ನವದೆಹಲಿ(ಏ. 29): ಮತದಾರರ ಮೇಲೆ ಒತ್ತಡ ಹಾಕಲು ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರು ಹೊಸ ವಿಧಾನವೊಂದನ್ನು ಹುಡುಕಿರುವಂತಿದೆ. ಇವಿಎಂ ಮೆಷಿನ್ಗಳಲ್ಲಿನ ಟಿಎಂಸಿ ಪಕ್ಷದ ಗುರುತಿನ ಪಕ್ಕದ ಬಟನ್ ಮೇಲೆ ಸುಗಂಧ ದ್ರವ್ಯ ಎರಚಿ, ಆ ಮೂಲಕ ಮತದಾರರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಆನಂದ್ ಬಜಾರ್ ಪತ್ರಿಕಾದಲ್ಲಿ ವರದಿಯೊಂದು ಪ್ರಕಟವಾಗಿದೆ.
ಪಶ್ಚಿಮ ಬಂಗಾಳದ ಬೋಲಪುರ್ ಮತ್ತು ಬೀರ್ಭುಮ್ ಕ್ಷೇತ್ರಗಳಲ್ಲಿ ಇಂಥ ಸೆಂಟ್ ತಂತ್ರಗಳನ್ನು ಟಿಎಂಸಿ ಬಳಸುತ್ತಿದೆ ಎನ್ನಲಾಗಿದೆ.
ಮತದಾರರು ಮತ ಚಲಾಯಿಸುವಾಗ ಬಟನ್ ಒತ್ತಬೇಕಾಗುತ್ತದೆ. ಆಗ ಟಿಎಂಸಿ ಗುರುತಿನ ಮುಂದಿರುವ ಬಟನ್ ಒತ್ತಿದರೆ ಮಾತ್ರ ಅವರ ಬೆರಳಿಗೆ ಪರಿಮಳ ತಾಕುತ್ತದೆ. ಆ ಮತದಾರ ಹೊರಗೆ ಬಂದಾಗ ಬೂತ್ ಸಮೀಪ ಇರುವ ಕಾರ್ಯಕರ್ತರು ಅವರ ಬೆರಳನ್ನು ಮೂಸಿ ಸೆಂಟ್ ಇದೆಯಾ ಎಂದು ಪರೀಕ್ಷಿಸುತ್ತಾರೆ.
ಹಾಗೆಯೆ, ವೋಟ್ ಹಾಕಲು ಹೋಗುವ ಮುನ್ನ ಮತದಾರನಿಗೆ ಇದೇ ವಿಚಾರ ಮುಂದಿಟ್ಟು ಬೆದರಿಕೆಯನ್ನೂ ಅವರು ಹಾಕುತ್ತಿದ್ಧಾರೆ. ನೀವು ಟಿಎಂಸಿಗೆ ವೋಟ್ ಹಾಕಿದರೆ ನಿಮ್ಮ ಬೆರಳಿನಲ್ಲಿ ಸುಗಂಧ ವಾಸನೆ ಉಳಿಯುತ್ತದೆ. ಇಲ್ಲವಾದರೆ ನೀವು ಟಿಎಂಸಿಗೆ ಮತ ಹಾಕಿಲ್ಲವೆಂದಾಗುತ್ತದೆ ಎಂದು ಪತ್ರಿಕೆಯ ವರದಿಯಲ್ಲಿ ತಿಳಿಸಲಾಗಿದೆ.















ಇನ್ನಷ್ಟು ಸುದ್ದಿಗಳು
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಹಾರಾಟ ರದ್ದು
ಚೀನಾದಲ್ಲಿ HMPV ವೈರಸ್ ವ್ಯಾಪಕ,ಆಸ್ಪತ್ರೆಗಳು ಫುಲ್: ಆತಂಕ ಬೇಡ- ಕೇಂದ್ರ ಸರ್ಕಾರ
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಖಂಡನೀಯ: ತೆಲಂಗಾಣ ಸಿಎಂಗೆ ಎ ಪಿ ಉಸ್ತಾದ್ ಪತ್ರ
ಲಂಚ: ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ ಪ್ರಕರಣ – 966 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳನ್ನು ಖರೀದಿಸಿದ್ದ ಕಂಪನಿ ಮೇಘಾ
ಸಮಗ್ರ ಅಭಿವೃದ್ಧಿ ಗೆ ಅಂಬೇಡ್ಕರ್ ತತ್ವ ಪಾಲನೆ ಅಗತ್ಯ : ದ್ರೌಪದಿ ಮುರ್ಮು
ಹರಿಯಾಣ : ಶಾಲಾ ಬಸ್ ಪಲ್ಟಿ; ಆರು ಮಕ್ಕಳು ಸಾವು ಈದ್ ರಜೆಯಲ್ಲೂ ತೆರೆದಿದ್ದ ಶಾಲೆ!
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಂ 2ಬಿ ಮೀಸಲು ರದ್ಧತಿ ಮತಬ್ಯಾಂಕ್ ಭದ್ರಪಡಿಸುವ ಸರಕಾರದ ನಡೆ ಖಂಡನೀಯ- ಎಸ್ ವೈ ಎಸ್
ದೇವಸ್ಥಾನಕ್ಕೆ ಮಾಂಸ ಎಸೆದು, ಕೋಮುಗಲಭೆ- ಪ್ರಮುಖ ಆರೋಪಿ ಚಂಚಲ್ ತ್ರಿಪಾಠಿ ಬಂಧನ