janadhvani

Kannada Online News Paper

SSF ಬೆಳ್ತಂಗಡಿ ಡಿವಿಷನ್ ; ಮುತ-ಅಲ್ಲಿಮ್ ಸಂಗಮ ಹಾಗೂ ದಅ್-ವಾ ಕಾನ್ಫರೆನ್ಸ್

ಬೆಳ್ತಂಗಡಿ : ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್(SSF) ಬೆಳ್ತಂಗಡಿ ಡಿವಿಷನ್ ವತಿಯಿಂದ, “ಮುತ-ಅಲ್ಲಿಮ್ ಸಂಗಮ ಹಾಗೂ ದಅ್-ವಾ ಕಾನ್ಫರೆನ್ಸ್” ಕಾರ್ಯಕ್ರಮವು ಮೇ.01ರಂದು ಹಿದಾಯತುಲ್ ಇಸ್ಲಾಂ ಸೆಕೆಂಡರಿ ಮದ್ರಸ ಜಾರಿಗೆಬೈಲು ಇಲ್ಲಿನ ಸಭಾಂಗಣದಲ್ಲಿ ನಡೆಯಿತು.

ಡಿವಿಷನ್ ಅಧ್ಯಕ್ಷರಾದ ಅಯ್ಯೂಬ್ ಮಹ್ಳರಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಸಮಿತಿಯ ನಾಯಕರಾದ ಇಕ್ಬಾಲ್ ಮಾಚಾರು ರವರು ಉದ್ಘಾಟಿಸಿದರು.

BJM ಜಾರಿಗೆಬೈಲು ಇದರ ಉಪಾಧ್ಯಕ್ಷರು ಹಾಗೂ SYS ಬ್ರಾಂಚ್ ಅಧ್ಯಕ್ಷರಾದ ರಫೀಕ್ ಮುಸ್ಲಿಯಾರ್‌ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಆಶಂಶ ಮಾತುಗಳನ್ನಾಡಿದರು.

ನಂತರ ದಅ್-ವಾ ರಂಗದ ಪ್ರಾಮುಖ್ಯತೆ ಹಾಗೂ ಸಂಘಟನಾ ಪ್ರವರ್ತನದ ಕುರಿತಾದ SSF ದ.ಕ ಜಿಲ್ಲಾ ಉಪಾಧ್ಯಕ್ಷರಾದ ಮುನೀರ್ ಸಖಾಫಿ ಉಳ್ಳಾಲ ಉಸ್ತಾದರು ತರಗತಿ ನಡೆಸಿಕೊಟ್ಟರು.

ವೇದಿಕೆಯಲ್ಲಿ ಡಿವಿಷನ್ ಕೋಶಾಧಿಕಾರಿ ನಝೀರ್ ಮದನಿ,ಪ್ರಧಾನ ಕಾರ್ಯದರ್ಶಿ ಶರೀಪ್ ಶಾಝ್ ನಾವೂರು,
ಡಿವಿಷನ್ ನಾಯಕರಾದ
ಕರೀಂ ಸಖಾಫಿ,ಹಾರೀಸ್ ಕುಕ್ಕುಡಿ,ಝಮೀರ್ ಸ ಅದಿ,
ಸಿದ್ದೀಕ್ ಪರಪ್ಪು, ಸಂಶುದ್ದೀನ್ ಪಾಂಡವರಕಲ್ಲು
ಜಿಕೆರೆ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಜಾರಿಗೆಬೈಲು,ಜಾರಿಗೆಬೈಲು ಶಾಖಾ ಅಧ್ಯಕ್ಷರಾದ ನಾಸೀರ್ ನಡತೊಟ್ಟು,ಶಾಖಾ ಕಾರ್ಯದರ್ಶಿ ಜಮಾಲ್ ಪಳ್ಳಾದೆ ಹಾಗೂ ಡಿವಿಷನ್ ವ್ಯಾಪ್ತಿಯ ಎಲ್ಲಾ ಸೆಕ್ಟರ್ ಗಳ ಮುತ ಅಲ್ಲಿಮ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ರಶೀದ್ ಮಡಂತ್ಯಾರು ಕಾರ್ಯಕ್ರಮವನ್ನು ಸ್ವಾಗತಿಸಿ, ಕಾರ್ಯದರ್ಶಿ ನವಾಝ್ ಮಾವಿನಕಟ್ಟೆ
ವಂದಿಸಿದರು.

error: Content is protected !! Not allowed copy content from janadhvani.com