ದುಬೈ: ಮಿತಿಮೀರಿದ ವೇಗಕ್ಕಾಗಿ ಪಾವತಿಸಲಾಗುವ ಟ್ರಾಫಿಕ್ ದಂಡವನ್ನು ಕೈಬಿಡಲಾಗಿದೆ ಎಂಬಂತೆ ಸೋಶಿಯಲ್ ಮೀಡಿಯಾದಲ್ಲಿ ಹರಡಲಾದ ವದಂತಿಗಳನ್ನು ದುಬೈ ಪೊಲೀಸರು ನಿರಾಕರಿಸಿದ್ದಾರೆ.
ದುಬೈ ಪೊಲೀಸರಿಂದ ಸೌದಿ ಅರೇಬಿಯನ್ ಪ್ರಜೆಗೆ ಬಂದಿದೆ ಎನ್ನಲಾದ ಸಂದೇಶ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದೆ. ಅತಿಯಾದ ದಂಡದಿಂದ ವಿನಾಯಿತಿ ನೀಡಿರುವುದಾಗಿ ಅರೇಬಿಕ್ ಭಾಷೆಯಲ್ಲಿ ಬರೆದ ಸಂದೇಶದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿದೆ. ಆದರೆ ವೈರಲ್ ಸಂದೇಶದ ಫೋಟೋ ಇತ್ತೀಚಿನದಲ್ಲ ಎನ್ನಲಾಗಿದೆ.
ಸದ್ರಿ ಫೋಟೋ 10 ವರ್ಷಗಳ ಹಿಂದೆ ದುಬೈ, ಪ್ರವಾಸಿಗರನ್ನು ಸಂತೋಷಪಡಿಸುವ ಯೋಜನೆಯ ಭಾಗವಾಗಿ ನೀಡಲಾದ ಸಂದೇಶವಾಗಿದೆ ಎಂದು ದುಬೈ ಪೊಲೀಸ್ ಭದ್ರತಾ ಮಾಧ್ಯಮ ವಿಭಾಗದ ನಿರ್ದೇಶಕ ಕರ್ನಲ್ ಫೈಸಲ್ ಅಲ್ ಖಾಸಿಮ್ ಹೇಳಿದ್ದಾರೆ. ಅದರಲ್ಲಿರುವ ದುಬೈ ಪೊಲೀಸ್ ಲಾಂಛನ ಕೂಡ ಹಳೆಯದಾಗಿದೆ.
ದುಬೈ ಪೊಲೀಸರು ತಮ್ಮ ಎಲ್ಲಾ ಉಪಕ್ರಮಗಳನ್ನು ತಮ್ಮ ಅಧಿಕೃತ ಚಾನೆಲ್ಗಳ ಮೂಲಕ ಪ್ರಕಟಿಸಲಿದ್ದಾರೆ. ಅನಧಿಕೃತ ಮೂಲಗಳಿಂದ ನಕಲಿ ಸುದ್ದಿಗಳನ್ನು ಹಂಚಿಕೊಳ್ಳಬಾರದು ಅಥವಾ ಹರಡಬಾರದು ಎಂದು ಕರ್ನಲ್ ಫೈಸಲ್ ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಎಚ್ಚರಿಕೆ ನೀಡಿದರು.
ಈ ವರ್ಷದ ಆರಂಭದಲ್ಲಿ, ಸಹಿಷ್ಣುತೆ ವರ್ಷ ಪ್ರಯುಕ್ತ ಟ್ರಾಫಿಕ್ ದಂಡವನ್ನು ತೆಗೆದುಹಾಕಲು ದುಬೈ ಪೊಲೀಸರು ಸೆಟಲ್ ಯುವರ್ ಫೈನ್ಸ್ ಯೋಜನೆಯನ್ನು ಪ್ರಾರಂಭಿಸಿದ್ದರು. ಅದರಂತೆ, ಈ ವರ್ಷ ಯಾವುದೇ ಸಂಚಾರ ದಂಡವನ್ನು ಪಡೆಯದಿದ್ದರೆ, ಸಂಚಾರ ದಂಡದ ಸಂಪೂರ್ಣವಾಗಿ ಮನ್ನಾ ಆಗುತ್ತದೆ. ರಿಯಾಯಿತಿಯು ಫೆಬ್ರವರಿ 6ಕ್ಕೆ ಮೊದಲು ವಾಹನ ಚಾಲಕರು ಪಡೆದ ಒಟ್ಟು ಸಂಚಾರ ದಂಡವನ್ನು ಆಧರಿಸಿದೆ. ದುಬೈ ಪೊಲೀಸರ ಸರಹದ್ದಿನ ಟ್ರಾಫಿಕ್ ದಂಡಕ್ಕಾಗಿ ಈ ಯೋಜನೆ ಎನ್ನಲಾಗಿದೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು