ನವೆಂಬರ್ 7 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಎಸ್.ವೈ.ಎಸ್.ನ “ಹುಬ್ಬುರ್ರಸೂಲ್ ಕಾನ್ಫರೆನ್ಸ್ ನ ಭಾಗವಾಗಿ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ “ತ್ವಯ್ಬಾ ಮೀಟ್” ಕಾರ್ಯಕ್ರಮ ಪಾಣೆಮಂಗಳೂರು ಸಾಗರ ಆಡಿಟೋರಿಯಂ ನಲ್ಲಿ ನಡೆಯಿತು.
ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಎಚ್.ಝುಹ್ರಿ ಕೊಂಬಾಳಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಸ್.ವೈ.ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಸಭೆಯನ್ನು ಉದ್ಘಾಟಿಸಿ, ಹುಬ್ಬುರ್ರಸೂಲ್ ಕಾನ್ಫರೆನ್ಸ್ ನ ಯೋಜನೆಯನ್ನು ಮಂಡಿಸಿದರು. ರಾಜ್ಯ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಪ್ರವಾದಿ ಪ್ರೇಮಿಯಾಗಿ ಬದುಕುವುದರ ಮಹತ್ವ ಹಾಗೂ ಅನಿವಾರ್ಯತೆಯನ್ನು ಸವಿಸ್ತಾರವಾಗಿ ವಿವರಿಸಿದರು. ಜಿಲ್ಲಾ ಕೋಶಾಧಿಕಾರಿ ಮುಹಮ್ಮದ್ ಅಲಿ ತುರ್ಕಳಿಕೆ ತುರ್ಕಳಿಕೆ ಸಾಂಘಿಕ ಕಾರ್ಯಾಚರಣೆಯ ಸಾಕ್ಷಾತ್ಕಾರದತ್ತ ಬೆಳಕು ಚೆಲ್ಲಿದರು. ಕರೀಂ ಕದ್ಕಾರ್ ಬ್ಲಡ್ ಸೈಬೋದ ಕಾರ್ಯಾಚರಣೆಯ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರೀಫ್ ನಂದಾವರ, ಕ್ಯಾಂಪಸ್ ಕಾರ್ಯದರ್ಶಿ ಶರೀಫ್ ಬೆರ್ಕಳ,
ಜಿಲ್ಲಾ ಉಪಾಧ್ಯಕ್ಷ ತೌಸೀಫ್ ಸಅದಿ ಹರೇಕಳ, ಕಾರ್ಯದರ್ಶಿಗಳಾದ ಜಮಾಲ್ ಸಖಾಫಿ ಮುದುಂಗಾರ್, ರಶೀದ್ ಹಾಜಿ ವಗ್ಗ, ರಫೀಕ್ ಸುರತ್ಕಲ್, ಜಿಲ್ಲಾ ನಾಯಕರಾದ ನವಾಝ್ ಸಖಾಫಿ ಅಡ್ಯಾರ್ಪದವು, ಇಬ್ರಾಹಿಂ ಅಮ್ಜದಿ ಮಂಡೆಕೋಲು, ಮುನೀರ್ ಸಖಾಫಿ, ದಾವೂದುಲ್ ಹಕೀಂ ಕಳಂಜಿಬೈಲ್, ಮುಸ್ತಫ ಉರುವಾಲುಪದವು, ಈಸ್ಟ್ ಝೋನ್ ನಾಯಕರಾದ ಅಯ್ಯೂಬ್ ಮಹ್ಳರಿ ಕಾವಳಕಟ್ಟೆ, ಶಫೀಕ್ ಮಾಸ್ಟರ್ ತಿಂಗಳಾಡಿ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರೀಫ್ ನಂದಾವರ ಸ್ವಾಗತಿಸಿ, ರಶೀದ್ ಹಾಜಿ ವಗ್ಗ ವಂದಿಸಿದರು.