ಕುವೈತ್ ಸಿಟಿ: ಖಾಸಗಿ ವಲಯದ ಸಿಬ್ಬಂದಿ ಏಳು ದಿನಗಳು ನಿರಂತರವಾಗಿ ಕೆಲಸಕ್ಕೆ ಗೈರು ಹಾಜರಾದರೆ ಅವರು ರಾಜಿನಾಮೆ ನೀಡಿರುವುದಾಗಿ ಪರಿಗಣಿಸುವಂತೆ ಕುವೈತ್ ಸಂಸತ್ತು ನಿರ್ದೇಶನ ನೀಡಿದೆ.
ಕಾರ್ಮಿಕರ ವಿರುದ್ಧ ನೀಡಲಾಗುವ ದೂರಿನಲ್ಲಿ ಸಾಕ್ಷ್ಯಗಳ ಬೆಂಬಲವಿದ್ದರೆ ವಾಸ ಪರವಾನಗಿ ರದ್ದು ಪಡಿಸುವಂತೆ ಕಾನೂನಿನಲ್ಲಿ ಬದಲಾವಣೆ ತರಬೇಕೆಂದು ಸಂಸದರು ಬೇಡಿಕೆ ಇಟ್ಟಿದ್ದಾರೆ. ಮುಹಮ್ಮದ್ ಅಲ್ ದಲಾಲ್, ಅಹ್ಮದ್ ಅಲ್ ಫಾದಿಲ್, ಸಫ ಅಲ್ ಹಾಶಿಂ, ಖಾಲಿದ್ ಅಲ್ ಶತ್ತಿ, ಸಲಾಹ್ ಅಲ್ ಖುರ್ಷಿದ್ ಮುಂತಾದ ಸಂಸದರು ಈ ಬೇಡಿಕೆ ಮುಂದಿಟ್ಟಿದ್ದಾರೆ.
ಕಾರಣ ಇಲ್ಲದೆ ಖಾಸಗಿ ವಲಯದ ಕಾರ್ಮಿಕರು ಒಂದು ವಾರದ ವರೆಗೆ ನಿರಂತರವಾಗಿ ಅಥವಾ ವರ್ಷದಲ್ಲಿ 20 ದಿನಗಳಿಗಿಂತ ಅಧಿಕ ರಜೆ ಪಡೆದರೆ ಅಂಥವರು ಕೆಲಸಕ್ಕೆ ರಾಜಿನಾಮೆ ನೀಡಿರುವುದಾಗಿ ಪರಿಗಣಿಸಬೇಕೆಂದು ನಿರ್ದೇಶನ ನೀಡಲಾಗಿದೆ. ಇಂತಹ ಸನ್ನಿವೇಶದಲ್ಲಿ ಸಂಸ್ಥೆಯ ಕಡತದಿಂದ ಕಾರ್ಮಿಕನ ಹೆಸರನ್ನು ಕಿತ್ತು ಹಾಕಲು ಉದ್ಯೋಗದಾತನಿಗೆ ಅವಕಾಶ ನೀಡಬೇಕೆಂದು ನಿರ್ದೇಶನ ನೀಡಲಾಗಿದೆ.
ವಾರ್ಷಿಕ ರಜಾದಲ್ಲಿ ತೆರಳಿ ಆರು ತಿಂಗಳ ವರೆಗೆ ಊರಲ್ಲಿ ಉಳಿದು ಕೊಳ್ಳುವ ಕಾರ್ಮಿಕರಿದ್ದು, ಕಾರ್ಮಿಕ ಗೈರಾದ ಕಾರಣ ಇದರ ವಿರುದ್ದ ದೂರು ನೀಡಲು ಉದ್ಯೋಗದಾತನಿಗೆ ಸಾಧ್ಯವಾಗದ ಪರಿಸ್ಥಿತಿ ಇದೆ. ಕಾರ್ಮಿಕ ಹಕ್ಕಿನಂತೆ ಉದ್ಯೋಗದಾತರ ಹಕ್ಕು ಕೂಡ ಸಂರಕ್ಷಣೆ ಮಾಡಬೇಕಾಗಿದೆ ಎಂದು ಸಂಸದರು ಬೆಟ್ಟು ಮಾಡಿದ್ದಾರೆ.
ಮನ್ಪವರ್ ಅಥಾರಿಟಿಯಲ್ಲಿ ಸಮರ್ಪಿಸುವ ದೂರುಗಳಿಗೆ ಸಾಕ್ಷ್ಯದ ಹಿನ್ನೆಲೆ ಇದ್ದರೆ ಕಾರ್ಮಿಕರ ವಾಸ ಪರವಾನಗಿ ರದ್ದು ಮಾಡುವ ರೀತಿಯಲ್ಲಿ ಕಾನೂನಿಗೆ ತಿದ್ದುಪಡಿ ತರಬೇಕು ಎಂದು ನಿರ್ದೇಶನದಲ್ಲಿ ಎಂಪಿಗಳು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ