ಕುವೈತ್ ನಗರ: ಕುವೈತ್ನಲ್ಲಿರುವ ವೀದೇಶೀಯರು ಕೆಲಸ ಬದಲಾಯಿಸ ಬೇಕಿದ್ದರೆ ಇನ್ನು ಮುಂದೆ ದೇಶದಿಂದ ಹೊರಗೆ ಹೋಗಿ ಮತ್ತೊಂದು ವಿಸಾದಲ್ಲಿ ಬರಬೇಕು. ಯಾವುದಾದರೂ ವಿಸಾದಲ್ಲಿ ಬಂದು ಕೆಲಸ ಹುಡುಕುವವರ ಸಂಖ್ಯೆಯನ್ನು ಕಡಿಮೆಗೊಳಿಸುವುದು ಈ ಕ್ರಮದ ಹಿಂದಿರುವ ಉದ್ದೇಶವಾಗಿದೆ. ಅಲ್ಲದೆ ಇಪ್ಪತ್ತರಷ್ಟು ಹುದ್ದೆಗಳಿಗೆ ಬರಹ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗುವುದು ಎಂದು ಆರ್ಥಿಕ ಖಾತೆಯ ಸಚಿವಾಲಯ ವ್ಯಕ್ತಪಡಿಸಿದೆ.
ಯಾವುದಾದರೂ ವಿಸಾ ಪಡೆದು ಕುವೈತ್ಗೆ ಬಂದು ಉನ್ನತ ಹುದ್ದೆಯ ಕೆಲಸ ಪಡೆಯುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗತೊಡಗಿರುವ ಹಿನ್ನಲೆಯಲ್ಲಿ ಈ ನಡೆ ಸ್ವೀಕರಿಸಲಾಗಿದೆ ಎನ್ನಲಾಗಿದೆ. ಕುವೈತ್ ಗೆ ಬಂದ ನಂತರ ಪಡೆಯುವ ವಿದ್ಯಾಭ್ಯಾಸ ಯೋಗ್ಯತೆಯನ್ನು ಕೂಡ ವಿಸಾ ಬದಲಾವಣೆಗೆ ಪರಿಗಣಿಸಲಾಗುವುದಿಲ್ಲ.
ಅದೇ ರೀತಿ ಮುಂದಿನ ವರ್ಷದಿಂದ ಖಾಸಗಿ ವಲಯದಿಂದ ಸಾರ್ವಜನಿಕ ವಲಯಕ್ಕೂ, ಸಾರ್ವಜನಿಕ ವಲಯದಿಂದ ಖಾಸಗಿ ವಲಯಕ್ಕೂ ಇಖಾಮಾ ಬದಲಾವಣೆ ಮಾಡುವುದನ್ನು ಅನುಮತಿಸಲಾಗುವುದಿಲ್ಲ. ಒಂದೇ ವಲಯದಲ್ಲೂ ಇಖಾಮಾ ಬದಲಾವಣೆ ಮಾಡುವುದಕ್ಕೂ ಕಠಿಣ ನಿಯಂತ್ರಣ ತರಲಾಗುವುದು ಎಂದು ಖಾತೆಯ ಸಚಿವರು ವ್ಯಕ್ತಪಡಿಸಿದ್ದಾರೆ.
ಉನ್ನತ ವಿದ್ಯಾಭ್ಯಾಸ ಯೋಗ್ಯತೆ ಇದ್ದರೂ, ಕೆಲಸ ಬದಲಾವಣೆ ಸಾಧ್ಯವಿಲ್ಲ. ಕಾರ್, ಮೆಕ್ಯಾನಿಕ್, ಇಲೆಕ್ಟ್ರೀಷನ್, ಪ್ಲಂಬರ್ ಮುಂತಾದ ಇಪ್ಪತ್ತರಷ್ಟು ಕೆಲಸಗಳಿಗೆ ಬರಹ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗುತ್ತದೆ. ದೇಶದಲ್ಲಿ ಅಧಿಕ ಇರುವ ಪರಿಣಿತರಲ್ಲದ ಕೆಲಸಗಾರರ ಸಂಖ್ಯೆಯನ್ನು ಕಡಿಮೆಗೊಳಿಸುವುದು, ವಿಸಾ ವ್ಯಾಪಾರಗಳ ಮೂಲಕ ವಂಚಿತರಾಗುವವರ ಸಂಖ್ಯೆಯನ್ನು ಕಡಿಮೆಗೊಳಿಸುವುದು ಮುಂತಾದ ಉದ್ದೇಶಗಳಿಗಾಗಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ