಪ್ರ.ಕಾರ್ಯದರ್ಶಿ ಖಾಲಿದ್ ಮುಸ್ಲಿಯಾರ್ ಉಜಿರೆ, ಕೋಶಾಧಿಕಾರಿ ಇಬ್ರಾಹೀಂ ಅತ್ತಾಜೆ,SSF ಉಜಿರೆ ಸೆಕ್ಟರ್ ಅಧ್ಯಕ್ಷರಾದ ಮುಹಮ್ಮದ್ ಇಕ್ಬಾಲ್ ಮಾಚಾರು, SSF/ SYS ಉಜಿರೆ ಗಲ್ಫ್ ಸದಸ್ಯರಾದ ಬಶೀರ್, ಮನ್ಸೂರ್ ಅತ್ತಾಜೆ, ಯಂಗ್‌ಮೆನ್ಸ್ ಅಧ್ಯಕ್ಷರಾದ ಸಿದ್ದೀಕ್ ವಾಫಿರ್,SSF ಅತ್ತಾಜೆ ಯುನಿಟ್ ಅಧ್ಯಕ್ಷರಾದ ಅಬ್ದುಲ್ ಮಜೀದ್, ಪ್ರ.ಕಾರ್ಯದರ್ಶಿ ಝುಬೈರ್ ಹಾಗೂ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಎಂ.ಎಂ.ಉಜಿರೆ

error: Content is protected !! Not allowed copy content from janadhvani.com