ಖತ್ತರ್ : ಕೆ.ಸಿ.ಎಫ್ ಖತ್ತರ್ ರಾಷ್ಟ್ರೀಯ ಸಮಿತಿಯ ವತಿಯಿಂದ ಪವಿತ್ರ ಮುಹರ್ರಂ ತಿಂಗಳ ಸಂ\nದೇಶ ಕಾರ್ಯಕ್ರಮವು ದಿನಾಂಕ 6-9-2019 ರಂದು ಶುಕ್ರವಾರ ಕೆ.ಸಿ.ಎಫ್ ಸೆಂಟರ್ ಮೈದರ್ ನಲ್ಲಿ ಜರಗಿತು. ಕೆ.ಸಿ.ಎಫ್ ಖತ್ತರ್ ರಾಷ್ಟೀಯ ಸಮಿತಿಯ ಅಧ್ಯಕ್ಷರಾದ ಯೂಸುಫ್ ಸಖಾಫಿ ಅಯ್ಯಂಗೇರಿ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಇಸ್ಮಾಯಿಲ್ ಸಅದಿ ಕಿನ್ಯರವರು ಉದ್ಘಾಟಿಸಿದರು.

“ಹಿಜಿರಾ ಪಲಾಯನವಲ್ಲ ಹೊಸತನಕ್ಕೆ ಪಯಣ” ಎಂಬ ವಿಷಯದಲ್ಲಿ ಮುಹರ್ರಮಿನ ಮಹತ್ವ ಮತ್ತು ಸಂದೇಶ ಭಾಷಣ ನೀಡಿದ ಹಾಫಿಳ್ ಉಮರುಲ್ ಫಾರೂಖ್ ಸಖಾಫಿ ಎಮ್ಮೆಮಾಡುರವರು, ಧರ್ಮದ ಹೆಸರಿನಲ್ಲಿ ಒಂದು ವಿಭಾಗವು, ಮುಹರ್ರಂ ದೈವಿಕ ಶಕ್ತಿ ಎಂಬ ನೆಪದಲ್ಲಿ ನಡೆಸುತ್ತಿರುವ ಮಾಯ ಪ್ರದರ್ಶನವು ಅರ್ಥಶೂನ್ಯ ಆಚಾರವಾಗಿದೆ ಎಂದು ಹೇಳಿದರು.
ಈ ಪವಿತ್ರವಾದ ಮುಹರ್ರಂ ತಿಂಗಳ ಒಂದರಿಂದ ಹತ್ತು ಅಥವಾ ತಿಂಗಳ ಒಂಬತ್ತು ಮತ್ತು ಹತ್ತನೆಯ ದಿನ ವ್ರತಾನುಷ್ಠಾನ ಅತೀ ಪುಣ್ಯವಾದ ಆರಾಧನೆಯಾಗಿರೂದಲ್ಲದೇ ಅನೇಕ ಅದ್ಭುತಗಳಿಗೆ ಸಾಕ್ಷಿಯಾದ ಈ ಪವಿತ್ರ ತಿಂಗಳ ದಿನರಾತ್ರಿಗಳಲ್ಲಿ ಪ್ರತಿಫಲಾರ್ಹ ಆರಾಧನೆಗಳನ್ನು ಪುಣ್ಯ ನಬಿ ಮತ್ತು ಅಲ್ಲಿನ ಅನುಚರರು ನಮಗೆ ಕಲಿಸಿರುತ್ತಾರೆ. ಅದರ ವಿಶಾಲ ವಿವರಣೆಯನ್ನು ಕೂಡಾ ನಮ್ಮ ಉಲಮಾಗಳು ವಿವರಿಸಿದ್ದು ಅವುಗಳನ್ನು ನಾವು ಅನುಸರಿಸಿ ಜೀವನದಲ್ಲಿ ಅಳವಡಿಸಿ ಬಾಳಬೇಕೆಂದು ಉಸ್ತಾದರು ಕಾರ್ಯಕರ್ತರನ್ನು ನೆನಪಿಸಿದರು.
ವೇದಿಕೆಯಲ್ಲಿ ಕೆ.ಸಿ.ಎಫ್ ಖತ್ತರ್ ರಾಷ್ಟ್ರೀಯ ಸಂಘಟನಾ ವಿಭಾಗದ ಅಧ್ಯಕ್ಷ ಹನೀಫ್ ಪಾತೂರು, ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಕಬೀರ್ ದೇರಳಕಟ್ಟೆ, ರಾಷ್ಟ್ರೀಯ ಸಮಿತಿ ಇಹ್ಸಾನ್ ವಿಭಾಗದ ಅಧ್ಯಕ್ಷ ಮುನೀರ್ ಮಾಗುಂಡಿ ಮೊದಲಾದವರು ಉಪಸ್ಥಿತರಿದ್ದರು. ಸಭೆಯ ಮೊದಲಿಗೆ
ಕೆ.ಸಿ.ಎಫ್ ಖತ್ತರ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಹಂಡುಗುಳಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
ವರದಿ: ಕೆ.ಸಿ.ಎಫ್ ಪಬ್ಲಿಷಿಂಗ್ ವಿಭಾಗ ಖತ್ತರ್















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್