ದುಬೈ: ಸಹಿಷ್ಣುತೆಯ ವರ್ಷದಲ್ಲಿ ನಿರ್ಣಾಯಕ ನಿಲುವಿನೊಂದಿಗೆ ಹಿಂದೂ- ಮುಸ್ಲಿಮ್ ದಂಪತಿಗೆ ಜನಿಸಿದ ಮಗುವಿಗೆ ಜನನ ಪ್ರಮಾಣ ಪತ್ರ ನೀಡಿದ ಯುಎಇ ಕಾನೂನು ತಿದ್ದುಪಡಿ ನಡೆಸಿದೆ.
ವಿವಾಹ ಕಾನೂನಿನ ಪ್ರಕಾರ ಅನಿವಾಸಿಗಳ ಪೈಕಿ ಮುಸ್ಲಿಮ್ ಪುರುಷರಿಗೆ ಅನ್ಯ ಮತೀಯರನ್ನು ಮದುವೆಯಾಗಬಹುದು. ಆದರೆ ಮುಸ್ಲಿಮ್ ಮಹಿಳೆಗೆ ಇತರ ಸಮುದಾಯದವರನ್ನು ವಿವಾಹವಾಗುವಂತಿಲ್ಲ.
2016 ರಲ್ಲಿ ಕೇರಳದ ಕಿರಣ್ ಬಾಬು ಮತ್ತು ಸನಂ ಸಾಬು ಸಿದ್ದೀಕ್ ಕೆರಳದಲ್ಲಿ ವಿವಾಹಿತರಾಗಿದ್ದರು. ಅವರು 2017ರಲ್ಲಿ ದುಬೈ ತಲುಪಿದ್ದು, 2018ರಲ್ಲಿ ಮಗು ಜನಿಸಿದಾಗ ಪೇಚಿಗೀಡಾಗಿದ್ದರು. ತಂದೆ ಹಿಂದೂ ಆದ ಕಾರಣ ಜನನ ಸರ್ಟಿಫಿಕೇಟ್ ನೀಡಲಾಗದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದರು. ನಂತರ ಎನ್ಒಸಿ ಸರ್ಟಿಫಿಕೇಟ್ಗಾಗಿ ಪ್ರಯತ್ನ ಮುಂದುವರಿಯಿತು. ನಾಲ್ಕು ತಿಂಗಳ ವಿಚಾರಣೆ ಬಳಿಕ ಪ್ರಕರಣವನ್ನು ಕೊನೆಗೊಳಿಸಲಾಗಿತ್ತು.
ನಂತರ ಸಾರ್ವಜನಿಕ ಕ್ಷಮಾಪಣೆ ಸಂದರ್ಭದಲ್ಲಿ ಮತ್ತೆ ಪ್ರಯತ್ನ ಆರಂಭಿಸಲಾಯ್ತು.ಭಾರತೀಯ ದೂತಾವಾಸದ ಸಹಾಯದೊಂದಿಗೆ ಮತ್ತೊಮ್ಮೆ ಜನನ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಲಾಗಿದ್ದು, ವಿಷು ಹಬ್ಬದ ಮುನ್ನಾದಿನದಂದು ಯುಎಇ ಅಧಿಕಾರಿಗಳು ಜನನ ಪ್ರಮಾಣ ಪತ್ರವನ್ನು ನೀಡಿದ್ದಾರೆ ಎಂದು ಕಿರಣ್ ತಿಳಿಸಿದ್ದಾರೆ.
ಅನಮ್ತ ಅಸ್ಲಿನ್ ಕಿರಣ್ ಎಂದು ನಾಮಕರಣ ಮಾಡಲಾದ ಮಗು ಮತ್ತು ತಾಯಿ ಸಧ್ಯ ಕೇರಳದಲ್ಲಿದ್ದಾರೆ ಎಂದು ತಿಳಿದು ಬಂದಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ