janadhvani

Kannada Online News Paper

ಅಲ್ ಮದೀನಾ ಮಂಜನಾಡಿ: ಬಿ.ಎಂ.ಎಸ್.ಎ.ಪದಾಧಿಕಾರಿಗಳ ಆಯ್ಕೆ

ಮಂಗಳೂರು.ಜೂ,19: ಮಂಜನಾಡಿಯ ಅಲ್ ಮದೀನಾ ದಅ್ ವಾ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಲಾ ಸಂಘಟನೆ ಬಿಶಾರತುಲ್ ಮದೀನಾಕ್ಕೆ 2019-20ನೇ ಶೈಕ್ಷಣಿಕ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಮುಹಮ್ಮದ್ ನಿಝಾರ್ ಬಕ್ರವಳ್ಳಿ ಹಾಸನ, ಪ್ರಧಾನ ಕಾರ್ಯದರ್ಶಿಯಾಗಿ ನೌಶಾದ್ ಕಲ್ಮಿಂಜ, ಕೋಶಾಧಿಕಾರಿ ಅಬ್ದುಲ್ ಸಮದ್ ಪರಪ್ಪು, ಉಪಾಧ್ಯಕ್ಷರಾಗಿ ಶಫೀಕ್ ಬೊಳ್ಮಾರ್ ಆಯ್ಕೆಗೊಂಡರು.

ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ಸಭೆಯು ಜರುಗಿತು. ಮುದರ್ರಿಸ್ ಅಬ್ದುರ್ರಹ್ಮಾನ್ ಅಹ್ಸನಿ ಯವರು ಉಧ್ಘಾಟಿಸಿದರು, ದಅ್ ವಾ ಪ್ರಾಂಶುಪಾಲರಾದ ಅಬ್ದುಲ್ ಸಲಾಂ ಅಹ್ಸನಿ, ಮುನೀರ್ ಸಖಾಫಿ, ಇರ್ಫಾನ್ ನೂರಾನಿ, ಅಶ್ರಫ್ ಸಖಾಫಿ,ರಝಾಖ್ ಸರ್ ಇಕ್ಬಾಲ್ ಮರ್ಝೂಖಿ, ಜುನೈದ್ ಮರ್ಝೂಖಿ, ಮತ್ತಿತರರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ಸಂಸ್ಥೆಯ ವಿದ್ಯಾರ್ಥಿ ಸಿರಾಜ್ ಹಾಸನರವರ ಮೇಲೆ ವಿಶೇಷ ಪ್ರಾರ್ಥನೆ ನಡೆಸಲಾಯಿತು. ನಿಕಟ ಪೂರ್ವ ಕಾರ್ಯದರ್ಶಿ ಶರೀಫ್ ವಲಾಲ್ ವರದಿ ಮಂಡಸಿದರೆ, ಅಧ್ಯಕ್ಷ ಅನೀಸ್ ಸುರತ್ಕಲ್ ಸ್ವಾಗತಿಸಿ, ಹನೀಫ್ ಕುಂಜತ್ತೂರು ವಂದಿಸಿದರು.

error: Content is protected !! Not allowed copy content from janadhvani.com