ಮಕ್ಕತುಲ್ ಮುಕರ್ರಮಃ: ಮೂಡುಬಿದ್ರಿ ಅಲ್ ಮಫಾಝ್ ಚ್ಯಾರಿಟೇಬಲ್ ಟ್ರಸ್ಟ್ ಮಕ್ಕತುಲ್ ಮುಕರ್ರಮಃ ಸಮಿತಿಯ ಸಭೆಯು ಅಲ್ ಹಾಜ್ ಪಿ.ಪಿ ಅಹ್ಮದ್ ಸಖಾಫಿ ಕಾಶಿಪಟ್ಣರವರ ಅಧ್ಯಕ್ಷತೆಯಲ್ಲಿ ಜಬಲನ್ನೂರು ಮೂಸಾ ಹಾಜಿಯವರ ನಿವಾಸದಲ್ಲಿ ಜರಗಿತು.
ಕಾರ್ಯಕ್ರಮವನ್ನು ಮಾಣಿ ದಾರುಲ್ ಇರ್ಷಾದ್ ಆರ್ಗನೈಝರ್ ಉಮರ್ ಮದನಿ ಖಾಮಿಲ್ ಸಖಾಫಿ ಪರಪ್ಪು ಉಧ್ಘಾಟಿಸಿ ಮಾತನಾಡಿ, ಸ್ಥಾಪನೆಗಳ ಉದ್ದೇಶ, ಅದಕ್ಕೆ ಬೇಕಾಗಿ ಕಾರ್ಯಾಚರಿಸಿದರೆ ಸಿಗುವ ಫಲವನ್ನು ವಿವರಿಸಿದರು.
ಪಿ.ಪಿ ಉಸ್ತಾದ್ ಮಾತನಾಡಿ ಅಲ್ ಮಫಾಝ್ ಸಂಸ್ಥೆಯಲ್ಲಿ 125 ವಿಧ್ಯಾರ್ಥಿಗಳು ಇದೀಗ ಕಲಿಯುತ್ತಿದ್ದು, ಕಟ್ಟಡಗಳ ನಿರ್ಮಿಸುವ ಬಗ್ಗೆ ಹಾಗೂ ಆ ಊರಿಗೆ ಇಂತಹ ಒಂದು ಸ್ಥಾಪನೆಯ ಅನಿವಾರ್ಯತೆ ಬಗ್ಗೆ ಕಾರ್ಯಕರ್ತರಿಗೆ ಮನದಟ್ಟು ಮಾಡಿದರು.

ನಂತರ ನೂತನ ಸಮಿತಿಯನ್ನು ರಚಿಸಲಾಯ್ತು.
ಗೌರವ ಅಧ್ಯಕ್ಷರಾಗಿ ಉಮರ್ ಮದನಿ ಖಾಮಿಲ್ ಸಖಾಫಿ ಪರಪ್ಪು, ಅಧ್ಯಕ್ಷರಾಗಿ ಮೂಸಾ ಹಾಜಿ ಕಿನ್ಯಾ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಗಂಟಲ್ಕಟ್ಟೆ, ಕೋಶಾಧಿಕಾರಿ ನಝೀರ್ ಮೂಡುಬಿದ್ರಿ, ಉಪಾಧ್ಯಕ್ಷರು ಹನೀಫ್ ಸಖಾಫಿ ಬೊಳ್ಮಾರ್, ಜೊತೆ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಪುಚ್ಚಮೊಗರು. ಕಾರ್ಯಕಾರಿ ಸದಸ್ಯರಾಗಿ ಇಕ್ಬಾಲ್ ಕಕ್ಕಿಂಜೆ, ಶರೀಫ್ ಝೈನಿ ಈಶ್ವರಮಂಗಿಲ, ಕಬೀರ್ ಬಾಜಾರ್, ಶರೀಫ್ ಸೂರಿಂಜೆ, ಬದ್ರುದ್ದೀನ್ ಮಲಾರ್ ರವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮವನ್ನು ಹನೀಫ್ ಸಖಾಫಿ ಬೊಳ್ಮಾರ್ ಸ್ವಾಗತಿಸಿ, ಮೂಸಾ ಹಾಜಿ ಕಿನ್ಯಾ ಕೃತಜ್ಞತೆ ಸಲ್ಲಿಸದರು















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ