janadhvani

Kannada Online News Paper

ಕೆ.ಸಿ.ಎಫ್ ದುಬೈ ಸೌತ್ ಝೋನ್: ಅಲ್ ಸತ್ವ ಸೆಕ್ಟರ್ ಗೆ ನೂತನ ಸಾರಥ್ಯ

ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಷನ್ ದುಬೈ ಸೌತ್ ಝೋನ್ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಲ್ ಸತ್ವ ಸೆಕ್ಟರ್ ಇದರ ವಾರ್ಷಿಕ ಮಹಾಸಭೆಯು ದಿನಾಂಕ 21.06.2019 ರಂದು ಮಗ್ರಿಬ್ ನಮಾಜ್ ಬಳಿಕ ಸತ್ವ ಖಲೀಲ್ ಬಾಷಾ ಮಡಿಕೇರಿಯವರ ನಿವಾಸದಲ್ಲಿ ಅಬ್ದುಲ್ ಕರೀಂ ಮಂಚಿಯವರ ಅಧ್ಯಕ್ಷತೆಯಲ್ಲಿ ಜರಗಿತು.

ಸೆಕ್ಟರ್ ಕಾರ್ಯಕಾರಿ ಸಮಿತಿ ಸದಸ್ಯ ಶರೀಫ್ ಹೊಸ್ಮಾರು ಸಭೆಯ ಅತಿಥಿಗಳನ್ನು ಸ್ವಾಗತಿಸಿದರು.ಅಬ್ದುಲ್ಲಾ ಸಅದಿ ಅಜ್ಜಾವರವರ ರವರ ದುಆಃ ದೊಂದಿಗೆ ಪ್ರಾರಂಭಗೊಂಡ ಸಭೆಯನ್ನು ಶಾಹುಲ್ ಹಮೀದ್ ಸಖಾಫಿ ಉದ್ಘಾಟಿಸಿದರು. ನಂತರ ಕಾರ್ಯದರ್ಶಿ ಲತೀಫ್ ಪಲ್ಲಮಜಲು 2018 -19 ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರವನ್ನು ಸಭೆಯಲ್ಲಿ ಮಂಡಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ರಾಜ್ಯ ಸುನ್ನೀ ನಾಯಕರಾದ ಅಬ್ದುಲ್ಲಾ ಸ-ಅದಿ ಸಂಘಟನೆಯ ಅವಶ್ಯಕತೆಯ ಬಗ್ಗೆ ಸವಿಸ್ತಾರವಾಗಿ ಭಾಷಣ ಗೈದರು.ಚುನಾವಣಾ ವೀಕ್ಷಕರಾಗಿ ಆಗಮಿಸಿದ ಝೋನ್ ನಾಯಕರಾದ ಅಬ್ದುಲ್ ಅಝೀಝ್ ಕೆದಿಲರವರು ಸದರಿ ಸಮಿತಿಯನ್ನು ಬರ್ಖಾಸು ಗೊಳಿಸಿ ಹೊಸ ಸಮಿತಿಗೆ ಚಾಲನೆ ನೀಡಿದರು.

ನೂತನ ಸಮಿತಿಯ ವಿವರ :
ಅಧ್ಯಕ್ಷರು : ಅಬ್ದುಲ್ ಲತೀಫ್ ಪಲ್ಲಮಜಲು
ಪ್ರಧಾನ ಕಾರ್ಯದರ್ಶಿ: ಜಮಾಲ್ ಸುಳ್ಯ
ಕೋಶಾಧಿಕಾರಿ :ಅತಾವುಲ್ಲಾ ಮಡಿಕೇರಿ
ಪಬ್ಲಿಕೇಷನ್ ವಿಭಾಗ :
ಅಧ್ಯಕ್ಷರು : ಕರೀಂ ಮಂಚಿ ಕಾರ್ಯದರ್ಶಿ :ಮಾಝ್ ಕೆ.ಸಿ.ರೋಡ್
ಶಿಕ್ಷಣ ವಿಭಾಗ :
ಅಧ್ಯಕ್ಷರು : ಶರೀಫ್ ಎಡಪದವು
ಕಾರ್ಯದರ್ಶಿ : ಆರೀಫ್ ಸವನೂರು
ಸಾಂತ್ವನ ವಿಭಾಗ :
ಅಧ್ಯಕ್ಷರು : ಅಕ್ಬರ್ ಪಲ್ಲಮಜಲು
ಕಾರ್ಯದರ್ಶಿ: ಅಕ್ಬರ್ ಅಲಿ ಬಜ್ಪೆ
ಇಹ್ಸಾನ್ ವಿಭಾಗ :
ಅಧ್ಯಕ್ಷರು : ಮಜೀದ್ ಪಾಟ್ರಕೋಡಿ
ಕಾರ್ಯದರ್ಶಿ : ತಮೀಮ್ ಜಾರಿಗೆಬೈಲ್

ನಂತರ ಝೋನ್ ಅಧ್ಯಕ್ಷರಾದ ಅಬ್ದುಲ್ ಅಝೀಝಿ ಅಹ್ಸನಿ, ಪ್ರಧಾನ ಕಾರ್ಯದರ್ಶಿ ರಫೀಕ್ ಕಲ್ಲಡ್ಕ ,ಹಾಗೂ ಯು.ಎ.ಇ,ಇಹ್ಸಾನ್ ಸಂಚಾಲಕರಾ ಕಬೀರ್ ಜಟ್ಟಿಪಲ್ಲ ಅಭಿನಂದನಾ ಭಾಷಣ ಮಾಡಿದರು.

ಝೋನ್ ನಾಯಕರಾದ ಅಬ್ದುಲ್ ರಹ್ಮಾನ್ ಉಳ್ಳಾಲ,ಶರೀಫ್ ಪಡೀಲ್,ಶರೀಫ್ ದೇರಳಕಟ್ಟೆ ಹಾಗೂ ಬರ್ ದುಬೈ ಸೆಕ್ಟರ್ ನಾಯಕರಾದ ಆಸಿಫ್ ಇಂದ್ರಾಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದ ನಿರ್ವಹಣೆ ಯನ್ನು ಅಬ್ದುಲ್ ಅಝೀಝ್ ಕೆದಿಲ ನೆರವೇರಿಸಿದರು.ಕೊನೆಯಲ್ಲಿ 11 ನಾರಿಯತ್ ಸ್ವಲಾತ್ ಪಠಿಸುವ ಮೂಲಕ ಲೆಕ್ಕ ಪತ್ರ ಹಾಗೂ ಇತರ ದಾಖಲೆಗಳನ್ನು ನೂತನ ಸಮಿತಿಗೆ ಹಸ್ತಾಂತರ ಮಾಡಲಾಯಿತು.
ನೂತನ ಕೋಶಾಧಿಕಾರಿ ಅತಾವುಲ್ಲಾ ಮಡಿಕೇರಿಯವರು ಧನ್ಯವಾದ ಹೇಳಿದರು. ಸ್ವಲಾತ್ ನೊಂದಿಗೆ ಸಭಾ ಕಾರ್ಯಕ್ರಮ ಮುಕ್ತಾಯ ಗೊಳಿಸಲಾಯಿತು.

error: Content is protected !! Not allowed copy content from janadhvani.com