ಅಬುಧಾಬಿ: ಸಾಲ ಪೀಡಿತರಿಗೆ ಸಹಾಯ ಮಾಡುವ ಉದ್ದೇಶದಿಂದ ಯುಎಇ ಜಾರಿಗೊಳಿಸಲಿರುವ ಕಾನೂನಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಜನವರಿಯಿಂದ ಜಾರಿಗೊಳ್ಳುವ ಕಾನೂನಿನ ಸಿದ್ಧತೆಗಳು ಪ್ರಾರಂಭಗೊಂಡಿದೆ. ಸೆರೆವಾಸವನ್ನು ತಪ್ಪಿಸುವ ಮೂಲಕ ಸಾಲವನ್ನು ತೀರಿಸುವ ಮಾರ್ಗಗಳನ್ನು ಕಂಡುಕೊಳ್ಳುವ ಕಾನೂನು ನೂರಾರು ಜನರಿಗೆ ಪ್ರಯೋಜವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಹಣಕಾಸಿನ ಬಿಕ್ಕಟ್ಟಿನಲ್ಲಿ ತಪ್ಪಿತಸ್ಥರೆಂದು ಕಂಡುಬರುವ ಸಾಧ್ಯತೆಯನ್ನು ತೊಡೆದುಹಾಕುವ ಉದ್ದೇಶವನ್ನು ಹೊಸ ಕಾನೂನು ಹೊಂದಿದೆ, ಮತ್ತು ವ್ಯಕ್ತಿಗಳಿಗೆ ಕೆಲಸ ಮಾಡಲು ಮತ್ತು ವ್ಯಾಪಾರ ಮಾಡಲು ಅವಕಾಶವನ್ನು ಒದಗಿಸುತ್ತದೆ.ಈ ಸಮಯದಲ್ಲಿ ಬ್ಯಾಂಕ್ನಿಂದ ಸಾಲ ಪಡೆಯಲು ಮತ್ತು ಚೆಕ್ ನೀಡಲು ಯಾವುದೇ ನಿಷೇಧವಿರುವುದಿಲ್ಲ.
ನಿಗದಿತ ಸಮಯದೊಳಗೆ ವ್ಯಕ್ತಿಗಳು ತಮ್ಮ ಸಾಲವನ್ನು ತೀರಿಸುವ ಹಕ್ಕನ್ನು ಹೊಂದಿರುವುದು ಇದರ ಗುರಿಯಾಗಿದೆ. ಸಿವಿಲ್ ವಿಚಾರಣೆ ಮತ್ತು ಪೊಲೀಸ್ ಚೆಕ್ ಪ್ರಕರಣಗಳಲ್ಲಿ ಮೊಕದ್ದಮೆ ಹೂಡಲ್ಪಟ್ಟವರು ಹೊಸ ಕಾನೂನನ್ನು ಎದುರು ನೋಡುತ್ತಿದ್ದಾರೆ. ಯುಎಇಯ ಉದ್ಯಮಿಗಳು ಕೂಡ ಕಾನೂನನ್ನು ಸ್ವಾಗತಿಸುತ್ತಿದ್ದಾರೆ.
ಲಭಿಸಲು ಮತ್ತು ಪಾವತಿಸಲು ಬಾಕಿ ಇರುವ ಮೊತ್ತದ ವಿವರವಾದ ವರದಿಯನ್ನು ಸಿವಿಲ್ ನ್ಯಾಯಾಲಯಕ್ಕೆ ಸಮರ್ಪಿಸಿ ಸರಕಾರ ಪರವಾಗಿ ಸಮಿತಿಗೆ ದೂರುಗಳನ್ನು ಸಲ್ಲಿಸಬೇಕು. ಪ್ರತಿಯೊಂದು ಪ್ರಕರಣದ ತೀರ್ಪನ್ನು ಸಮಿತಿ ನಿರ್ಧರಿಸುತ್ತದೆ.
ದಿವಾಳಿತನದ ವಿಚಾರಣೆಯ ಪ್ರಕಾರ, ಮೂರು ವರ್ಷಗಳ ಕಾಲಾವಧಿಯನ್ನು ಅನುಮತಿಸಲಾಗುತ್ತದೆ. ಈ ಸಮಯದೊಳಗೆ ಸಾಲವನ್ನು ತೀರಿಸಿರಬೇಕು. ಈಅವಧಿಯಲ್ಲಿ, ಕಾನೂನು ಕ್ರಮವನ್ನು ನಿಲ್ಲಿಸಲಾಗುತ್ತದೆ. ಕಾನೂನಿನ ವಿಶಿಷ್ಟತೆಯೆಂದರೆ, ಸಾಲಗಾರನು ಹಣವನ್ನು ಕಳೆದುಕೊಳ್ಳದ ಪರಿಸ್ಥಿತಿಯನ್ನು ಸೃಷ್ಟಿಸಲು ಸಾಕಷ್ಟು ಅವಕಾಶವನ್ನು ನೀಡಲಾಗುತ್ತದೆ.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ