ಏಕ ಇಲಾಹನ ಸಂತೃಪ್ತಿಗೆ ಬೇಕಾಗಿ ತನ್ನ ಸರ್ವಸ್ವವನ್ನು ತ್ಯಾಗ ಮಾಡಿ ಏಕೈಕ ಮಗನನ್ನು ಬಲಿ ಅರ್ಪಿಸಲು ಸಿದ್ಧರಾದಂತಹಾ ಇಬ್ರಾಹಿಂ ನಬಿ (ಅ) ಹಾಗೂ ಸೃಷ್ಟಿಕರ್ತನ ನಿರ್ದೇಶನಕ್ಕೆ ಸಂಪೂರ್ಣವಾಗಿ ಬೆಂಬಲ ಸೂಚಿಸಿದ ಧರ್ಮಪತ್ನಿ ಹಾಜರ ಬೀವಿ (ರ) ಮತ್ತು ತನ್ನ ಜೀವ ಸಮರ್ಪಿಸಲು ನಿಂತ ಪ್ರಿಯ ಪುತ್ರ ಇಸ್ಮಾಯಿಲ್ ನಬಿ (ಅ)ರವರ ತ್ಯಾಗೋಜ್ವಲ ಜೀವನವನ್ನು ಸ್ಮರಿಸುವ ಈದುಲ್ ಅಳ್ಹಾ ಅಥವಾ ಬಕ್ರೀದ್ ಹಬ್ಬವನ್ನು ಇಂದು ರಾಜ್ಯಾದ್ಯಂತ ಮುಸ್ಲಿಮರು ಬಹಳ ಸಂಭ್ರಮದಿಂದ ಆಚರಿಸಿದರು.
ಹೊನ್ನಾವರ ಹೆರಂಗಡಿ ಬಿಲಾಲ್ ಮಸ್ಜಿದ್ ನಲ್ಲಿ ನಡೆದ ಈದ್ ನಮಾಜ್ ಗೆ ಖತೀಬರಾದ ಮುಹಮ್ಮದ್ ಅಲ್ ಹಿಕಮಿ ಮಳಲಿ ನೇತೃತ್ವ ನೀಡಿದರು. ಬಕ್ರೀದ್ ಹಬ್ಬವು ಮುಸ್ಲಿಂ ಸಮುದಾಯಕ್ಕೆ ಸಂತೋಷ ತುಂಬುವ ನಿಮಿಷ. ಕಷ್ಟ-ನಷ್ಟದ ದುಃಖ-ದುಮ್ಮಾನಗಳು ಇದ್ದೇ ಇರುತ್ತೆ ಅದಕ್ಕೊಂದು ಪರಿಹಾರವಾಗಿ ಇಬ್ರಾಹಿಂ ನಬಿ(ಅ)ರವರ ಕುಟುಂಬದ ಅವಿಸ್ಮರಣೀಯ ಸಮರ್ಪಣಾ ಜೀವನವನ್ನು ನೆನಪಿಸಿ ಪರಸ್ಪರ ಪ್ರೀತಿ ಸೌಹಾರ್ದತೆ, ಸಹಬಾಳ್ವೆ ಸಾರುವ ಬಲಿ ಪೆರ್ನಾಳ್ ಇಸ್ಲಾಮಿನ ಅಚ್ಚುಕಟ್ಟಾದ ನಿಯಮ ಪ್ರಕಾರ, ಉತ್ತಮ ರೀತಿಯಲ್ಲಿ ಆಚರಿಸುವ ಮೂಲಕ ಇರುವ ಮನಸ್ತಾಪಗಳೆಲ್ಲವನ್ನೂ ಮರೆತು ನಾವೆಲ್ಲರೂ ಒಂದಾಗಿ ಒಗ್ಗಟ್ಟಾಗಿ ಸ್ನೇಹ ಭಾತೃತ್ವವನ್ನು ತುಂಬಿಸುವ ಸುದಿನವಾಗಿದೆ ಇದು ಎಂದು ತಮ್ಮ ಈದ್ ಸಂದೇಶದಲ್ಲಿ ತಿಳಿಸಿದರು.
ಕುಟುಂಬ ಸಂಬಂಧ ಗಟ್ಟಿಗೊಳಿಸಿ, ದಾನ ಧರ್ಮಗಳನ್ನು ಅಧಿಕಗೊಳಿಸಿ ಈ ಹಬ್ಬ ನಮ್ಮಲ್ಲೊಂದು ಪರಿವರ್ತನೆ ಉಂಟು ಮಾಡಬೇಕು. ಸತ್ಕರ್ಮಗಳನ್ನು ಅಧಿಕಗೊಳಿಸಿ ಉತ್ತಮ ವ್ಯಕ್ತಿಗಳಾಗಿ ಬದಲಾಗಬೇಕು. ಕೆಡುಕಿನಿಂದ ಒಳಿತಿನೆಡೆಗೆ ಸಾಗಿ ಆತ್ಮೀಯ ಚೈತನ್ಯ ತುಂಬುವಂತಹ ಪ್ರೀತಿ ಸಹೋದರತೆಯ ಸಹಿಷ್ಣುತೆಯ ಹೂ ಬಿಟ್ಟು ಆತ್ಮೀಯ ಪರಿಮಳ ಸೂಸುವ ಈದುಳ್ ಅಳ್ಹಾವಾಗಿ ಸಂಭ್ರಮಿಸೋಣ. ಅಲ್ಲಾಹನ ಸಂತೃಪ್ತಿಗೆ ಪಾತ್ರರಾಗೋಣ ಎಂದು ಮುಹಮ್ಮದ್ ಅಲ್ ಹಿಕಮಿ ಮಳಲಿ (ಖತೀಬರು ಬಿಲಾಲ್ ಮಸ್ಜಿದ್ ಹೆರಂಗಡಿ) ಹಾರೈಸಿದರು.
















ಇನ್ನಷ್ಟು ಸುದ್ದಿಗಳು
ಮಾದಕ ವಸ್ತು ‘ಖಾತ್’ ಮಾರಾಟ: ಭಾರತೀಯ ಪ್ರಜೆ ಸೌದಿಯಲ್ಲಿ ಬಂಧನ
ಅನಿವಾಸಿಗಳಿಗೆ ಶುಭ ಸುದ್ದಿ: ಕುವೈತ್ನಿಂದ ಭಾರತೀಯ ವಿಮಾನ ಸೇವೆಗಳು ಪುನರಾರಂಭ
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ