ದುಬೈ: ಯುಎಇಯಲ್ಲಿ ಉತ್ತಮ ಸೇವೆ ಮತ್ತು ಕಲಪೆ ಮಟ್ಟದ ಸೇವೆ ಸಲ್ಲಿಸುವ ಸರಕಾರಿ ಕಚೇರಿಗಳ ಪಟ್ಟಿಯನ್ನು ಹೊರಡಿಸಲಾಗಿದೆ.
ಯುಎಇ ಉಪಾಧ್ಯಕ್ಷ, ಪ್ರಧಾನಿ ಮತ್ತು ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಮ್ ದೇಶಾದ್ಯಂತ ಆರುನೂರಕ್ಕೂ ಹೆಚ್ಚು ಸರಕಾರಿ ಸೇವಾ ಕೇಂದ್ರಗಳ ಸಮಗ್ರ ವರದಿಯನ್ನು ಪರಿಶೀಲಿಸಿದ ಬಳಿಕ ಶನಿವಾರ ಈ ಘೋಷಣೆ ಮಾಡಿದ್ದಾರೆ. ತಪ್ಪುಗಳನ್ನು ಸರಿಪಡಿಸಲು ಸ್ವಯಂ ಮೌಲ್ಯಮಾಪನ ಮಾಡುವುದು ಅಗತ್ಯ ಎಂದು ಅವರು ಹೇಳಿದರು.
ಶೈಖ್ ಅವರು ಈ ಹಿಂದೆ ದೇಶದ ಸರಕಾರಿ ಕಚೇರಿಗಳ ಕೆಲಸವನ್ನು ಮೌಲ್ಯಮಾಪನ ಮಾಡಿ ಕೆಟ್ಟ ಮತ್ತು ಒಳ್ಳೆಯದನ್ನು ಗುರುತಿಸುವುದಾಗಿ ಘೋಷಿಸಿದ್ದರು.ಸರಿಯಾಗಿ ಕಾರ್ಯನಿರ್ವಹಿಸದ ಸಂಸ್ಥೆಗಳ ನಿರ್ದೇಶಕರನ್ನು ತಕ್ಷಣ ಬದಲಾಯಿಸಲಾಗಿದೆ.ಬದಲಾಗಿ ಹೇಗೆ ಉತ್ತಮ ಸೇವೆ ನೀಡಬೇಕೆಂದು ತಿಳಿದಿರುವ ಜನರನ್ನು ಅಲ್ಲಿಗೆ ನೇಮಿಸಲಾಗಿದೆ ಎಂದು ಶೈಖ್ ಮುಹಮ್ಮದ್ ಹೇಳಿದ್ದಾರೆ. ಉತ್ತಮವಾಗಿ ಕಾರ್ಯನಿರ್ವಹಿಸಿದ ಕಚೇರಿಗಳಲ್ಲಿರುವವರಿಗೆ ಬೋನಸ್ ಆಗಿ ಎರಡು ತಿಂಗಳ ವೇತನವನ್ನು ನೀಡಲಾಗುತ್ತದೆ.
ಉತ್ತಮ ಪ್ರದರ್ಶನ ನೀಡಿದ ಸಂಸ್ಥೆಗಳು
1. ಫೆಡರಲ್ ಅಥಾರಿಟಿ ಫೋರ್ ಐಡೆನ್ಟಿಟಿ ಆ್ಯಂಡ್ ಸಿಟಿಝನ್ಸಿಪ್ – ಫುಜೈರಾ ಕೇಂದ್ರ
2. ಶಿಕ್ಷಣ ಸಚಿವಾಲಯ – ಅಜ್ಮಾನ್ ಕೇಂದ್ರ
3. ಗೃಹ ಸಚಿವಾಲಯ – ಸಂಚಾರ ಮತ್ತು ಪರವಾನಗಿ ವಿಭಾಗ ಅಜ್ಮಾನ್ ಕೇಂದ್ರ
4. ಗೃಹ ಸಚಿವಾಲಯ – ವಾಸಿತ್ ಪೊಲೀಸ್ ಠಾಣೆ, ಶಾರ್ಜಾ
5. ಶೈಖ್ ಝಾಯಿದ್ ಹೌಸಿಂಗ್ ಪ್ರೋಗ್ರಾಂ, ರಾಸ್ ಅಲ್ ಖೈಮಾ ಕೇಂದ್ರ
ಕಳಪೆ ಪ್ರದರ್ಶನ ನೀಡಿದ ಸಂಸ್ಥೆಗಳು
1. ಎಮಿರೇಟ್ಸ್ ಪೋಸ್ಟ್ ಗ್ರೂಪ್, ಅಲ್ ಖಾನ್, ಶಾರ್ಜಾ ಸೆಂಟರ್
2. ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಅಂಡ್ ಸಿಟಿಝನ್ಶಿಪ್, ಅಲ್ ಮುಹೈಸಿನಾ ಸೆಂಟರ್ ಫಾರ್ ಪ್ರಿವೆಂಟಿವ್ ಮೆಡಿಸಿನ್, ದುಬೈ
3. ಸಾಮಾನ್ಯ ಪಿಂಚಣಿ ಮತ್ತು ಸಾಮಾಜಿಕ ಭದ್ರತಾ ಪ್ರಾಧಿಕಾರ, ಶಾರ್ಜಾ ಕೇಂದ್ರ
4. ಸಮುದಾಯ ಅಭಿವೃದ್ಧಿ ಸಚಿವಾಲಯ, ಸಾಮಾಜಿಕ ವ್ಯವಹಾರ ಕಚೇರಿ ಅಬುಧಾಬಿ, ಬನಿಯಾಸ್ ಕೇಂದ್ರ
5. ಮಾನವ ಸಂಪನ್ಮೂಲ ಸ್ಥಳೀಯ ಅಭಿವೃದ್ಧಿ ಸಚಿವಾಲಯ, ಫುಜೈರಾ ಕೇಂದ್ರ















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ