janadhvani

Kannada Online News Paper

ಅರ್ಹತೆಗೆ ಸಂದ ಗೌರವ..KCF ಮದೀನಾ ಮುನವ್ವರ ಸೆಕ್ಟರ್ ಸಾಂತ್ವನ ಇಲಾಖೆಗೆ ಸನ್ಮಾನ

ಸೌದಿ ಅರೇಬಿಯಾ: ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಮದೀನಾ ಮುನವ್ವರ ಝೋನ್ ಇದರ ಕಾರ್ಯಕಾರಿ ಸಮಿತಿಯ ಸಭೆಯು ದಿನಾಂಕ 04.10.2019 ರಂದು ಯಾಂಬುವಿನ ಕೆ.ಸಿ.ಎಫ್‌ ಭವನದಲ್ಲಿ ಮದೀನಾ ಝೋನ್ ಅಧ್ಯಕ್ಷರಾದ ಹಮೀದ್ ಉಸ್ತಾದ್ ಕರಾಯ ಇವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು.

ಝೋನ್ ಶಿಕ್ಷಣ ವಿಭಾಗದ ಕಾರ್ಯದರ್ಶಿಯಾದ ಇಕ್ಬಾಲ್ ಸ’ಅ’ದಿ ಕಾಟಿಪಳ್ಳ ರವರು ಖಿರಾ’ಅತ್ ಪಠಿಸುವ ಮೂಲಕ ಪ್ರಾರಂಭಿಸಿದ ಸಭೆಯನ್ನು ಮದೀನಾ ಮುನವ್ವರ ಸೆಕ್ಟರ್ ಅದ್ಯಕ್ಷರಾದ ಅಶ್ರಫ್ ಸಖಾಫಿ ನೂಜಿ ಉದ್ಘಾಟಿಸಿದರು.

ಸಭೆಯಲ್ಲಿ .. ಮದೀನಾದಲ್ಲಿ ಕೆ.ಸಿ.ಎಫ್ HVC (ಹಜ್ಜ್ ವ್ಯಾಲೆಂಟೀರ್ ಕೋರ್) ಗಾಗಿ ಸುಮಾರು ಐದಾರು ವರ್ಷಗಳಿಂದ ನಿರಂತರ ಕಾರ್ಯಾಚರಿಸಿದ ಮದೀನಾ ಸೆಕ್ಟರ್ ಸಾಂತ್ವನ ಇಲಾಖೆಯ ಕಾರ್ಯದರ್ಶಿ ಅಬ್ದುಲ್ ರಝಾಕ್ ಉಳ್ಳಾಲ್ ರವರನ್ನು KCF ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯು ನೀಡಿದ ಅಭಿನಂದನಾ ಫಲಕವನ್ನು ಝೋನ್ ಸಮಿತಿಯ ನಾಯಕರ ಉಪಸ್ಥಿತಿಯಲ್ಲಿ ನೀಡಿ ಗೌರವಿಸಲಾಯಿತು.

ದೇ ರೀತಿ ಮದೀನಾ ಮುನವ್ವರ ಸೆಕ್ಟರ್ ಸಾಂತ್ವನ ಇಲಾಖೆಯ ನಾಯಕರಾದ ತಾಜುದ್ದೀನ್ ಸುಳ್ಯ, ಜಬ್ಬಾರ್ ಉಳ್ಳಾಲ್, ಹಾಗೂ ಇಕ್ಬಾಲ್ ಕುಪ್ಪೆಪದವು ಅವರಿಗೂ ಝೋನ್ ಸಮಿತಿಯ ವತಿಯಿಂದ ಗೌರವಿಸಲಾಯಿತು.

ಕೆ.ಸಿ.ಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಸಾಂತ್ವನ ಇಲಾಖೆಯ ಕಾರ್ಯದರ್ಶಿ ಅಶ್ರಫ್ ಹಾಜಿ ಕಿನ್ಯ, ಯಾಂಬು ಸೆಕ್ಟರ್ ಅದ್ಯಕ್ಷರಾದ ಇಕ್ಬಾಲ್ ಅಲ್ ಫಲಾಹ್, ತಬೂಕ್ ಸೆಕ್ಟರ್ ಅದ್ಯಕ್ಷರಾದ ಅಬ್ಬೋನ್ ಮಂಜೇಶ್ವರ ಸಹಿತ ಝೋನ್ ಸಮಿತಿಯ ಇತರ ಪದಾಧಿಕಾರಿಗಳು ಭಾಗವಹಿಸಿದ್ದರು.

ಸಭೆಯನ್ನು ಕೆ.ಸಿ.ಎಫ್ ಮದೀನಾ ಮುನವ್ವರ ಝೋನ್ ಪ್ರಧಾನ ಕಾರ್ಯದರ್ಶಿ ಹುಸೈನಾರ್ ಮಾಪಲ್ ಸ್ವಾಗತಿಸಿದರು. ಝೋನ್ ಸಂಘಟನಾ ಇಲಾಖೆ ಕಾರ್ಯದರ್ಶಿ ಫಯಾಝ್ ಪಕ್ಷಿಕೆರೆ ಧನ್ಯವಾದಗೈದರು.

ವರದಿ:
ಆಸಿಫ್ ಬದ್ಯಾರ್

error: Content is protected !! Not allowed copy content from janadhvani.com