ಬಂಟ್ವಾಳ ತಾಲೂಕಿಗೆ ಒಳಪಟ್ಟ ಕಕ್ಯಪದವು ಎಂಬ ಊರು ನಾಡಿನ ಜನತೆಗೆ ಚಿರಪರಿಚಿತವಾಗಿದೆ. ಕಕ್ಯಪದವು ಜಮಾಅತಿಗೆ ಒಳಪಟ್ಟಂತಹ ಜನತೆಗೆ ಉಪಕಾರವಾಗುವ ರೀತಿಯಲ್ಲಿ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದರ ಸಾರಥ್ಯದ ಮರ್ಕಝ್ ನ ಅಧೀನದಲ್ಲಿ ಕಕ್ಯಪದವಿನ ಮಣ್ಣಿನಲ್ಲಿ ನಾಲ್ಕನೇ ಮಸ್ಜಿದ್ ನಿರ್ಮಾಣ ಗೊಂಡು ಇದೀಗ ಉದ್ಘಾಟನಾ ಸಂಭ್ರಮದಲ್ಲಿದೆ, ಅಲ್ ಹಂದುಲಿಲ್ಲಾಹ್..
ನೂತನ ಮಸ್ಜಿದ್ ಉದ್ಘಾಟನಾ ಸಮಾರಂಭ
ಕಕ್ಯಪದವು ಕ್ವಾಟ್ರಸ್ ನಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಮಸ್ಜಿದ್ ನ ಉದ್ಘಾಟನಾ ಸಮಾರಂಭವು ನಾಳೆ (14/12/2018) ಅಸರ್ ನಮಾಝಿನ ಬಳಿಕ ನಡೆಯಲಿದ್ದು ಪ್ರಸ್ತುತ ಕಾರ್ಯಕ್ರಮ ದಲ್ಲಿ ಅಹ್ಲುಬೈತಿನ ಪರಂಪರೆ ಅಸೈಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಗುರುವಾಯನಕೆರೆ ಮಸ್ಜಿದಿನ ವಕ್ಫ್ ನೆರವೇರಿಸುತ್ತಾ ಔಪಚಾರಿಕವಾಗಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣವನ್ನು ಕಕ್ಯಪದವು ಜುಮಾ ಮಸ್ಜಿದ್ ಖತೀಬರಾದ ಬಹು/ ಅಬೂಸ್ವಾಲಿಹ್ ಖಾಮಿಲ್ ಸಖಾಫಿ ಬೆಳ್ಮ ರವರು ಮಾಡಲಿದ್ದಾರೆ, ನಂತರ ಮಗ್ರಿಬ್ ನಮಾಝಿನ ಬಳಿಕ ಕಕ್ಯಪದವು ಜುಮಾ ಮಸ್ಜಿದ್ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ಕಕ್ಯಪದವು ರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಮತ ಪ್ರಭಾಷಣ ನಡೆಯಲಿದ್ದು ಕಾರ್ಯಕ್ರಮದಲ್ಲಿ ಪ್ರಭಾಷಣ ರಂಗದಲ್ಲಿ ತನ್ನ ಅದ್ಭುತವಾದ ವಾಕ್ ಚಾತುರ್ಯದ ಮೂಲಕ ಜನಮನ್ನಣೆ ಗಳಿಸಿದ ಯುವ ಪ್ರಭಾಷಕರು, ಮೂಡಡ್ಕ ಸ್ಥಾಪನೆಯ ಮುದರ್ರಿಸರಾದ ಬಹು/ ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು ರವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಪ್ರಸ್ತುತ ಸಮಾರಂಭದಲ್ಲಿ ಸೈಯ್ಯಿದ್ ಸಾದಾತುಗಳು ಉಲಮಾ ನೇತಾರರು, ಉಮರಾ ನಾಯಕರುಗಳು, ಸಂಘಟನಾ ಕಾರ್ಯಕರ್ತರು ಭಾಗವಹಿಸಲಿದ್ದಾರೆ, ಅದ್ದರಿಂದ ಆ ಸಮಾರಂಭಕ್ಕೆ ತಮಗೆಲ್ಲಾರಿಗೂ ಆದರದ ಸುಸ್ವಾಗತ.















ಇನ್ನಷ್ಟು ಸುದ್ದಿಗಳು
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ
ಮಂಗಳೂರು ಪೊಲೀಸ್ ಕಮಿಷನರ್: ವರ್ಗಾವಣೆ ವಿಚಾರ ಕೈಬಿಡುವಂತೆ ಮನವಿ- ಡಿಜಿಪಿಗೆ ಇಕ್ಬಾಲ್ ಬಾಳಿಲ ಪತ್ರ
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ತೆಗೆಸಿದ ಘಟನೆ: ಸಚಿವ ದಿನೇಶ್ ಗುಂಡೂರಾವ್ ತೀವ್ರ ಖಂಡನೆ
ಇಂಡಿಯನ್ ಗ್ರಾಂಡ್ ಮುಫ್ತಿ ಜಿಲ್ಲೆಗೆ- ಯಶಸ್ವಿಗಾಗಿ ಸಮಾಲೋಚನಾ ಸಭೆ
ಭಾರತವನ್ನು ‘ನರಕ’ ಎಂದ ಟ್ರಂಪ್ ಪೋಸ್ಟ್- ಮೌನಕ್ಕೆ ಶರಣಾದ ವಿದೇಶಾಂಗ ಇಲಾಖೆ
ಅಲ್ ಮದೀನ ಇಂಗ್ಲಿಷ್ ಮೀಡಿಯಂ ಶಾಲೆಗೆ ಶೇ.100 ಫಲಿತಾಂಶ- ನಾಲ್ವರು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ
ಈಶ್ವರಮಂಗಲ ತ್ವೈಬಾ ವಿದ್ಯಾಸಂಸ್ಥೆಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ. 100 ಫಲಿತಾಂಶ- ಅಭೂತಪೂರ್ವ ಸಾಧನೆ