ರಿಯಾದ್ : ಮಜ್ಲಿಸ್ ಅಶ್ಶಿಫ್ಫಾ ಆದೂರು ಇದರ ರಿಯಾದ್ ಘಟಕ ವತಿಯಿಂದ ಸ್ನೇಹ ತೀರ ಕಾರ್ಯಕ್ರಮ ರಿಯಾದ್ ನ ಅಪೊಲ್ಲೊ ದಿಮೋರ್ ಹೋಟೆಲ್ ನಲ್ಲಿ ಶುಕ್ರವಾರ
ನಡೆಯಿತು.

ಕಾರ್ಯಕ್ರಮವನ್ನು ಐಸಿಎಫ್ ನ ಲುಕ್ಮಾನ್ ಪಯ್ಯೂರ್ ಉದ್ಘಾಟಿಸಿದರು. ನಂತರ ಅಬ್ದುಲ್ಲಾ ಸಖಾಫಿ ಮಲಪುರಂ ನಬಿಯವರ ಮೇಲಿನ ಪ್ರೀತಿಯ ಮಹತ್ವದ ಬಗ್ಗೆ ಪ್ರಭಾಷಣ ನಡೆಸಿದರು.


ಮುಡಿಪು ಎಜುಪಾರ್ಕ್ ರೂವಾರಿ ಸಯ್ಯಿದ್ ಮುಹಮ್ಮದ್ ಅಶ್ರಫ್ ತಂಙಳ್ ಸಖಾಫ್ ಅಲ್ ಮದನಿ ದುವಾ ನೆರವೇರಿಸಿ ಮಾತನಾಡಿದರು. ರಬೀಉಲ್ ಅವ್ವಲ್ ಮಾಸವು ಹೃದಯ ಶುದ್ದಿ ಹಾಗೂ ಪಾಪ ಮೋಚನೆಗೆ ಕಾರಣವಾಗಿದೆ, ಎಂದ ಅವರು, ಮಜ್ಲಿಸ್ ನ ಕಾರ್ಯವೈಖರಿ, ವಯಸ್ಕರ ಖುರಾನ್ ಶಿಕ್ಷಣ ಹಾಗೂ ಮಕ್ಕಳ ಝಹ್ರತುಲ್ ಖುರಾನ್ ತರಗತಿಯ ಬಗ್ಗೆ ವಿವರಿಸಿದರು.

ಕೆಸಿಎಫ್ ರಿಯಾದ್ ಝೋನ್ ಅಧ್ಯಕ್ಷ ಫಾರೂಕ್ ಸಅದಿ ಅವರು ಸಯ್ಯದ್ ಕುಟುಂಬದ ಮಹತ್ವದ ಬಗ್ಗೆ ವಿವರಿಸಿದರು. ಸ್ವಾಗತ ಸಮಿತಿ ಚೇರ್ಮನ್ ಸಿತಾರ್ ಮುಹಮ್ಮದ್ ಹಾಜಿ, ದಾವೂದ್ ಸಅದಿ, ಅಬ್ದುಲ್ ರಜಾಕ್ ಹಾಜಿ, ಹುಸೈನಾರ್ ಉಸ್ತಾದ್, .ಅಬ್ದುಲ್ ಲತೀಫ್ ಯುನಿವರ್ಸಲ್, ಡಾ ಅಬ್ದುಲ್ ಮೊಯೀನ್ ಎಸ್. ಬ್ಯಾರಿ, ನವಾಝ್ ದೀರಾ, ಅಬ್ದುಲ್ ಜಲೀಲ್, ಹಂಝ ಉಸ್ತಾದ್ ಪೊನ್ನಂಪೇಟೆ ಮತ್ತಿತರರು ಉಪಸ್ಥಿತರಿದ್ದರು. ಇಲ್ಯಾಸ್ ಲತೀಫಿ ಖಿರಾತ್ ಪಠಿಸಿದರು.
ನಿಝಾಂ ಸಾಗರ್ ಸ್ವಾಗತಿಸಿದರು. ಅಶ್ರಫ್ ಮದನಿ ಮಡಂತ್ಯಾರ್ ವಂದಿಸಿದರು.
ವರದಿ- ಹಕೀಂ ಬೋಳಾರ್















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು