ಸೌದಿ ಅರೇಬಿಯ:- ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಝೋನ್ ಸಮಿತಿಯ ಧೈವಾರ್ಷಿಕ ಮಹಾಸಭೆ’ಯು ಇತ್ತೀಚೆಗೆ ಇಲ್ಲಿನ ಬತ್ಹ ಅಲ್ಮಾಸ್ ಸಭಾಂಗಣದಲ್ಲಿ ಫಾರೂಖ್ ಸಅದಿ’ಯವರ ಅಧ್ಯಕ್ಷತೆಯಲ್ಲಿ ನಡೆಯಿತು.ಅಬ್ದುರ್ರಹ್ಮಾನ್ ಮದನಿ ದುಆ ಮಾಡಿ, ಇಲ್ಯಾಸ್ ಲತ್ವೀಫಿ’ಯವರ ಕಿರಾಅತ್ ಮೂಲಕ ಚಾಲನೆಗೊಂಡ ಸಭೆಯನ್ನು ಕೆಸಿಎಫ್ ರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗ ಅಧ್ಯಕ್ಷರಾದ ಸಿದ್ದೀಕ್ ಸಖಾಫಿ ಪೆರುವಾಯಿ ಉದ್ಘಾಟಿಸಿ ಸುನ್ನೀ ಕಾರ್ಯಕರ್ತರು ‘ಆರ್ಥಿಕ ರಂಗ ಸಹಿತ ಎಲ್ಲಾ ರಂಗಗಳಲ್ಲೂ ಬಹಳಷ್ಟು ಸೂಕ್ಷ್ಮತೆಯನ್ನು ಕಾಪಾಡಿಕೊಳ್ಳಬೇಕೆಂದು ಹೇಳಿದರು.

ನಿಝಾಂ ಸಾಗರ್ ಗತ ವರ್ಷದ ವರದಿ ಹಾಗೂ ಕೋಶಾಧಿಕಾರಿ ಇಸ್ಮಾಯಿಲ್ ಕನ್ನಂಗಾರ್ ಲೆಕ್ಕ ಪತ್ರವನ್ನು ಮಂಡಿಸಿದರು.
ರೀ ಆರ್ಗನೈಝಿಂಗ್ ಆಫೀಸರ್’ ಆಗಿ ಆಗಮಿಸಿದ ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಅಧ್ಯಕ್ಷ ಅಬ್ದುಲ್ ಅಝೀಝ್ ಸಅದಿ’ಯವರು ನೂತನ ಸಮಿತಿಯನ್ನು ಆಯ್ಕೆಗೊಳಿಸಿದರು.
ಅಧ್ಯಕ್ಷರಾಗಿ ಫಾರೂಕ್ ಸಅದಿ ಹೆಚ್ಕಲ್ಲು, ಪ್ರಧಾನ ಕಾರ್ಯದರ್ಶಿಯಾಗಿ ನಿಝಾಮುದ್ದೀನ್ ಉಸ್ಮಾನ್, ಕೋಶಾಧಿಕಾರಿಯಾಗಿ ಉಮರ್ ಅಳಕೆಮಜಲ್, ಸಂಘಟನಾ ಇಲಾಖೆ ಅಧ್ಯಕ್ಷರಾಗಿ ಮುಸ್ತಫಾ ಸಅದಿ ಮತ್ತು ಕಾರ್ಯದರ್ಶಿಯಾಗಿ ಅಶ್ರಫ್ ಕಿಲ್ಲೂರು, ಶಿಕ್ಷಣ ಇಲಾಖೆ ಅಧ್ಯಕ್ಷರಾಗಿ ಇಲ್ಯಾಸ್ ಲತ್ವೀಫಿ ಮತ್ತು ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಸಾದಾತ್, ಸಾಂತ್ವನ ಇಲಾಖೆ ಅಧ್ಯಕ್ಷರಾಗಿ ಅಬ್ದುಲ್ ಮಜೀದ್ ವಿಟ್ಲ ಮತ್ತು ಕಾರ್ಯದರ್ಶಿಯಾಗಿ ರಮೀಝ್ ಕುಳಾಯಿ, ಪ್ರಕಾಶನ ಇಲಾಖೆ ಅಧ್ಯಕ್ಷರಾಗಿ ನವಾಝ್ ಚಿಕ್ಕಮಗಳೂರು ಮತ್ತು ಕಾರ್ಯದರ್ಶಿಯಾಗಿ ಹನೀಫ್ ಕಣ್ಣೂರು, ಆಡಳಿತ (ಅಡ್ಮಿನ್) ಇಲಾಖೆ ಅಧ್ಯಕ್ಷರಾಗಿ ನಝೀರ್ ಕಕ್ಕಿಂಜೆ ಮತ್ತು ಕಾರ್ಯದರ್ಶಿಯಾಗಿ ಬಷೀರ್ ಮೆದು ,ಇಹ್ಸಾನ್ ಇಲಾಖೆ ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಮದನಿ ಮತ್ತು ಕಾರ್ಯದರ್ಶಿಯಾಗಿ ಯೂಸುಫ್ ಕಳಂಜಿಬೈಲ್ ಹಾಗೂ 7 ಮಂದಿ ಕಾರ್ಯಕಾರಿ ಸದಸ್ಯರನ್ನು ಮತ್ತು 12 ಮಂದಿ ರಾಷ್ಟ್ರೀಯ ಕೌನ್ಸಿಲರ್’ಗಳನ್ನೂ ಆಯ್ಕೆ ಮಾಡಲಾಯಿತು.
ಫಾರೂಕ್ ಸಅದಿ ಹಾಗೂ ಅಬ್ದುರ್ರಹ್ಮಾನ್ ಮದನಿ ಮಾತನಾಡಿದರು ಉಮರ್ ಅಳಕೆಮಜಲ್ ಮೇ 17 ರಂದು ನಡೆಯಲಿರುವ ಗ್ರಾಂಡ್ ಇಫ್ತಾರ್’ನ ಮಾಹಿತಿಯನ್ನು ನೀಡಿದರು.
ಪ್ರಾರಂಭದಲ್ಲಿ ನಝೀರ್ ಮುಸ್ಲಿಯಾರ್ ನಂದಾವರ ಸ್ವಾಗತಿಸಿ ಕೊನೆಯಲ್ಲಿ ನವಾಝ್ ಚಿಕ್ಕಮಗಳೂರು ವಂದಿಸಿದರು.ನಿಝಾಂ ಸಾಗರ್ ಕಾರ್ಯಕ್ರಮ ನಿರೂಪಿಸಿದರು.















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ