ಮಂಡೆಕೋಲು:ಎಸ್ ಎಸ್ ಎಫ್ ಮತ್ತು ಎಸ್ ವೈ ಎಸ್ ಗುರುವಮೊಟ್ಟೆ ಮಂಡೆಕೇೂಲು ಶಾಖಾ ವತಿಯಿಂದ 20 ಕುಟುಂಬಗಳಿಗೆ ರಮಳಾನ್ ಕಿಟ್ ವಿತರಣೆ ಕಾರ್ಯಕ್ರಮ ಹಾಗೂ ಮಾಸಿಕ ಮಹ್ ಲರತುಲ್ ಬದ್ರಿಯಾ ಮಜ್ಲಿಸ್ ತೈವಳಪ್ಪ್ ಅಬೂಬಕ್ಕರ್ ಅವರ ಮನೆಯಲ್ಲಿ ನಡೆಯಿತು.
SYS ಬ್ರಾಂಚ್ ಕಾರ್ಯದರ್ಶಿ ಜಿಕೆ ಮುಹಮ್ಮದ್ ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭ ಗೊಂಡಿತು. ಮಹ್ ಲರತುಲ್ ಬದ್ರಿಯಾ ಮಜ್ಲಿಸ್ ನೇತೃತ್ವವನ್ನು KCF ನಾಯಕರಾದ ಹನೀಫ್ ಮದನಿ ವಹಿಸಿದರು, SSF ಯುನಿಟ್ ಅಧ್ಯಕ್ಷರಾದ ಅಬ್ದುಲ್ಲತೀಫ್ ಸಅದಿ ಪ್ರಾಸ್ತಾವಿಕ ಭಾಷಣ ಮಾಡಿದರು, ಕೆಸಿಎಫ್ ಅಧ್ಯಕ್ಷರಾದ ಹಸನ್ ಮದನಿ ಮಂಡೆಕೊಲು ಮಾತನಾಡಿ ರಮಳಾನ್ ಮಹತ್ವದ ಕುರಿತು ವಿವರಿಸಿದರು.
ಕೆಸಿಎಫ್ ಕಾರ್ಯಕರ್ತರಾದ ಇಬ್ರಾಹಿಂ ತೈವಳಪ್ಪ್ ಹಾಗೂ SYS ನಾಯಕ ಮುಹಮ್ಮದ್ ಅಲಿ ತೊಟಪ್ಪಾಡಿ ಹಾಗೂ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಅಹ್ಮದ್ ಕಬೀರ್ ರಿಫಾಯಿ ಸ್ವಾಗತಿಸಿ ವಂದಿಸಿದರು.
ವರದಿ: ಜಿಕೆ ಅಮ್ಜದಿ