ಮಂಜೇಶ್ವರ: ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಶಾಂತಿಯುತ ಪ್ರತಿಭಟನೆಗಳನ್ನು ದಬ್ಬಾಳಿಕೆಗಳಿಂದ ಧಮನಿಸಲು ಅಸಾಧ್ಯವೆಂದು ಖದಮುಲ್ ಮಳ್ಹರ್ ಓಲ್ಡೀಸ್ ಫೋರಂ ಅಭಿಪ್ರಾಯ ಪಟ್ಟಿತು.
ಹಸನ್ ಸಅದಿ ಅಲ್-ಅಫ್ಲಲಿ ಉಸ್ತಾದರು ಓಲ್ಡೀಸ್ ಫೋರಂ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು.ಮಳ್ಹರ್ ಮುದರ್ರಿಸ್ ಕುಂಙ್ಞಾಲಿ ಸಕಾಫಿ ಕೊಟೂರ್ ಸಭೆಯನ್ನು ಉದ್ಘಾಟಿಸಿದರು.
ಸಯ್ಯಿದ್ ಮುಸ್ತಫಾ ಸಿದ್ದಿಕಿ ಅಲ್-ಬುಖಾರಿ ಮಲಪ್ಪುರಂ ಪ್ರಾರ್ಥನೆಗೈದರು.
ವಿವಿಧ ಸೆಶನ್ ಗಳಿಗೆ ಸೈಯದ್ ಜಲಾಲುದ್ದೀನ್ ಸಅದಿ ಅಲ್-ಬುಖಾರಿ, ಉಮರುಲ್ ಫಾರೂಕ್ ಮದನಿ ಮಚ್ಚಂಪಾಡಿ ಮತ್ತು ಝುಬೈರ್ ಜಖಾಫಿ ವಟ್ಟೋಲಿ ನೇತೃತ್ವ ನೀಡಿದರು.ಹಸನ್ ಸಅದಿ ಅಲ್-ಅಫ್ಲಲಿ ಹೊಸ ಪದಾಧಿಕಾರಿಗಳನ್ನು ಘೋಷಿಸಿದರು.
ಅಧ್ಯಕ್ಷರು: ಜಾಬಿರ್ ಸಖಾಫಿ ಕೊಡಂಬುಝ, ಪ್ರಧಾನ ಕಾರ್ಯದರ್ಶಿ:ನೌಫಲ್ ಸಖಾಫಿ ಪಾಣೆಮಂಗಳೂರು, ಕೋಶಾಧಿಕಾರಿ:ಉಮೈರ್ ಸಖಾಫಿ ಕಳತ್ತೂರ್
ನವಾಝ್ ಸಖಾಫಿ ಕೊಟ್ಯಾಡಿ, ಅನ್ಸಾರ್ ಸಖಾಫಿ ಮೋರ್ಲ, ಸಿದ್ದೀಕ್ ಸಖಾಫಿ ಬಳ್ಳಾರಿ (ಉಪಾಧ್ಯಕ್ಷರು)
ಮುಹಮ್ಮದ್ ಸಖಾಫಿ ಬಡಕಬೈಲ್
ತ್ವಯ್ಯಿಬ್ ಬಾಳೇಪುಣಿ
ರಶೀದ್ ಗುವೆದಪ್ಪಡ್ಪು (ಜೊತೆ ಕಾರ್ಯದರ್ಶಿಗಳು),
ಅಬ್ದುಲ್ ಬಾರಿ ಸಖಾಫಿ ಪಾಪಿಲ, ಶಿಹಾಬುದ್ದೀನ್ ಸಖಾಫಿ ಈಶ್ವರಮಂಗಲ, ಅಶ್ರಫ್ ಸಖಾಫಿ ಅಡೂರ್ ಮತ್ತು ಹಬೀಬುಲ್ಲಾ ತಲಕ್ಕಿ ನೂತನ ಸೆಕ್ರಟ್ಟರಿಯೇಟ್ ಸದಸ್ಯರಾಗಿ ಆಯ್ಕೆಯಾದರು.