ಮಾಣಿ : ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ನಚ್ಚಬೆಟ್ಟು ಗಡಿಯಾರ ಇದರ ನಾಲ್ಕನೇ ಸ್ವಲಾತ್ ವಾರ್ಷಿಕ ಮಹಾ ಸಮ್ಮೇಳನ ಎಪ್ರಿಲ್ 4 ಗುರುವಾರ ಸಂಸ್ಥೆಯ ವಠಾರದಲ್ಲಿ ನಡೆಯಲಿದೆ.ಅಂದು ಬೆಳಿಗ್ಗೆ 8 ಗಂಟೆಯಿಂದ ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ ರಿಫಾಈ ಮೌಲಿದ್,ಫ್ಯಾಮಿಲಿ ಮೀಟ್,ಅಲುಮ್ನಿ ಪ್ರೋಗ್ರಾಂ, ನೂತನ ಕಟ್ಟಡ ಉದ್ಘಾಟನೆ ಮುಂತಾದ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು .
ಮಗ್ರಿಬ್ ನಮಾಝ್ ಬಳಿಕ ನಡೆಯುವ ಸಮರೋಪ ಸಮಾರಂಭದಲ್ಲಿ ಸಂಸ್ಥೆಯ ಸಾರಥಿ ಟಿ ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ,ಹಂಝ ರಿಫಾಈ ತಂಙಳ್, ಮಹ್ಮೂದುಲ್ ಫೈಝಿ ವಾಲೆಮುಂಡೋವು,ಹಂಝ ಸಖಾಫಿ ಬಂಟ್ವಾಳ, ಅಲ್ ಹಾಜ್ ಅಬ್ದುರ್ರಹ್ಮಾನ್ ಮದನಿ ಮೂಳೂರು,ಮುಂತಾದ ಹಲವಾರು ಉಲಮಾ ಉಮರಾ ನೇತಾರರು ಭಾಗವಹಿಸಲಿದ್ದು ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿರುವರು,ಅಸ್ಸಯ್ಯಿದ್ ಬಾಯಾರ್ ತಂಙಳ್ ದುಆ ನೆರವೇರಿಸುವರು ಎಂದು ಮಾಧ್ಯಮ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.