janadhvani

Kannada Online News Paper

SSFಅತ್ತಾಜೆ ಶಾಖೆ ವತಿಯಿಂದ ಸಂಭ್ರಮದ ಧ್ವಜದಿನ ಆಚರಣೆ

ಕರ್ನಾಟಕದ ಮಣ್ಣಿನಲ್ಲಿ SSF ಎಂಬ ಮಹಾ ಪ್ರಸ್ಥಾನವು ತನ್ನ ರಾಷ್ಟೀಯ ಧ್ವಜ ದಿನವನ್ನು ಹಲವಾರು ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಆಚರಿಸುವಾಗ SSF ಅತ್ತಾಜೆ ಶಾಖೆಯಲ್ಲಿ ಇಂದು ಅದ್ದೂರಿಯಾಗಿ ಧ್ವಜದಿನವನ್ನು ಅತ್ತಾಜೆ ಅರಫಾ ಜಾಮಿಯಾ ಮಸೀದಿ ವಠಾರದಲ್ಲಿ ಆಚರಿಸಲಾಯಿತು.

ಪ್ರಖ್ಯಾತ ವಾಗ್ಮಿ, ಯುವ ವಿದ್ವಾಂಸರಾದ ಬಹು. ಉಸ್ಮಾನ್ ಜೌಹರಿ ನೆಲ್ಯಾಡಿ ಧ್ವಜಾರೋಹಣ ನೆರವೇರಿಸಿದರು. ನಂತರ ಅತ್ತಾಜೆ ಮಸೀದಿ ಖತೀಬ್ ಉಸ್ತಾದ್ ಇಬ್ರಾಹಿಂ ಸ‌ಅದಿ ಸ್ವಾಗತಿಸಿ ಶುಭಕೋರಿದರು. ನಂತರ ಉಸ್ಮಾನ್ ಜೌಹರಿ ನೆಲ್ಯಾಡಿ ಸಂದೇಶ ಭಾಷಣ ಮಾಡಿದರು.

ಪ್ರಸ್ತುತ ಕಾರ್ಯಕ್ರಮದಲ್ಲಿ ಊರಿನ ಹಿರಿಯರು ಸ್ವಲಾತ್ ಸಮಿತಿ ಅಧ್ಯಕ್ಷರಾದ ಯೂಸುಫ್ U.A, ಅರಫಾ ಜಾಮಿಯಾ ಮಸೀದಿ ಅತ್ತಾಜೆ ಮತ್ತು SYS ಅತ್ತಾಜೆ ಬ್ರಾಂಚ್ ಅಧ್ಯಕ್ಷರಾದ ಆಸಿಫ್ ಅತ್ತಾಜೆ, SYS ನಾಯಕ S.M ಕೋಯ ತಂಙಳ್, SSF ಅತ್ತಾಜೆ ಶಾಖೆ ಅಧ್ಯಕ್ಷರಾದ ಅಬ್ದುಲ್ ಮಜೀದ್, ಪ್ರ.ಕಾರ್ಯದರ್ಶಿ ಝುಬೈರ್, ಕೋಶಾಧಿಕಾರಿ ಅಶ್ರಫ್ ಮೆಡಿಕಲ್, SSF/SYS ಗಲ್ಫ್ ಗ್ರೂಪ್‌ ಸದಸ್ಯ U.P ಉಮರ್ ಅತ್ತಾಜೆ, SYS ಉಜಿರೆ ನಾಯಕರಾದ ಅಶ್ರಫ್ KCF, ಹಾರಿಸ್ AtoZ, M.H. ಅಶ್ರಫ್, SSF ಉಜಿರೆ ಮಾಜಿ ಅಧ್ಯಕ್ಷರು ಶೆರೀಫ್ ನಿಝಾಮಿ ಅಲ್ ಮುಈನಿ, ಹಾಗೂ ಅತ್ತಾಜೆ ಅಡಳಿತ ಸಮಿತಿ ನಾಯಕರು, SSF SYS ಅತ್ತಾಜೆ ಮತ್ತು ಉಜಿರೆ ಶಾಖೆಯ ನಾಯಕರು ಕಾರ್ಯಕರ್ತರು, ಮದರಸ ವಿಧ್ಯಾರ್ಥಿಗಳು ಭಾಗವಹಿಸಿದ್ದರು.

ವರದಿ:ರವೂಫ್ ಅತ್ತಾಜೆ.

error: Content is protected !! Not allowed copy content from janadhvani.com